<p><strong>ಬೆಂಗಳೂರು:</strong> ’ಸಚಿವ ಸಂಪುಟ ವಿಸ್ತರಣೆಯಾಗುವ ಪ್ರತಿ ಸಲವೂ ಯಾವ ರಾಜಕಾರಣಿ ಸಹ ಯುವಜನ ಮತ್ತು ಕ್ರೀಡಾ ಇಲಾಖೆಯ ಜವಾಬ್ಧಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಇದು, ಈ ಸಂಪುಟ ವಿಸ್ತರಣೆಯಲ್ಲೂ ಪುನರಾವರ್ತನೆಯಾಗಿದೆ’ ಎಂದು ಹಿರಿಯ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.</p>.<p>ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ಹಾಗೂ ಲಲನಾ ಮಹಿಳಾ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಜವನರ ಹಕ್ಕುಗಳ ಯುವಾಂದೋಲನ’ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.</p>.<p>‘ಯುವಜನರು ದೇಶದ ಸಂಪತ್ತು’ ಎಂಬ ವಾಕ್ಯವನ್ನು ರಾಜಕಾರಣಿಗಳು ಹೆಚ್ಚಾಗಿ ಬಳಸಿ, ಅದಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಯುವಜನರು ನಿಜವಾಗಿಯೂ ಮಹತ್ವದ ಸಂಪತ್ತು ಎಂಬ ಅರಿವು ಇದ್ದಿದ್ದರೆ, ಯುವಜನ ಖಾತೆಗಾಗಿ ಮುಗಿಬೀಳಬೇಕಿತ್ತು. ವಾಕ್ಯಗಳು ಕೇವಲ ಭಾಷಣಕ್ಕೆ ಸೀಮಿತವಾಗಿರುವುದರಿಂದ ರಾಜ್ಯದ ಯುವ ಸಂಪನ್ಮೂಲ ಕಡೆಗಣಿಸಲ್ಪಟ್ಟಿದೆ’ ಎಂದರು.</p>.<p>‘ರಾಜಕಾರಣಿಗಳುಯುವಜನರನ್ನು ಕೇವಲ ದುಡಿಯುವ ಕೈಗಳನ್ನಾಗಿ ನೋಡಿದರೆ ಸಾಲದು. ಅವರಿಗೆ ಮಿಡಿಯುವ ಹೃದಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿನ ಶಿಕ್ಷಣವೂ ಯುವವಿದ್ಯಾರ್ಥಿಗಳನ್ನು ಉತ್ಪಾದನಾ ಯಂತ್ರಗಳನ್ನಾಗಿ ಸಿದ್ಧಪಡಿಸುತ್ತಿದೆ’ ಎಂದು ಹೇಳಿದರು.</p>.<p>ಯುವಾಂದೋಲನದ ಕಾರ್ಯಕರ್ತೆ ಪೂಜಾ ನಾರಾಯಣ, ‘ಯುವಜನರ ಸಬಲೀಕರಣ ಇಲಾಖೆ ಮೂಲಕ ಕೇವಲ ಕ್ರೀಡಾ ಸಾಮಗ್ರಿ ಹಂಚಿದರೆ ಸಾಲದು. ಯುವಜನರಿಗಾಗಿ ನಿಗಮ ಸ್ಥಾಪಿಸುವುದಾಗಿ 2013ರಲ್ಲೇ ಬಿಜೆಪಿ ಹೇಳಿತ್ತು. ಆ ಮಾತಿನಂತೆ ಈಗ ನಡೆದುಕೊಳ್ಳಲಿ. ಯುವ ನೀತಿ ಜಾರಿಗೆ ತಂದು ಯುವಜನರ ಹಕ್ಕುಗಳನ್ನು ಘೊಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ದಿಲೀಪ್, ಅವಿನಾಶ್ ಅವರು ಸಂವಾದ ನಡೆಸಿದರು.ಆರ್.ಸಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಕುಲಗೋಡು, ಉಪನ್ಯಾಸಕರಾದ ಸಂಚಿತಾ ಭೋಪಯ್ಯ, ಪ್ರೇಮಾವತಿ , ಲಕ್ಷ್ಮಿ, ಸಂವಾದ ಯುವಜನ ಕಾರ್ಯಕರ್ತರಾದ ಶ್ರೀಕಾಂತ ರಾಮಕ್ಕ, ಜ್ಯೋತಿ, ಹನುಮಂತ ಹಾಲಿಗೇರಿ ಹಾಗೂ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ’ಸಚಿವ ಸಂಪುಟ ವಿಸ್ತರಣೆಯಾಗುವ ಪ್ರತಿ ಸಲವೂ ಯಾವ ರಾಜಕಾರಣಿ ಸಹ ಯುವಜನ ಮತ್ತು ಕ್ರೀಡಾ ಇಲಾಖೆಯ ಜವಾಬ್ಧಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಇದು, ಈ ಸಂಪುಟ ವಿಸ್ತರಣೆಯಲ್ಲೂ ಪುನರಾವರ್ತನೆಯಾಗಿದೆ’ ಎಂದು ಹಿರಿಯ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.</p>.<p>ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ಹಾಗೂ ಲಲನಾ ಮಹಿಳಾ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಜವನರ ಹಕ್ಕುಗಳ ಯುವಾಂದೋಲನ’ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.</p>.<p>‘ಯುವಜನರು ದೇಶದ ಸಂಪತ್ತು’ ಎಂಬ ವಾಕ್ಯವನ್ನು ರಾಜಕಾರಣಿಗಳು ಹೆಚ್ಚಾಗಿ ಬಳಸಿ, ಅದಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಯುವಜನರು ನಿಜವಾಗಿಯೂ ಮಹತ್ವದ ಸಂಪತ್ತು ಎಂಬ ಅರಿವು ಇದ್ದಿದ್ದರೆ, ಯುವಜನ ಖಾತೆಗಾಗಿ ಮುಗಿಬೀಳಬೇಕಿತ್ತು. ವಾಕ್ಯಗಳು ಕೇವಲ ಭಾಷಣಕ್ಕೆ ಸೀಮಿತವಾಗಿರುವುದರಿಂದ ರಾಜ್ಯದ ಯುವ ಸಂಪನ್ಮೂಲ ಕಡೆಗಣಿಸಲ್ಪಟ್ಟಿದೆ’ ಎಂದರು.</p>.<p>‘ರಾಜಕಾರಣಿಗಳುಯುವಜನರನ್ನು ಕೇವಲ ದುಡಿಯುವ ಕೈಗಳನ್ನಾಗಿ ನೋಡಿದರೆ ಸಾಲದು. ಅವರಿಗೆ ಮಿಡಿಯುವ ಹೃದಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿನ ಶಿಕ್ಷಣವೂ ಯುವವಿದ್ಯಾರ್ಥಿಗಳನ್ನು ಉತ್ಪಾದನಾ ಯಂತ್ರಗಳನ್ನಾಗಿ ಸಿದ್ಧಪಡಿಸುತ್ತಿದೆ’ ಎಂದು ಹೇಳಿದರು.</p>.<p>ಯುವಾಂದೋಲನದ ಕಾರ್ಯಕರ್ತೆ ಪೂಜಾ ನಾರಾಯಣ, ‘ಯುವಜನರ ಸಬಲೀಕರಣ ಇಲಾಖೆ ಮೂಲಕ ಕೇವಲ ಕ್ರೀಡಾ ಸಾಮಗ್ರಿ ಹಂಚಿದರೆ ಸಾಲದು. ಯುವಜನರಿಗಾಗಿ ನಿಗಮ ಸ್ಥಾಪಿಸುವುದಾಗಿ 2013ರಲ್ಲೇ ಬಿಜೆಪಿ ಹೇಳಿತ್ತು. ಆ ಮಾತಿನಂತೆ ಈಗ ನಡೆದುಕೊಳ್ಳಲಿ. ಯುವ ನೀತಿ ಜಾರಿಗೆ ತಂದು ಯುವಜನರ ಹಕ್ಕುಗಳನ್ನು ಘೊಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ದಿಲೀಪ್, ಅವಿನಾಶ್ ಅವರು ಸಂವಾದ ನಡೆಸಿದರು.ಆರ್.ಸಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಕುಲಗೋಡು, ಉಪನ್ಯಾಸಕರಾದ ಸಂಚಿತಾ ಭೋಪಯ್ಯ, ಪ್ರೇಮಾವತಿ , ಲಕ್ಷ್ಮಿ, ಸಂವಾದ ಯುವಜನ ಕಾರ್ಯಕರ್ತರಾದ ಶ್ರೀಕಾಂತ ರಾಮಕ್ಕ, ಜ್ಯೋತಿ, ಹನುಮಂತ ಹಾಲಿಗೇರಿ ಹಾಗೂ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>