ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಿರೆಯ ಕಿಕ್ ಹೆಚ್ಚಿಸಿದ ಸಂಗೀತ ಸಂಜೆ

ಮೂರು ದಿನಗಳ ವೈನ್ ಮೇಳ ಚಾಲನೆ
Last Updated 2 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ದಿನಗಳಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು,ವಿವಿಧ ಬಗೆಯ ವೈನ್ ಸವಿದ ನಗರದ ಜನತೆ ಸಂಗೀತ ಸಂಜೆಯಲ್ಲಿ ತೇಲಾಡಿದರು.

ಕರ್ನಾಟಕ ವೈನ್‌ ಮಂಡಳಿಯು ಜಯಮಹಲ್ ಆರಮನೆ ಹೋಟೆಲ್ ಆವರಣದಲ್ಲಿ ಆಯೋಜಿಸಿರುವ ಮೇಳವು ವೈನ್‌ ಪ್ರಿಯರಿಗೆ ಮುದ ನೀಡಿತು. ದ್ರಾಕ್ಷಾರಸ ತಯಾರಿಕೆ, ಬಂದವರಿಗೆ ದ್ರಾಕ್ಷಾ ರಸದ ಬಗ್ಗೆ ಮಾಹಿತಿ ನೀಡಲಾಯಿತು.

ಗ್ರೋವರ್, ಬಿಗ್ ಬನ್ಯಾನ್, ಬ್ಲಾಕ್ ಬಕ್, ಮಧುಲೋಕ, ನಿಸರ್ಗ, ಕಾಡು, ಎಲೈಟ್, ಕಿನ್ವಾಹ್, ಸೋಮ ಸೇರಿದಂತೆ ರಾಜ್ಯದ 15 ದ್ರಾಕ್ಷಾರಸ ಮಳಿಗೆಗಳು ಮೇಳದಲ್ಲಿವೆ.

‘ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದೆ. 2007ರಲ್ಲಿ ₹60 ಲಕ್ಷಕ್ಕೆ ಸೀಮಿತವಾಗಿದ್ದ ದ್ರಾಕ್ಷಾರಸ ಉದ್ಯಮ ಇದೀಗ ₹200 ಕೋಟಿಗೆ ತಲುಪಿದೆ. ಇಂತಹ ಉತ್ಸವಗಳಿಗೆ ಸಾರ್ವಜನಿಕರಿಂದ ಮತ್ತಷ್ಟು ಬೆಂಬಲ ಸಿಗಬೇಕು’ ಎಂದುಕರ್ನಾಟಕ ದ್ರಾಕ್ಷಾರಸ ಮಂಡಳಿವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT