‘ತಮಿಳುನಾಡಿನ ಸೈಯದ್ ಖಾದರ್, ಇಬ್ಬರು ಮಹಿಳೆಯರನ್ನು ಕುವೈತ್ಗೆ ಇತ್ತೀಚೆಗಷ್ಟೇ ಕಳುಹಿಸಿದ್ದ. ಅವರಿಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿರುವ ವ್ಯಕ್ತಿಗಳು ನಿತ್ಯವೂ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಗೊತ್ತಾಗಿದೆ. ನೊಂದ ಮಹಿಳೆಯರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸಂಬಂಧಿಕರೇ ಸೈಯದ್ನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ದೂರು ಸಹ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.