ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟಕ್ಕೆ ಸಾಹಿತಿಗಳ ಬೆಂಬಲ

Last Updated 27 ಸೆಪ್ಟೆಂಬರ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಭೂಸುಧಾರಣೆ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ರೈತರು, ಕಾರ್ಮಿಕರು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಸಾಹಿತಿಗಳು ಹಾಗೂ ಕಲಾವಿದರುಬೆಂಬಲ ಸೂಚಿಸಿದ್ದಾರೆ.

ಕೆ. ಮರುಳಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ವಿಜಯಾ, ವಸುಂಧರಾ ಭೂಪತಿ, ಬಿ. ಸುರೇಶ್, ಚಿದಂಬರ ರಾವ್ ಜಂಬೆ, ಶೂದ್ರ ಶ್ರೀನಿವಾಸ್, ಕೆ. ನೀಲಾ, ಪ್ರೊ.ಎಲ್.ಎನ್. ಮುಕುಂದರಾಜ್, ಪ್ರೊ.ಎಚ್.ವಿ. ವೇಣುಗೋಪಾಲ್, ಬಿ.ಆರ್. ಮಂಜುನಾಥ್, ಸುರೇಂದ್ರನಾಥ್, ನಟರಾಜ ಹೊನ್ನವಳ್ಳಿ, ಯಶವಂತ್ ಮರೋಳಿ, ಯೋಗೇಶ್ ಮಾಸ್ಟರ್, ವೆಂಕಟೇಶ್ ಪ್ರಸಾದ್, ಜಿ.ಪಿ. ಬಸವರಾಜ್, ಎಂ.ಜಿ. ವೆಂಕಟೇಶ್, ನಾಗೇಶ್ ಅರಳಕುಪ್ಪೆ ಹಾಗೂ ಸುರೇಂದ್ರ ರಾವ್ಅವರು ಪ್ರತಿಭಟನೆಗೆ ಸಹಮತ ಸೂಚಿಸಿದ್ದಾರೆ.

‘ಕೇಂದ್ರ ಸರ್ಕಾರವು ಕೋವಿಡ್ ಪಿಡುಗಿನ ಸಂಕಷ್ಟದಲ್ಲಿ ಕೃಷಿ, ಪರಿಸರ ಮತ್ತು ಕಾರ್ಮಿಕ ಸಂಬಂಧಿ ಕಾನೂನುಗಳಿಗೆ ತಿದ್ದುಪಡಿ ತಂದು, ಸಂಸತ್ತಿನಲ್ಲಿ ತನಗಿರುವ ಬಹುಮತದಿಂದ ಶಾಸನಗಳನ್ನು ರೂಪಿಸುತ್ತಿದೆ. ಇದು ಕಾರ್ಪೊರೇಟ್ ಕಂಪನಿಗಳ ಸಂ‍ಪತ್ತನ್ನು ಇನ್ನಷ್ಟು ಹೆಚ್ಚಿಸುವ ಹುನ್ನಾರವಾಗಿದೆ. ಇದನ್ನು ಮನಗಂಡ ರೈತರು ಹಾಗೂ ಕಾರ್ಮಿಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜನತೆಯ ಮೇಲೆ ದಯೆ ದಾಕ್ಷಿಣ್ಯವಿಲ್ಲದೆ ದಮನಕಾರಿ ನೀತಿಗಳನ್ನು ಶಾಸನಗಳಾಗಿ ರೂಪಿಸುತ್ತಿವೆ’ ಎಂದು ತಿಳಿಸಿದ್ದಾರೆ.

‘ರೈತರು ಹಾಗೂ ಕಾರ್ಮಿಕರ ಹೋರಾಟಗಳನ್ನು ಬೆಂಬಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ತೀರ್ಮಾನಗಳನ್ನು ವಿರೋಧಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT