<p><strong>ಬೆಂಗಳೂರು:</strong> ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ನಗರದ ಕಬ್ಬನ್ ಉದ್ಯಾನದ ಕೇಂದ್ರ ಭಾಗದಲ್ಲಿ ನಿರ್ಮಾಣಗೊಂಡ ಸಂಗೀತ ವೇದಿಕೆ (ಬ್ಯಾಂಡ್ ಸ್ಟಾಂಡ್) ಹೊಸ ರೂಪ ಪಡೆಯಲು ಸಜ್ಜಾಗಿದೆ!<br /> <br /> 192.19 ಎಕರೆ ವಿಸ್ತ್ರೀರ್ಣವಿರುವ ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ ಸಸ್ಯ ಸಂಪತ್ತಿನ ನಡುವೆ ಬಣ್ಣ ಕಳೆದುಕೊಂಡು ನಿಂತಿರುವ ಈ ವೇದಿಕೆಯ ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ವಿಶೇಷ ಮೆರುಗು ನೀಡಲು ತೋಟಗಾರಿಕಾ ಇಲಾಖೆ ಈಗ ಮುಂದಾಗಿದೆ.<br /> <br /> ಉದ್ದೇಶ ಈಡೇರಿತ್ತೇ?: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೀರ್ಘಾವಧಿಯ ಆಡಳಿತದ ನೆನಪಿನಾರ್ಥ ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು 1917ರಲ್ಲಿ ಈ ಸಂಗೀತ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಪ್ರಕೃತಿಯ ಆಸ್ವಾದನೆಯೊಂದಿಗೆ ಪ್ರವಾಸಿಗರು ಹಾಗೂ ನಾಗರಿಕರಿಗೆ ಸಂಗೀತವನ್ನು ಉಣಬಡಿಸುವ ಸಲುವಾಗಿ ಈ ವೇದಿಕೆ ಬಳಕೆಯಾಗಿತ್ತು.<br /> <br /> ವಾರಾಂತ್ಯಗಳಲ್ಲಿ ಸಂಗೀತ ಗೋಷ್ಠಿಗಳು ನಡೆದಿದ್ದವು. ಅಲ್ಲದೇ ಬ್ರಿಟಿಷ್ ನೌಕಾ ಪಡೆಯಿಂದಲೂ ಸಂಗೀತ ಕಾರ್ಯಕ್ರಮ ಜರುಗಿತ್ತು.<br /> ಕ್ರಮೇಣ ಉದ್ಯಾನದಲ್ಲಿದ್ದ ಸಂಗೀತ ವೇದಿಕೆಯು ಕೇವಲ ಪಾಳು ಬಿದ್ದ ಕಟ್ಟಡವಾಗಿ ರೂಪುಗೊಂಡಿತ್ತು. ಯಾವುದೇ ಸಂಗೀತ ಕಾರ್ಯಕ್ರಮಗಳು ನಡೆಯಲಿಲ್ಲ. ಇದಕ್ಕೆ ಮರು ರೂಪ ನೀಡಿ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಹೆಜ್ಜೆ ಇಟ್ಟಿದೆ.<br /> <br /> ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೆ.ಎನ್.ಸುರೇಶ್ ಚಂದ್ರ, `ಶತಮಾನ ಪೂರೈಕೆಗೆ ವರ್ಷಗಳ ಎಣಿಕೆಯಲ್ಲಿರುವ ಈ ವೇದಿಕೆಯ ಗೋಡೆಗಳು, ಮೇಲ್ಛಾವಣಿಗಳು ಕುಸಿದು ಬೀಳುವ ಹಂತದಲ್ಲಿರುವುದರಿಂದ ಇದನ್ನು ದುರಸ್ತಿಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು.</p>.<p>ಐತಿಹಾಸಿಕ ಮಹತ್ವವಿರುವುದರಿಂದ ಕಟ್ಟಡದ ರಚನೆಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ' ಎಂದು ತಿಳಿಸಿದರು.<br /> <br /> `ಕಟ್ಟಡದ ಸೌಂದರ್ಯಕ್ಕೆ ಕಿಂಚಿತ್ತು ಧಕ್ಕೆ ಬಾರದಂತೆ , ವಿನ್ಯಾಸದಲ್ಲಿ ಬದಲಾವಣೆಯಾಗದಂತೆ ಜಾಗ್ರತೆ ವಹಿಸಲಾಗುವುದು. ಈ ವೇದಿಕೆಯ ಸುತ್ತಮುತ್ತ ನೂರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಕುಳಿತುಕೊಳ್ಳಲು ಸ್ಥಳಾವಕಾಶವಿದೆ. ಇದರಿಂದ ಸಂಗೀತಾಸಕ್ತರನ್ನು ಪೋತ್ಸಾಹಿಸಿದಂತಾಗುತ್ತದೆ' ಎಂದು ಮಾಹಿತಿ ನೀಡಿದರು.<br /> <br /> `ತೋಟಗಾರಿಕಾ ಇಲಾಖೆಯ 11 ಲಕ್ಷ ರೂಪಾಯಿ ಠೇವಣಿ ಲೋಕೋಪಯೋಗಿ ಇಲಾಖೆಯಲ್ಲಿದೆ. ಈಗಾಗಲೇ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆದಿದ್ದು, ಇನ್ನೆರಡು ತಿಂಗಳುಗಳಲ್ಲಿ ಕಾಮಗಾರಿ ಮುಗಿಯುವ ಭರವಸೆಯಿದೆ. ನಂತರದ ದಿನಗಳಲ್ಲಿ ಎಂದಿನಂತೆ ಸಂಗೀತ ಕಾರ್ಯಕ್ರಮಗಳು ಜರುಗಲಿವೆ' ಎಂದು ಹೇಳಿದರು.<br /> <br /> ಬರಲಿದೆ ಸಂಗೀತ ಕಾರಂಜಿ!: ಕರ್ನಾಟಕ ರಾಜ್ಯ ಟೆನಿಸ್ ಅಸೋಸಿಯೇಷನ್ ಜಂಕ್ಷನ್ನಲ್ಲಿ ನಿರ್ಮಾಣಗೊಂಡ ಮೊದಲ ಕಾರಂಜಿಯು ಸಂಗೀತ ಕಾರಂಜಿಯಾಗಿ ಮಾರ್ಪಡಾಗಲಿದೆ.</p>.<p>ಈ ಕಾರಂಜಿಯು 1935-36ರಲ್ಲಿ ನೇಪಾಳದ ರಾಣಿ ನೀಡಿದ್ದ ಐದು ಸಾವಿರ ರೂಪಾಯಿಯ ದೇಣಿಗೆ ಹಣದಲ್ಲಿ ನಿರ್ಮಾಣಗೊಂಡಿತ್ತು. ತಾಂತ್ರಿಕ ದೋಷದಿಂದ ಕಾರ್ಯಸ್ಥಗಿತವಾಗಿದ್ದ ಈ ಕಾರಂಜಿಯನ್ನು ಸಂಗೀತ ಕಾರಂಜಿ ಮಾಡುವ ಉದ್ದೇಶ ಇಲಾಖೆಯ ಮುಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ನಗರದ ಕಬ್ಬನ್ ಉದ್ಯಾನದ ಕೇಂದ್ರ ಭಾಗದಲ್ಲಿ ನಿರ್ಮಾಣಗೊಂಡ ಸಂಗೀತ ವೇದಿಕೆ (ಬ್ಯಾಂಡ್ ಸ್ಟಾಂಡ್) ಹೊಸ ರೂಪ ಪಡೆಯಲು ಸಜ್ಜಾಗಿದೆ!<br /> <br /> 192.19 ಎಕರೆ ವಿಸ್ತ್ರೀರ್ಣವಿರುವ ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ ಸಸ್ಯ ಸಂಪತ್ತಿನ ನಡುವೆ ಬಣ್ಣ ಕಳೆದುಕೊಂಡು ನಿಂತಿರುವ ಈ ವೇದಿಕೆಯ ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ವಿಶೇಷ ಮೆರುಗು ನೀಡಲು ತೋಟಗಾರಿಕಾ ಇಲಾಖೆ ಈಗ ಮುಂದಾಗಿದೆ.<br /> <br /> ಉದ್ದೇಶ ಈಡೇರಿತ್ತೇ?: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೀರ್ಘಾವಧಿಯ ಆಡಳಿತದ ನೆನಪಿನಾರ್ಥ ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು 1917ರಲ್ಲಿ ಈ ಸಂಗೀತ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಪ್ರಕೃತಿಯ ಆಸ್ವಾದನೆಯೊಂದಿಗೆ ಪ್ರವಾಸಿಗರು ಹಾಗೂ ನಾಗರಿಕರಿಗೆ ಸಂಗೀತವನ್ನು ಉಣಬಡಿಸುವ ಸಲುವಾಗಿ ಈ ವೇದಿಕೆ ಬಳಕೆಯಾಗಿತ್ತು.<br /> <br /> ವಾರಾಂತ್ಯಗಳಲ್ಲಿ ಸಂಗೀತ ಗೋಷ್ಠಿಗಳು ನಡೆದಿದ್ದವು. ಅಲ್ಲದೇ ಬ್ರಿಟಿಷ್ ನೌಕಾ ಪಡೆಯಿಂದಲೂ ಸಂಗೀತ ಕಾರ್ಯಕ್ರಮ ಜರುಗಿತ್ತು.<br /> ಕ್ರಮೇಣ ಉದ್ಯಾನದಲ್ಲಿದ್ದ ಸಂಗೀತ ವೇದಿಕೆಯು ಕೇವಲ ಪಾಳು ಬಿದ್ದ ಕಟ್ಟಡವಾಗಿ ರೂಪುಗೊಂಡಿತ್ತು. ಯಾವುದೇ ಸಂಗೀತ ಕಾರ್ಯಕ್ರಮಗಳು ನಡೆಯಲಿಲ್ಲ. ಇದಕ್ಕೆ ಮರು ರೂಪ ನೀಡಿ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಹೆಜ್ಜೆ ಇಟ್ಟಿದೆ.<br /> <br /> ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೆ.ಎನ್.ಸುರೇಶ್ ಚಂದ್ರ, `ಶತಮಾನ ಪೂರೈಕೆಗೆ ವರ್ಷಗಳ ಎಣಿಕೆಯಲ್ಲಿರುವ ಈ ವೇದಿಕೆಯ ಗೋಡೆಗಳು, ಮೇಲ್ಛಾವಣಿಗಳು ಕುಸಿದು ಬೀಳುವ ಹಂತದಲ್ಲಿರುವುದರಿಂದ ಇದನ್ನು ದುರಸ್ತಿಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು.</p>.<p>ಐತಿಹಾಸಿಕ ಮಹತ್ವವಿರುವುದರಿಂದ ಕಟ್ಟಡದ ರಚನೆಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ' ಎಂದು ತಿಳಿಸಿದರು.<br /> <br /> `ಕಟ್ಟಡದ ಸೌಂದರ್ಯಕ್ಕೆ ಕಿಂಚಿತ್ತು ಧಕ್ಕೆ ಬಾರದಂತೆ , ವಿನ್ಯಾಸದಲ್ಲಿ ಬದಲಾವಣೆಯಾಗದಂತೆ ಜಾಗ್ರತೆ ವಹಿಸಲಾಗುವುದು. ಈ ವೇದಿಕೆಯ ಸುತ್ತಮುತ್ತ ನೂರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಕುಳಿತುಕೊಳ್ಳಲು ಸ್ಥಳಾವಕಾಶವಿದೆ. ಇದರಿಂದ ಸಂಗೀತಾಸಕ್ತರನ್ನು ಪೋತ್ಸಾಹಿಸಿದಂತಾಗುತ್ತದೆ' ಎಂದು ಮಾಹಿತಿ ನೀಡಿದರು.<br /> <br /> `ತೋಟಗಾರಿಕಾ ಇಲಾಖೆಯ 11 ಲಕ್ಷ ರೂಪಾಯಿ ಠೇವಣಿ ಲೋಕೋಪಯೋಗಿ ಇಲಾಖೆಯಲ್ಲಿದೆ. ಈಗಾಗಲೇ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆದಿದ್ದು, ಇನ್ನೆರಡು ತಿಂಗಳುಗಳಲ್ಲಿ ಕಾಮಗಾರಿ ಮುಗಿಯುವ ಭರವಸೆಯಿದೆ. ನಂತರದ ದಿನಗಳಲ್ಲಿ ಎಂದಿನಂತೆ ಸಂಗೀತ ಕಾರ್ಯಕ್ರಮಗಳು ಜರುಗಲಿವೆ' ಎಂದು ಹೇಳಿದರು.<br /> <br /> ಬರಲಿದೆ ಸಂಗೀತ ಕಾರಂಜಿ!: ಕರ್ನಾಟಕ ರಾಜ್ಯ ಟೆನಿಸ್ ಅಸೋಸಿಯೇಷನ್ ಜಂಕ್ಷನ್ನಲ್ಲಿ ನಿರ್ಮಾಣಗೊಂಡ ಮೊದಲ ಕಾರಂಜಿಯು ಸಂಗೀತ ಕಾರಂಜಿಯಾಗಿ ಮಾರ್ಪಡಾಗಲಿದೆ.</p>.<p>ಈ ಕಾರಂಜಿಯು 1935-36ರಲ್ಲಿ ನೇಪಾಳದ ರಾಣಿ ನೀಡಿದ್ದ ಐದು ಸಾವಿರ ರೂಪಾಯಿಯ ದೇಣಿಗೆ ಹಣದಲ್ಲಿ ನಿರ್ಮಾಣಗೊಂಡಿತ್ತು. ತಾಂತ್ರಿಕ ದೋಷದಿಂದ ಕಾರ್ಯಸ್ಥಗಿತವಾಗಿದ್ದ ಈ ಕಾರಂಜಿಯನ್ನು ಸಂಗೀತ ಕಾರಂಜಿ ಮಾಡುವ ಉದ್ದೇಶ ಇಲಾಖೆಯ ಮುಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>