ಬಾಲ್ಯದಿಂದಲೇ ತಮ್ಮದೇ ಆದ ವಿಭಿನ್ನ ಹೋರಾಟ ಹಾಗೂ ಬರಹಗಳಿಂದ ಸ್ವಾತಂತ್ರ್ಯ ಕಿಡಿಯನ್ನು ಹೊತ್ತಿಸಿದ್ದ ಸಾವರ್ಕರ್ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ವಿವಿಧ ಜಾತಿಗಳಿಂದ, ಸಿಖ್ , ಜೈನ್ ,ಬೌದ್ದ ಧರ್ಮಗಳ ಹೆಸರಿನಲ್ಲಿ ಇಬ್ಭಾಗವಾಗಿದ್ದ ಸಮಾಜವನ್ನು ಹಿಂದುತ್ವದ ಕಲ್ಪನೆಯಡಿ ಒಟ್ಟು ಗೂಡಿಸಿ, ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸುವ ಗುರಿ ಹೊಂದಿದ್ದರು. ಭಾರತ ಒಡೆದವರಿಗೆ, ಒಡೆದು ಆಳುವ ಮನಸ್ಥಿತಿ ಇರುವವರಿಗೆ ಈ ವಿಚಾರಧಾರೆ ಸಹ್ಯವಾಗಲಿಲ್ಲ ಎಂದರು.