<p><strong>ಬೆಂಗಳೂರು:</strong> `ಯಾವುದೋ ಒಂದು ಧರ್ಮಕ್ಕೆ ಉರ್ದು ಭಾಷೆಯನ್ನು ಸಂಕುಚಿತಗೊಳಿಸುವುದು ಸರಿಯಲ್ಲ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಉರ್ದು ಭಾಷೆ ಬಗ್ಗೆ ಇರುವ ತಾತ್ಸಾರ ಮನೋಭಾವ ತೊಡೆದು ಹಾಕಿ, ಕಡ್ಡಾಯ ಕಲಿಕೆಗೆ ಒತ್ತು ನೀಡಬೇಕು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮನವಿ ಮಾಡಿದರು.</p>.<p>ಕರ್ನಾಟಕ ಉರ್ದು ಅಕಾಡೆಮಿಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ `ಉರ್ದು ಕಥೆ ಮತ್ತು ಕವಿತೆ~ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> `ಉರ್ದು ಭಾಷೆಯ ಜನ್ಮ ಸ್ಥಳ ಭಾರತ. ರಾಜಕೀಯ ಲಾಭಕ್ಕಾಗಿ ಈ ಭಾಷೆಯನ್ನು ಕೇವಲ ಮುಸ್ಲಿಂ ಸಮುದಾಯಕ್ಕೆ ಸಂಕುಚಿತಗೊಳಿಸುತ್ತಿರುವುದು ನಿಜಕ್ಕೂ ಖೇದನೀಯ~ ಎಂದ ಅವರು, `ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಉರ್ದು ಭಾಷೆಯ ಕೊಡುಗೆ ಅಪಾರ. ಲೇಖಕರು, ಕವಿಗಳು, ಸಾಹಿತಿಗಳು ಉರ್ದು ಭಾಷೆಯಲ್ಲಿ ಉತ್ತಮ ಕೃತಿಗಳನ್ನು ರಚಿಸಿದ್ದು, ಉರ್ದು ಭಾಷೆ ಇಡೀ ದೇಶದ ಆಸ್ತಿಯಾಗಬೇಕೇ ಹೊರತು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು.</p>.<p>`ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಬೆಳೆಯುವ ಸಂಕುಚಿತ ಮನೋಭಾವವು ದೇಶದ ಅಭಿವೃದ್ಧಿಗೆ ಮಾರಕ. ಇದರಿಂದ ಜನರು ಹೊರ ಬಂದು ಸಂಪದ್ಭರಿತ ಸಾಹಿತ್ಯದ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಪಣ ತೊಡಬೇಕು~ ಎಂದು ಸಲಹೆ ನೀಡಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಪ್ರಭುದೇವ್, `ಬೆಂಗಳೂರು ವಿ.ವಿಯ ಉರ್ದು ವಿಭಾಗದ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿ.ವಿ.ಯು ಇಕ್ಬಾಲ್ ಮತ್ತು ಗಾಲಿಬ್ ಕವಿಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಚರ್ಚಿಸಿ ಅಂತಿಮರೂಪ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಭರವಸೆ ನೀಡಿದರು.</p>.<p>ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಇತರರು ಉಪಸ್ಥಿತರಿದ್ದರು.</p>.<p><strong>`ಬಹಿಷ್ಕಾರ ಸಲ್ಲ~</strong></p>.<p>`ವಕೀಲರು ತಮ್ಮ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಹರಿಸಿಕೊಳ್ಳಬೇಕೆ ವಿನಃ ಕೋರ್ಟ್ನ ಕಲಾಪಗಳನ್ನು ಬಹಿಷ್ಕರಿಸುವುದು ಸರಿಯಲ್ಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆಕ್ಷೇಪಿಸಿದರು.</p>.<p>ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಪ್ರತಿಭಟನೆಯ ನೆಪದಲ್ಲಿ ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಬಾರದು. ಈ ಬಗ್ಗೆ ನಾನು ಸಾಕಷ್ಟು ಬಾರಿ ಸಲಹೆ ನೀಡಿದ್ದರೂ ಅದನ್ನು ಪರಿಗಣಿಸಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಯಾವುದೋ ಒಂದು ಧರ್ಮಕ್ಕೆ ಉರ್ದು ಭಾಷೆಯನ್ನು ಸಂಕುಚಿತಗೊಳಿಸುವುದು ಸರಿಯಲ್ಲ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಉರ್ದು ಭಾಷೆ ಬಗ್ಗೆ ಇರುವ ತಾತ್ಸಾರ ಮನೋಭಾವ ತೊಡೆದು ಹಾಕಿ, ಕಡ್ಡಾಯ ಕಲಿಕೆಗೆ ಒತ್ತು ನೀಡಬೇಕು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮನವಿ ಮಾಡಿದರು.</p>.<p>ಕರ್ನಾಟಕ ಉರ್ದು ಅಕಾಡೆಮಿಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ `ಉರ್ದು ಕಥೆ ಮತ್ತು ಕವಿತೆ~ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> `ಉರ್ದು ಭಾಷೆಯ ಜನ್ಮ ಸ್ಥಳ ಭಾರತ. ರಾಜಕೀಯ ಲಾಭಕ್ಕಾಗಿ ಈ ಭಾಷೆಯನ್ನು ಕೇವಲ ಮುಸ್ಲಿಂ ಸಮುದಾಯಕ್ಕೆ ಸಂಕುಚಿತಗೊಳಿಸುತ್ತಿರುವುದು ನಿಜಕ್ಕೂ ಖೇದನೀಯ~ ಎಂದ ಅವರು, `ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಉರ್ದು ಭಾಷೆಯ ಕೊಡುಗೆ ಅಪಾರ. ಲೇಖಕರು, ಕವಿಗಳು, ಸಾಹಿತಿಗಳು ಉರ್ದು ಭಾಷೆಯಲ್ಲಿ ಉತ್ತಮ ಕೃತಿಗಳನ್ನು ರಚಿಸಿದ್ದು, ಉರ್ದು ಭಾಷೆ ಇಡೀ ದೇಶದ ಆಸ್ತಿಯಾಗಬೇಕೇ ಹೊರತು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು.</p>.<p>`ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಬೆಳೆಯುವ ಸಂಕುಚಿತ ಮನೋಭಾವವು ದೇಶದ ಅಭಿವೃದ್ಧಿಗೆ ಮಾರಕ. ಇದರಿಂದ ಜನರು ಹೊರ ಬಂದು ಸಂಪದ್ಭರಿತ ಸಾಹಿತ್ಯದ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಪಣ ತೊಡಬೇಕು~ ಎಂದು ಸಲಹೆ ನೀಡಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಪ್ರಭುದೇವ್, `ಬೆಂಗಳೂರು ವಿ.ವಿಯ ಉರ್ದು ವಿಭಾಗದ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿ.ವಿ.ಯು ಇಕ್ಬಾಲ್ ಮತ್ತು ಗಾಲಿಬ್ ಕವಿಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಚರ್ಚಿಸಿ ಅಂತಿಮರೂಪ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಭರವಸೆ ನೀಡಿದರು.</p>.<p>ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಇತರರು ಉಪಸ್ಥಿತರಿದ್ದರು.</p>.<p><strong>`ಬಹಿಷ್ಕಾರ ಸಲ್ಲ~</strong></p>.<p>`ವಕೀಲರು ತಮ್ಮ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಹರಿಸಿಕೊಳ್ಳಬೇಕೆ ವಿನಃ ಕೋರ್ಟ್ನ ಕಲಾಪಗಳನ್ನು ಬಹಿಷ್ಕರಿಸುವುದು ಸರಿಯಲ್ಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆಕ್ಷೇಪಿಸಿದರು.</p>.<p>ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಪ್ರತಿಭಟನೆಯ ನೆಪದಲ್ಲಿ ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಬಾರದು. ಈ ಬಗ್ಗೆ ನಾನು ಸಾಕಷ್ಟು ಬಾರಿ ಸಲಹೆ ನೀಡಿದ್ದರೂ ಅದನ್ನು ಪರಿಗಣಿಸಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>