<p><strong>ಬೆಂಗಳೂರು: ‘</strong>2014 ರ ಲೋಕಸಭೆ ಚುನಾವಣೆಗೂ ಮುನ್ನ ಗಾಂಧಿವಾದ ಬರಬೇಕೆ ಹೊರತು ಮೋದಿವಾದ ಬೇಡ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಹೇಳಿದರು.<br /> <br /> ಐಎಸ್ಐ ಸಭಾಂಗಣದಲ್ಲಿ ಈಚೆಗೆ ನಡೆದ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.<br /> ‘ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ನರೇಂದ್ರ ಮೋದಿ ಅವರಂತಹವರು ಅಭಿವೃದ್ಧಿ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಆದರೆ, ಅವರು ಬಯಸುವ ಅಭಿವೃದ್ಧಿಯಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊರಗಿಟ್ಟಿದ್ದಾರೆ. ಇವುಗಳನ್ನೆಲ್ಲ ಮೂಲ ಬೇರಿನಿಂದ ಕೊಲ್ಲುವ ಯತ್ನವನ್ನು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ದೇಶದಲ್ಲಿ ಪ್ರಗತಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡಲಾಗುತ್ತಿದೆ. ನಮ್ಮ ಅನಾದಿ ಕಾಲದಿಂದ ಬಂದ ಸರಳ ಜೀವನವನ್ನು ಆಮಿಷ, ಆಸೆಗಳನ್ನು ಒಡ್ಡಿ ಸಾಯಿಸಲಾಗುತ್ತಿದೆ’ ಎಂದರು.<br /> <br /> ‘ಈಗ ಹೊಸ ರೀತಿಯ ಬ್ರಾಹ್ಮಣವಾದ ಬೆಳೆಯುತ್ತಿದೆ. ಅಂದರೆ, ಎಲ್ಲ ಕೆಲಸವನ್ನು ರೈತರು, ದಲಿತರು, ಕೊಳೆಗೇರಿ ಜನರು ಮಾಡಬೇಕು. ಇದರಲ್ಲಿ ಸಮಾನತೆಯನ್ನು ಪ್ರಚುರಪಡಿಸಲಾಗುತ್ತಿದೆ. ಅವರನ್ನು ಸಮಗ್ರತೆಯ ಹೆಸರಿನಲ್ಲಿ ಪ್ರತ್ಯೇಕಿಸ ಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ಹಿಂದುಳಿದ ಜನಾಂಗಕ್ಕೆ ಸೇರಿದವರು, ಅಲ್ಪಸಂಖ್ಯಾತರು, ರೈತರು, ಕೂಲಿಕಾರ್ಮಿಕರು ಕೆಲಸ ಮಾಡುವವರು. ಆದರೆ, ಬೆಳವಣಿಗೆಯಲ್ಲಿ , ಸಂಪತ್ತಿನಲ್ಲಿ ಅವರ ಪಾಲನ್ನು ನಿರಾಕರಿಸಲಾಗುತ್ತಿದೆ.<br /> <br /> ಬಹುಪಾಲು ಜನರು ಸಾಮಾಜಿಕ ಭದ್ರತೆಯಿಲ್ಲದೆ ಬದುಕುತ್ತಿದ್ದಾರೆ. ದೇಶದಲ್ಲಿ ಶೇ 96 ರಷ್ಟು ಜನ ಕೆಲಸ ಮಾಡುವವರಿದ್ದರೆ, ಶೇ 4 ರಷ್ಟು ಜನರು ಮಾತ್ರ ಅದನ್ನು ಅನುಭೋಗಿಸುತ್ತಿದ್ದಾರೆ’ ಎಂದು ಹೇಳಿದರು.<br /> <br /> ‘ಗೋದಾಮುಗಳಲ್ಲಿ ಅಕ್ಕಿ ತುಂಬಿ ತುಳುಕುತ್ತಿದೆ. ಆದರೆ, ಬಡವರ ಹೊಟ್ಟೆಗಳು ಖಾಲಿಯಿವೆ. ಇದು ಪ್ರಜಾಪ್ರಭುತ್ವದ ತತ್ವಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಆದರೂ, ಯಾವುದನ್ನೂ ಪ್ರಶ್ನಿಸಬಾರದು, ಎಲ್ಲವನ್ನೂ ಕಣ್ಣು, ಕಿವಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು’ ಎಂದು ವ್ಯಂಗ್ಯವಾಡಿದರು.<br /> <br /> ‘ನಗರದ ಅಭಿವೃದ್ಧಿಗಾಗಿ ಕೊಳೆಗೇರಿ ಮುಕ್ತ ನಗರವನ್ನು ನಿರ್ಮಾಣ ಮಾಡುತ್ತೇವೆ ಎಂಬ ಘೋಷಣೆಗಳಿವೆ. ಆದರೆ, ಕೊಳೆಗೇರಿ ಜನರನ್ನು ಒಕ್ಕಲೆಬ್ಬಿಸಿದರೆ, ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವರ ಎಣಿಕೆ. ಆದರೆ, ಅವರ ಜೀವನಕ್ಕೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸುವ ಯಾವ ವ್ಯವಸ್ಥೆಯೂ ಇಲ್ಲ’ ಎಂದು ನುಡಿದರು.<br /> <br /> ಬೆಂಗಳೂರು ಆರ್ಚ್ ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಸ್, ‘ಭಾರತೀಯ ಸಾಮಾಜಿಕ ಸಂಸ್ಥೆಯು (ಐಎಸ್ಐ) ಹಲವಾರು ವರ್ಷಗಳಿಂದ ಬಡವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರ ಏಳಿಗೆಗಾಗಿ ಶ್ರಮಿಸುತ್ತಿದೆ. ಅವರಿಗೆ ಸಮಾಜದಲ್ಲಿ ಒಂದು ಗೌರವಯುತವಾದ ಸ್ಥಾನವನ್ನು ಕಲ್ಪಿಸಿಕೊಡಲು ಹೋರಾಟ ನಡೆಸುತ್ತಿದೆ’ ಎಂದರು.<br /> <br /> ‘ಇಂದಿನ ಆಧುನಿಕ ಕಾಲದಲ್ಲಿಯೂ ಜಾತೀಯತೆ, ಧರ್ಮಗಳ ನಡುವಿನ ಕಲಹಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.<br /> ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಬೆಂಗಳೂರು ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಸ್ ಅವರನ್ನು ಮಕ್ಕಳು ತಮಟೆ ಬಾರಿಸುವ ಮೂಲಕ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>2014 ರ ಲೋಕಸಭೆ ಚುನಾವಣೆಗೂ ಮುನ್ನ ಗಾಂಧಿವಾದ ಬರಬೇಕೆ ಹೊರತು ಮೋದಿವಾದ ಬೇಡ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಹೇಳಿದರು.<br /> <br /> ಐಎಸ್ಐ ಸಭಾಂಗಣದಲ್ಲಿ ಈಚೆಗೆ ನಡೆದ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.<br /> ‘ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ನರೇಂದ್ರ ಮೋದಿ ಅವರಂತಹವರು ಅಭಿವೃದ್ಧಿ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಆದರೆ, ಅವರು ಬಯಸುವ ಅಭಿವೃದ್ಧಿಯಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊರಗಿಟ್ಟಿದ್ದಾರೆ. ಇವುಗಳನ್ನೆಲ್ಲ ಮೂಲ ಬೇರಿನಿಂದ ಕೊಲ್ಲುವ ಯತ್ನವನ್ನು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ದೇಶದಲ್ಲಿ ಪ್ರಗತಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡಲಾಗುತ್ತಿದೆ. ನಮ್ಮ ಅನಾದಿ ಕಾಲದಿಂದ ಬಂದ ಸರಳ ಜೀವನವನ್ನು ಆಮಿಷ, ಆಸೆಗಳನ್ನು ಒಡ್ಡಿ ಸಾಯಿಸಲಾಗುತ್ತಿದೆ’ ಎಂದರು.<br /> <br /> ‘ಈಗ ಹೊಸ ರೀತಿಯ ಬ್ರಾಹ್ಮಣವಾದ ಬೆಳೆಯುತ್ತಿದೆ. ಅಂದರೆ, ಎಲ್ಲ ಕೆಲಸವನ್ನು ರೈತರು, ದಲಿತರು, ಕೊಳೆಗೇರಿ ಜನರು ಮಾಡಬೇಕು. ಇದರಲ್ಲಿ ಸಮಾನತೆಯನ್ನು ಪ್ರಚುರಪಡಿಸಲಾಗುತ್ತಿದೆ. ಅವರನ್ನು ಸಮಗ್ರತೆಯ ಹೆಸರಿನಲ್ಲಿ ಪ್ರತ್ಯೇಕಿಸ ಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ಹಿಂದುಳಿದ ಜನಾಂಗಕ್ಕೆ ಸೇರಿದವರು, ಅಲ್ಪಸಂಖ್ಯಾತರು, ರೈತರು, ಕೂಲಿಕಾರ್ಮಿಕರು ಕೆಲಸ ಮಾಡುವವರು. ಆದರೆ, ಬೆಳವಣಿಗೆಯಲ್ಲಿ , ಸಂಪತ್ತಿನಲ್ಲಿ ಅವರ ಪಾಲನ್ನು ನಿರಾಕರಿಸಲಾಗುತ್ತಿದೆ.<br /> <br /> ಬಹುಪಾಲು ಜನರು ಸಾಮಾಜಿಕ ಭದ್ರತೆಯಿಲ್ಲದೆ ಬದುಕುತ್ತಿದ್ದಾರೆ. ದೇಶದಲ್ಲಿ ಶೇ 96 ರಷ್ಟು ಜನ ಕೆಲಸ ಮಾಡುವವರಿದ್ದರೆ, ಶೇ 4 ರಷ್ಟು ಜನರು ಮಾತ್ರ ಅದನ್ನು ಅನುಭೋಗಿಸುತ್ತಿದ್ದಾರೆ’ ಎಂದು ಹೇಳಿದರು.<br /> <br /> ‘ಗೋದಾಮುಗಳಲ್ಲಿ ಅಕ್ಕಿ ತುಂಬಿ ತುಳುಕುತ್ತಿದೆ. ಆದರೆ, ಬಡವರ ಹೊಟ್ಟೆಗಳು ಖಾಲಿಯಿವೆ. ಇದು ಪ್ರಜಾಪ್ರಭುತ್ವದ ತತ್ವಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಆದರೂ, ಯಾವುದನ್ನೂ ಪ್ರಶ್ನಿಸಬಾರದು, ಎಲ್ಲವನ್ನೂ ಕಣ್ಣು, ಕಿವಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು’ ಎಂದು ವ್ಯಂಗ್ಯವಾಡಿದರು.<br /> <br /> ‘ನಗರದ ಅಭಿವೃದ್ಧಿಗಾಗಿ ಕೊಳೆಗೇರಿ ಮುಕ್ತ ನಗರವನ್ನು ನಿರ್ಮಾಣ ಮಾಡುತ್ತೇವೆ ಎಂಬ ಘೋಷಣೆಗಳಿವೆ. ಆದರೆ, ಕೊಳೆಗೇರಿ ಜನರನ್ನು ಒಕ್ಕಲೆಬ್ಬಿಸಿದರೆ, ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವರ ಎಣಿಕೆ. ಆದರೆ, ಅವರ ಜೀವನಕ್ಕೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸುವ ಯಾವ ವ್ಯವಸ್ಥೆಯೂ ಇಲ್ಲ’ ಎಂದು ನುಡಿದರು.<br /> <br /> ಬೆಂಗಳೂರು ಆರ್ಚ್ ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಸ್, ‘ಭಾರತೀಯ ಸಾಮಾಜಿಕ ಸಂಸ್ಥೆಯು (ಐಎಸ್ಐ) ಹಲವಾರು ವರ್ಷಗಳಿಂದ ಬಡವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರ ಏಳಿಗೆಗಾಗಿ ಶ್ರಮಿಸುತ್ತಿದೆ. ಅವರಿಗೆ ಸಮಾಜದಲ್ಲಿ ಒಂದು ಗೌರವಯುತವಾದ ಸ್ಥಾನವನ್ನು ಕಲ್ಪಿಸಿಕೊಡಲು ಹೋರಾಟ ನಡೆಸುತ್ತಿದೆ’ ಎಂದರು.<br /> <br /> ‘ಇಂದಿನ ಆಧುನಿಕ ಕಾಲದಲ್ಲಿಯೂ ಜಾತೀಯತೆ, ಧರ್ಮಗಳ ನಡುವಿನ ಕಲಹಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.<br /> ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಬೆಂಗಳೂರು ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಸ್ ಅವರನ್ನು ಮಕ್ಕಳು ತಮಟೆ ಬಾರಿಸುವ ಮೂಲಕ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>