<p><strong>ಬೆಂಗಳೂರು</strong>: ವಿಶ್ವ ಕ್ಯಾನ್ಸರ್ ನಿಯಂತ್ರಣ ದಿನಾಚರಣೆಯ ಪ್ರಯುಕ್ತ ‘ಅದ್ವೈಕಾ ಕೇರ್ ಫೌಂಡೇಶನ್’ ವತಿಯಿಂದ ‘ಕ್ಯಾನ್ಸರ್ ವಿರುದ್ಧ ನಡೆಯಿರಿ’ ವಾಕಥಾನ್ ಭಾನುವಾರ ನಡೆಯಿತು.</p>.<p>ವಿಧಾನ ಸೌಧ ಮುಂಭಾಗದಲ್ಲಿ ವಾಕಥಾನ್ ಆರಂಭಗೊಂಡಿತು. ಕೆ.ಆರ್. ಸರ್ಕಲ್, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಕಸ್ತೂರ ಬಾ ರಸ್ತೆ ಮೂಲಕ ಸಾಗಿ ಬಾಲಭವನದಲ್ಲಿ ಕೊನೆಗೊಂಡಿತು.</p>.<p>ವಾಕಥಾನ್ಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ ಸುಧೀಂದ್ರ ಚಾಲನೆ ನೀಡಿ ಮಾತನಾಡಿ, ‘ದೇಶದಲ್ಲಿ ಅತಿಹೆಚ್ಚು ಬಲಿ ಪಡೆಯುತ್ತಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಎರಡನೇ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹೆಮ್ಮಾರಿಯನ್ನು ನಿಯಂತ್ರಿಸಲು ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.</p>.<p>ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ ಚಿಲಕೂರಿ, ಅದ್ವೈಕಾ ಕೇರ್ ಫೌಂಡೇಶನ್ ಸಿಇಒ ರಾಕಶ್ರೀ ವಾರಿಯರ್, ಟ್ರಸ್ಟಿಗಳಾದ ಬಾಲಾ ವಾರಿಯರ್, ಎಲ್ಎನ್ಸಿಎಚ್ ಕೃಷ್ಣವಂಶಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿಶ್ವ ಕ್ಯಾನ್ಸರ್ ನಿಯಂತ್ರಣ ದಿನಾಚರಣೆಯ ಪ್ರಯುಕ್ತ ‘ಅದ್ವೈಕಾ ಕೇರ್ ಫೌಂಡೇಶನ್’ ವತಿಯಿಂದ ‘ಕ್ಯಾನ್ಸರ್ ವಿರುದ್ಧ ನಡೆಯಿರಿ’ ವಾಕಥಾನ್ ಭಾನುವಾರ ನಡೆಯಿತು.</p>.<p>ವಿಧಾನ ಸೌಧ ಮುಂಭಾಗದಲ್ಲಿ ವಾಕಥಾನ್ ಆರಂಭಗೊಂಡಿತು. ಕೆ.ಆರ್. ಸರ್ಕಲ್, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಕಸ್ತೂರ ಬಾ ರಸ್ತೆ ಮೂಲಕ ಸಾಗಿ ಬಾಲಭವನದಲ್ಲಿ ಕೊನೆಗೊಂಡಿತು.</p>.<p>ವಾಕಥಾನ್ಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ ಸುಧೀಂದ್ರ ಚಾಲನೆ ನೀಡಿ ಮಾತನಾಡಿ, ‘ದೇಶದಲ್ಲಿ ಅತಿಹೆಚ್ಚು ಬಲಿ ಪಡೆಯುತ್ತಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಎರಡನೇ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹೆಮ್ಮಾರಿಯನ್ನು ನಿಯಂತ್ರಿಸಲು ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರು.</p>.<p>ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ ಚಿಲಕೂರಿ, ಅದ್ವೈಕಾ ಕೇರ್ ಫೌಂಡೇಶನ್ ಸಿಇಒ ರಾಕಶ್ರೀ ವಾರಿಯರ್, ಟ್ರಸ್ಟಿಗಳಾದ ಬಾಲಾ ವಾರಿಯರ್, ಎಲ್ಎನ್ಸಿಎಚ್ ಕೃಷ್ಣವಂಶಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>