‘ರಾಜ್ಯದಲ್ಲಿ ಲುಲುಕಂಪನಿ ₹ 2 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿರುವುದು ಬಹಳ ದೊಡ್ಡ ಬೆಳವಣಿಗೆ,ಇದರಿಂದ ರೈತರು ಬೆಳೆದ ತರಕಾರಿ, ಹಣ್ಣು, ಹಾಲು ಸಾಗಣೆಗೆ ವರದಾನವಾಗಲಿದೆ. ರಾಜ್ಯದಲ್ಲಿ ಹೂಡಿಕೆ ಅವಕಾಶದ ಕುರಿತಂತೆ ನಡೆದ ಸಮಾಲೋಚನೆಯಲ್ಲಿ ನಾವು ಆಹ್ವಾನಿಸಿದ ಎಲ್ಲರೂ ಬಂದಿದ್ದರು. ಈ ಭೇಟಿಯ ಫಲ ಎರಡು ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಆಗುವುದು ನಿಶ್ಚಿತ. ಕೆಲವು ಕಂಪನಿಗಳು ತಮ್ಮ ಕಷ್ಟವನ್ನೂ ಹೇಳಿಕೊಂಡಿವೆ. ಅವುಗಳ ಬಗ್ಗೆ ಚರ್ಚಿಸಿ, ಬಗೆಹರಿಸುವ ಕೆಲಸ ಮಾಡಲಾಗುವುದು’ ಎಂದರು.