‘ಮಹಮ್ಮದ್ ಘೋರಿ ಮತ್ತು ಮಹಮ್ಮದ್ ಘಜ್ನಿ ದೇಶದ ಮೇಲೆ ನಿರಂತರ ದಾಳಿ ಮಾಡಿ, ಕೆಲವೇ ವರ್ಗದವರು ದೇವಸ್ಥಾನಗಳಲ್ಲಿ ಬಚ್ಚಿಟ್ಟಿದ್ದ ಕಪ್ಪು ಹಣವನ್ನು ದೋಚಿದರು. ಅದಾದ ನಂತರ ನಮ್ಮ ದೇಶವನ್ನು ಸುಮಾರು 300 ವರ್ಷ ಅನಕ್ಷರಸ್ಥ ಗುಲಾಮರು ಆಳಿದ್ದಾರೆ. ಕುತುಬುದ್ದೀನ್ ಐಬಕ್, ಅಲ್ತಮಷ್ ಮತ್ತಿತರರು ಅನಕ್ಷರಸ್ಥರಾಗಿದ್ದರೂ ದೇಶ ನಿರ್ಮಾಣದಲ್ಲಿ ಶ್ರಮಿಸಿದರು. ಔರಂಗಜೇಬ್ ಕುರಾನಿಗೆ ಬದ್ಧನಾಗಿದ್ದ ಚಕ್ರವರ್ತಿಯಾಗಿದ್ದು, ಸಮಾಜವಾದಿಯೂ ಆಗಿದ್ದನು. ಇವನ ಸಮಾಧಿ ಬಹಳ ಸರಳವಾಗಿದೆ. ಈ ಬಗ್ಗೆ ಕಾದಂಬರಿ ಬರೆಯಬೇಕು ಅಂದುಕೊಂಡಿದ್ದೇನೆ’ ಎಂದು ವಿವರಿಸಿದರು.