ಕೇಂದ್ರ ಮಾಹಿತಿ ಆಯುಕ್ತ ಉದಯ ಮಹೂರ್ಕರ್ ಹಾಗೂ ಚಿರಾಯು ಪಂಡಿತ್ ಬರೆದಿರುವ ‘ವೀರ್ ಸಾವರ್ಕರ್’ ಇಂಗ್ಲಿಷ್ ಪುಸ್ತಕವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಬೊಮ್ಮಾಯಿ, ‘ಜಗತ್ತಿನ ಕೆಲ ಧರ್ಮಗಳು ಹಿಂಸೆಯಿಂದಲೇ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರೆ ಹಿಂದೂ ಧರ್ಮ ಮಾತ್ರ ಇವತ್ತಿನ ಜಾಗತೀಕರಣ, ಖಾಸಗೀಕರಣದ ಯುಗದಲ್ಲೂ ಅಂತಃಕರಣದ ಸಂಸ್ಕೃತಿಯ ಆಧಾರದಲ್ಲಿ ಮುನ್ನಡೆದಿದೆ’ ಎಂದರು.