ವೀರಭದ್ರಸ್ವಾಮಿ ದೇವರನ್ನು ಹೊತ್ತ ರಥವನ್ನು ಭಕ್ತರು ಎಳೆದು ಧನ್ಯತಾ ಭಾವ ತೋರಿದರು. ವೀರಭದ್ರನ ಕುಣಿತ, ಡೊಳ್ಳು ಕುಣಿತ, ತಮಟೆ, ನಗಾರಿ, ವಾದ್ಯಮೇಳದೊಂದಿಗೆ ನಡೆದ ಜನಪದ ಉತ್ಸವದಲ್ಲಿ ವಯೋ ಭೇದವಿಲ್ಲದೆ ಎಲ್ಲರೂ ಕುಣಿದು ಕುಪ್ಪಳಿಸಿದರು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಹೋಮ-ಹವನ, ವಿಶೇಷ ಪೂಜೆಗಳು ನೆರವೇರಿದವು.