ದಿನ ಭವಿಷ್ಯ: ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು..
Published 14 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒತ್ತಡ ತರುವಂಥ ಕೆಲಸಗಳಿಂದ ದೂರವಿರುವ ಪ್ರಯತ್ನ ಮಾಡಿ. ಸ್ಪರ್ಧೆಯಲ್ಲಿ ಜಯ ಗಳಿಸುವಿರಿ. ಪ್ರಾಮಾಣಿಕವಾಗಿ ಸಂಪಾದನೆ ಮಾಡುತ್ತಿರುವ ನಿಮಗೆ ಶತ್ರುಗಳ ಭಯ ಬೇಡವೆ ಬೇಡ. ರಾತ್ರಿ ವೇಳೆಯ ಪ್ರಯಾಣ ತಡೆಗಟ್ಟಿರಿ.
14 ಆಗಸ್ಟ್ 2025, 23:30 IST
ವೃಷಭ
ಕಾರ್ಯದ ನಿಮಿತ್ತ ಕುಟುಂಬದ ಸದಸ್ಯರನ್ನು ಎದುರು ಹಾಕಿಕೊಳ್ಳಬೇಕಾದ ಪರಿಸ್ಥಿತಿಗಳು ಬರಬಹುದು. ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ. ಕಲಹಗಳಲ್ಲಿ ಮೌನವಾಗಿರಿ.
14 ಆಗಸ್ಟ್ 2025, 23:30 IST
ಮಿಥುನ
ಮನೆಯ ಕಾರ್ಮಿಕರು ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣುವುದು ಸೂಕ್ತಕರವಾದುದು. ನೀವಾಡುವ ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಮಾತನಾಡಿ.
14 ಆಗಸ್ಟ್ 2025, 23:30 IST
ಕರ್ಕಾಟಕ
ಪೊಲೀಸ್ ವಿಭಾಗದಲ್ಲಿದ್ದು, ಮಾಹಿತಿ ಕಲೆ ಹಾಕುವಲ್ಲಿ ವಹಿಸುವ ಮುಂಜಾಗ್ರತಾ ಕ್ರಮ ಸಾಕಾಗದು. ಕೆಲಸದ ಗುಣಮಟ್ಟ ಕಡಿಮೆ ಆಗುತ್ತಿರುವುದಕ್ಕೆ ಕಾರಣ ನಿರಾಸಕ್ತಿಯೇ ಆಗಿರುತ್ತದೆ.
14 ಆಗಸ್ಟ್ 2025, 23:30 IST
ಸಿಂಹ
ಜೀವನದಲ್ಲಿ ನಡೆದ ಹಲವಾರು ಹಾಸ್ಯ ಪ್ರಸಂಗಗಳನ್ನು ಸ್ನೇಹಿತರೊಂದಿಗೆ ನೆನೆಯುವಿರಿ. ನೂತನ ವಾಹನ ಖರೀದಿಸುವ ಯೋಚನೆಯನ್ನು ಮುಂದೂಡಿ. ಲೇವಾದೇವಿ ನಡೆಸುವವರು ಲಾಭ ಹೊಂದುವಿರಿ.
14 ಆಗಸ್ಟ್ 2025, 23:30 IST
ಕನ್ಯಾ
ಚಲನಚಿತ್ರಗಳಲ್ಲಿ ಬರುವ ಸನ್ನಿವೇಶಗಳನ್ನು ನಿಜ ಜೀವನದಲ್ಲಿ ಕಲ್ಪಿಸಿಕೊಳ್ಳಬೇಡಿ. ಯಂತ್ರಗಳ ಕೆಲಸವನ್ನು ಮಾಡುವಾಗ ಅತ್ಯಂತ ಜಾಗರೂಕತೆ ವಹಿಸಿ ನಿರ್ವಹಣೆ ಮಾಡುವುದು ಸೂಕ್ತ.
14 ಆಗಸ್ಟ್ 2025, 23:30 IST
ತುಲಾ
ವಾದ-ವಿವಾದಗಳನ್ನು ಮಾಡಿ ಸಮಯ ಹಾಳು ಮಾಡುವ ಬದಲು ಸಮಾಧಾನದಿಂದ ಕೆಲಸ ಮಾಡಿದಲ್ಲಿ ನಿಧಾನವಾದರೂ ಜಯ ನಿಮ್ಮ ದಾಗುವುದು. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಯತ್ನಿಸುವಿರಿ.
14 ಆಗಸ್ಟ್ 2025, 23:30 IST
ವೃಶ್ಚಿಕ
ವ್ಯಾವಹಾರಿಕ ವಿಷಯದಲ್ಲಿ ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ತಿಳಿಯುವುದು. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ.
14 ಆಗಸ್ಟ್ 2025, 23:30 IST
ಧನು
ಜನರನ್ನು ಬಳಸುವ ಸಲುವಾಗಿ ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು. ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೌದ್ಧಿಕ ಅನಾವರಣಕ್ಕೆ ಹಾದಿ ಸಿಗಲಿದೆ.
14 ಆಗಸ್ಟ್ 2025, 23:30 IST
ಮಕರ
ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ ಹಲವಾರು ಕುಟುಂಬದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ, ದೇವರ ದರ್ಶನದಂಥಕಾರ್ಯಗಳು ನಡೆಯುತ್ತವೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯ.
14 ಆಗಸ್ಟ್ 2025, 23:30 IST
ಕುಂಭ
ಸಾಮಾನ್ಯ ಪ್ರಜೆ ನೀವಾಗಿದ್ದಲ್ಲಿ ರಾಜಕೀಯ ತಿಕ್ಕಾಟಗಳಲ್ಲಿ ಭಾಗವಹಿಸಿ ಅಪರಾಧಿ ಸ್ಥಾನಕ್ಕೆ ತಲುಪದೆ ಇರುವುದು ಸೂಕ್ತಕರ. ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು. ವಸ್ತ್ರ ವ್ಯಾಪಾರದಲ್ಲಿ ಹಿನ್ನಡೆ.
14 ಆಗಸ್ಟ್ 2025, 23:30 IST
ಮೀನ
ಭಾವನೆಗಳಿಗೆ ಬೆಲೆ ಕೊಡದವರ ಎದುರು ನಿಮ್ಮ ದುಃಖಗಳನ್ನು ಹೇಳಿಕೊಳ್ಳುವುದರಿಂದ ಪ್ರಯೊಜನವಿರುವುದಿಲ್ಲ. ಪೂರ್ಣ ಮನಸ್ಸಿನಿಂದ ಮಾಡಿದಂಥ ಕಾರ್ಯಗಳು ಉತ್ತಮ ಫಲ ನೀಡುತ್ತವೆ.
14 ಆಗಸ್ಟ್ 2025, 23:30 IST