ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ‘ವಚನ ಸಾಹಿತ್ಯ ವಿಶೇಷ ಕೊಡುಗೆ ನೀಡಿದೆ. ವಚನ ಸಾಹಿತ್ಯವು ಹೊಗಳಿಕೆ, ಪಾಂಡಿತ್ಯ ಪ್ರದರ್ಶನ, ಅಕ್ಷರದ ಚಮತ್ಕಾರ ಅಲ್ಲ. ಶರಣರ ಅನುಭವದ ರಸಧಾರೆ; ಶುದ್ಧರಸ ಗಂಗೆ. ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಭಾಗವಾಗದಿದ್ದರೆ ವಿಶ್ವ ಸಾಹಿತ್ಯಕ್ಕೆ ಅಪಾರ ನಷ್ಟ ಉಂಟಾಗುತ್ತಿತ್ತು’ ಎಂದು ಪ್ರತಿಪಾದಿಸಿದರು.