ಬೆಂಗಳೂರು: ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಆದೇಶಿಸಿದ್ಧಾರೆ.
ಚುನಾವಣೆಯು ಮುಕ್ತ, ನಿಷ್ಪಕ್ಷಪಾತವಾಗಿ ನಡೆಯಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತ ಎಣಿಕೆ ದಿನದಂದು ಶುಷ್ಕ ದಿನ ಘೋಷಿಸಲಾಗಿದೆ.
ಜೂನ್ 1ರ ಸಂಜೆ 4ರಿಂದ ಜೂನ್ 3ರ ಸಂಜೆ 4 ಗಂಟೆವರೆಗೆ ಹಾಗೂ ಮತ ಎಣಕೆ ದಿನವಾದ ಜೂನ್ 6ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12 ರವರೆಗೆ ಮದ್ಯ, ಇತರೆ ಮಾದಕ ಬಳಕೆ ಮಾರಾಟ, ಸಂಗ್ರಹಣೆ ನಿಷೇಧಿಸಲಾಗಿದೆ. ವೈನ್ ಶಾಪ್, ಬಾರ್, ಹೋಟೆಲ್, ರೆಸ್ಟೊರೆಂಟ್ಗಳನ್ನು ಅಂದು ಮುಚ್ಚುವಂತೆ ಆದೇಶಿಸಲಾಗಿದೆ.