‘ಮದುವೆಯಾದ ಮೊದಲನೆ ಸಲವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಾತೀವ್ರಿ. ಹಬ್ಬದ ಸಲುವಾಗಿನೆ ಬಾಗಲಕೋಟೆಯ ಇಳಕಲ್ಲಿನಿಂದ ಬೆಂಗಳೂರಿನ ಅಕ್ಕನ ಮನೆಗೆ ಬಂದೀವಿ’ ಎಂದರು ಇಳಕಲ್ಲಿನ ನಾಗರತ್ನಾ ಮಹಾಂತೇಶ.
‘ಖರೇನ ಭಾಳ ಖುಷಿ ಆಗೇದ್ರಿ. ಮನೆ ಮಂದಿ, ಬಂಧು ಬಾಂಧವರೆಲ್ಲ ಒಟ್ಟಾಗಿ ಖುಷಿಯಿಂದ ಹಬ್ಬ ಆಚರಣೆ ಮಾಡಾಕತ್ತಿವ್ರಿ. ಇರೋ ಬರೋ ಸಂಕಷ್ಟಗಳನ್ನೆಲ್ಲ ಮರೆತು, ಎಲ್ಲರಿಗೂ ಒಳ್ಳೆದಾಗ್ಲಿ ಅನ್ನುವಂಥ ಹಬ್ಬ ಮಾಡೂದ್ರೊಳಗೂ ಖುಷಿ ಅದರ್ರಿ’ ಎಂದು ಹಬ್ಬದ ಸಂತಸವನ್ನು ಹಂಚಿಕೊಂಡರು.