<p><strong>ಬೆಂಗಳೂರು:</strong> ‘ಪವಿತ್ರ ಆರ್ಥಿಕತೆ ಎಂದರೆ ನಿರಂತರತೆ, ಘನತೆಯ ಬದುಕು ಮತ್ತು ಜೀವನೋಪಾಯದ ಮಾರ್ಗ’ ಎಂದು ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಅಭಿಪ್ರಾಯಪಟ್ಟರು.</p>.<p>ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ದಲ್ಲಿ ಗುರುವಾರ ಪಾಲ್ಗೊಂಡು ಅವರು<br />ಮಾತನಾಡಿದರು.</p>.<p>‘ನಮಗೆ ಕೆಲಸ ಬೇಕು, ಅದು ಭೂಮಿಯನ್ನು ನಾಶ ಮಾಡುವಂತದಲ್ಲ. ಭೂಮಿಯನ್ನು ಪುನಶ್ಚೇತನ ಮಾಡುವಂತದ್ದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ನಮ್ಮೊಳಗಿನ ತಪ್ಪು ಕಲ್ಪನೆಗಳು, ವಿರೋಧಾಭಾಸಗಳ ನಡುವೆ ಉದ್ಯೋಗ ಮತ್ತು ಪರಿಸರದ ಬಗೆಗಿನ ಸಮತೋಲನವನ್ನು ಮರೆತು ಮುಂದುವರಿದಿದ್ದೇವೆ. ಮತ್ತೆ ನಾವೆಲ್ಲರೂ ಒಗ್ಗೂಡಿ ಪವಿತ್ರ ಆರ್ಥಿಕತೆಯಿಂದ ನಮ್ಮ ಪವಿತ್ರ ಭೂಮಿಯನ್ನು ಮರಳಿ ಕಟ್ಟಬೇಕಿದೆ’ ಎಂದರು.</p>.<p>‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಿಟ್ಟೆ, ದುಂಬಿ, ಹಕ್ಕಿಗಳು ಸಾಯುತ್ತಿವೆ. ಭೂಮಿಯಲ್ಲಿ ಜಲ ಬತ್ತಿ ಹೋಗುತ್ತಿದೆ. ಇದೆಲ್ಲದರ ಪರಿಣಾಮ ಪರಿಸರ ಅಸಮತೋಲನ ನಮ್ಮನ್ನು ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಉದ್ಯೋಗ ಮತ್ತು ಪರಿಸರವನ್ನು ಜೊತೆಯಲ್ಲೇ ಉಳಿಸಿಕೊಳ್ಳಬೇಕಾದ ಕಾಲವಿದು’ ಎಂದು ಪ್ರತಿಪಾದಿಸಿದರು.</p>.<p>‘ನೆರೆ ಹಾಗೂ ಪ್ರವಾಹಪೀಡಿತ ಜನರ ಧ್ವನಿ ಕೇಳದ ಸರ್ಕಾರಗಳಿಗೆ ಜನರ ಧ್ವನಿ ತಲುಪಿಸುವ ಸಲುವಾಗಿ ಇದೇ 10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪವಿತ್ರ ಆರ್ಥಿಕತೆ ಎಂದರೆ ನಿರಂತರತೆ, ಘನತೆಯ ಬದುಕು ಮತ್ತು ಜೀವನೋಪಾಯದ ಮಾರ್ಗ’ ಎಂದು ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಅಭಿಪ್ರಾಯಪಟ್ಟರು.</p>.<p>ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ದಲ್ಲಿ ಗುರುವಾರ ಪಾಲ್ಗೊಂಡು ಅವರು<br />ಮಾತನಾಡಿದರು.</p>.<p>‘ನಮಗೆ ಕೆಲಸ ಬೇಕು, ಅದು ಭೂಮಿಯನ್ನು ನಾಶ ಮಾಡುವಂತದಲ್ಲ. ಭೂಮಿಯನ್ನು ಪುನಶ್ಚೇತನ ಮಾಡುವಂತದ್ದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ನಮ್ಮೊಳಗಿನ ತಪ್ಪು ಕಲ್ಪನೆಗಳು, ವಿರೋಧಾಭಾಸಗಳ ನಡುವೆ ಉದ್ಯೋಗ ಮತ್ತು ಪರಿಸರದ ಬಗೆಗಿನ ಸಮತೋಲನವನ್ನು ಮರೆತು ಮುಂದುವರಿದಿದ್ದೇವೆ. ಮತ್ತೆ ನಾವೆಲ್ಲರೂ ಒಗ್ಗೂಡಿ ಪವಿತ್ರ ಆರ್ಥಿಕತೆಯಿಂದ ನಮ್ಮ ಪವಿತ್ರ ಭೂಮಿಯನ್ನು ಮರಳಿ ಕಟ್ಟಬೇಕಿದೆ’ ಎಂದರು.</p>.<p>‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಿಟ್ಟೆ, ದುಂಬಿ, ಹಕ್ಕಿಗಳು ಸಾಯುತ್ತಿವೆ. ಭೂಮಿಯಲ್ಲಿ ಜಲ ಬತ್ತಿ ಹೋಗುತ್ತಿದೆ. ಇದೆಲ್ಲದರ ಪರಿಣಾಮ ಪರಿಸರ ಅಸಮತೋಲನ ನಮ್ಮನ್ನು ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಉದ್ಯೋಗ ಮತ್ತು ಪರಿಸರವನ್ನು ಜೊತೆಯಲ್ಲೇ ಉಳಿಸಿಕೊಳ್ಳಬೇಕಾದ ಕಾಲವಿದು’ ಎಂದು ಪ್ರತಿಪಾದಿಸಿದರು.</p>.<p>‘ನೆರೆ ಹಾಗೂ ಪ್ರವಾಹಪೀಡಿತ ಜನರ ಧ್ವನಿ ಕೇಳದ ಸರ್ಕಾರಗಳಿಗೆ ಜನರ ಧ್ವನಿ ತಲುಪಿಸುವ ಸಲುವಾಗಿ ಇದೇ 10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>