<p><strong>ಬೆಂಗಳೂರು:</strong> ರಾಜ್ಯದಲ್ಲೇ ಹಳೆಯ ಕಾರುಗಳಮೊದಲ ಉದ್ಯಾನ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿದ್ದು ಫೆ. 27ರಂದು ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದೆ.</p>.<p>‘ನೂರು ಅಡಿ ಎತ್ತರದವರೆಗೆ ಜೋಡಿಸಿಟ್ಟ ವಿಂಟೇಜ್ ಕಾರುಗಳು ಈ ಪಾರ್ಕ್ನಲ್ಲಿ ಇರಲಿವೆ. 3ಸಾವಿರ ಜನ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರವಿದೆ. ಮಕ್ಕಳಿಗೆ ಆಟವಾಡಲು ಸಮುದ್ರದ ಮರಳಿನ ಸ್ಯಾಂಡ್ಪಿಟ್ ಇಲ್ಲಿದೆ. ಹಕ್ಕಿಗಳ ಕಲವರವ, ಆಮೆಗಳು ಹಾಗೂ ಮೊಲಗಳ ಸದ್ದು ಇಲ್ಲಿ ಆಲಿಸಬಹುದು’ ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ಮೋಹನರಾಜು ಹೇಳಿದರು.</p>.<p>‘ಬಳಕೆಯಾಗದೇ ಇದ್ದ ಜಾಗವನ್ನು ಇಲ್ಲಿ ಸುಂದರವಾಗಿ ರೂಪಿಸಲಾಗಿದೆ. ತೆರೆದ ಜಿಮ್ ಇಲ್ಲಿದೆ. ಶಾಸಕ ಸತೀಶ್ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ಅವರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಆರ್. ಅಶೋಕ, ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭಾಗವಹಿಸಲಿದ್ದಾರೆ ಎಂದರು.</p>.<p>**</p>.<p>* 100 ಅಡಿ ಎತ್ತರದ ವಿಂಟೇಜ್ ಕಾರ್ಗಳ ಕಂಬ</p>.<p>* ಬಯಲು ರಂಗ ಮಂದಿರ</p>.<p>* ಕನ್ನಡ ಅಕ್ಷರಗಳ ಕಾಂಪೌಂಡ್</p>.<p>* ಮೇಕ್ ಇನ್ ಇಂಡಿಯಾ ಕಲಾಕೃತಿಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲೇ ಹಳೆಯ ಕಾರುಗಳಮೊದಲ ಉದ್ಯಾನ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿದ್ದು ಫೆ. 27ರಂದು ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದೆ.</p>.<p>‘ನೂರು ಅಡಿ ಎತ್ತರದವರೆಗೆ ಜೋಡಿಸಿಟ್ಟ ವಿಂಟೇಜ್ ಕಾರುಗಳು ಈ ಪಾರ್ಕ್ನಲ್ಲಿ ಇರಲಿವೆ. 3ಸಾವಿರ ಜನ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರವಿದೆ. ಮಕ್ಕಳಿಗೆ ಆಟವಾಡಲು ಸಮುದ್ರದ ಮರಳಿನ ಸ್ಯಾಂಡ್ಪಿಟ್ ಇಲ್ಲಿದೆ. ಹಕ್ಕಿಗಳ ಕಲವರವ, ಆಮೆಗಳು ಹಾಗೂ ಮೊಲಗಳ ಸದ್ದು ಇಲ್ಲಿ ಆಲಿಸಬಹುದು’ ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ಮೋಹನರಾಜು ಹೇಳಿದರು.</p>.<p>‘ಬಳಕೆಯಾಗದೇ ಇದ್ದ ಜಾಗವನ್ನು ಇಲ್ಲಿ ಸುಂದರವಾಗಿ ರೂಪಿಸಲಾಗಿದೆ. ತೆರೆದ ಜಿಮ್ ಇಲ್ಲಿದೆ. ಶಾಸಕ ಸತೀಶ್ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ಅವರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಆರ್. ಅಶೋಕ, ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭಾಗವಹಿಸಲಿದ್ದಾರೆ ಎಂದರು.</p>.<p>**</p>.<p>* 100 ಅಡಿ ಎತ್ತರದ ವಿಂಟೇಜ್ ಕಾರ್ಗಳ ಕಂಬ</p>.<p>* ಬಯಲು ರಂಗ ಮಂದಿರ</p>.<p>* ಕನ್ನಡ ಅಕ್ಷರಗಳ ಕಾಂಪೌಂಡ್</p>.<p>* ಮೇಕ್ ಇನ್ ಇಂಡಿಯಾ ಕಲಾಕೃತಿಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>