ಲೇಖಕ ಎನ್. ಸತ್ಯಪ್ರಕಾಶ್, ‘ಮೈಸೂರು ಒಡೆಯರ ಪರಂಪರೆಯ ಸಮಸ್ತ ವಿವರಗಳು, ಇತಿಹಾಸ, ಕಲೆ ಸಾಹಿತ್ಯ ಸಂಗೀತದ ಎಲ್ಲ ಆಯಾಮಗಳನ್ನು ಈ ಕೃತಿ ಒಳಗೊಂಡಿದೆ. ಮೈಸೂರು ಸಂಸ್ಥಾನವನ್ನು ಆಳಿದ ರಾಜರ ಬಗ್ಗೆ ಮಾಹಿತಿ ಇದೆ. ರಾಜಕೀಯ ಇತಿಹಾಸದ ಜತೆಗೆ ಒಡೆಯರ ಕಾಲದ ಸಾಂಸ್ಕೃತಿಕ ವೈಭವದ ಬಗ್ಗೆ ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದು ತಿಳಿಸಿದರು.