ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ, ಆರ್ಥಿಕ ಸಬಲತೆಯಿಂದ ದೇಶದ ಮಹಿಳೆಯರು ಬಲಗೊಳ್ಳುವರು ಎನ್ನುವ ನಂಬಿಕೆ ಇತ್ತು. ಇಂದು ಬಹುತೇಕ ಮಹಿಳೆಯರು ಶಿಕ್ಷಣ, ಆರ್ಥಿಕ ಸಬಲತೆ ಸಾಧಿಸಿದರೂ ದೌರ್ಜನ್ಯಗಳಿಂದ ಮುಕ್ತವಾಗಿಲ್ಲ. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವಷ್ಟು ವಾತಾವರಣವಿಲ್ಲ.ಐಎಎಸ್ ಅಧಿಕಾರಿಗಳೂ, ಮಹಿಳಾ ಪೊಲೀಸರೂ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.