<p><strong>ಬೆಂಗಳೂರು:</strong> `ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ಭಗವದ್ಗೀತೆಯ ಶ್ಲೋಕಗಳನ್ನು ಸರಳ ರೂಪದಲ್ಲಿ ನೀಡುವ ಮೂಲಕ ಕಬ್ಬಿನಾಲೆಯವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ~ ಎಂದು ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಶ್ಲಾಘಿಸಿದರು.<br /> <br /> ಸುಂದರ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಭಗವಂತನ ಭಾವಗೀತೆ~ ಮತ್ತು ಎಸ್.ಎ.ಕೀರ್ತನಾ ಅವರ ಇಂಗ್ಲಿಷ್ ಕಾದಂಬರಿ `ದಿ ಕೆರಿಯಾಡ್ಸ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಭಗವದ್ಗೀತೆಯಲ್ಲಿರುವ ವಿಚಾಧಾರೆಯು ಕಾಲಕ್ಕೆ ಅನುಗುಣವಾಗಿ ಮರುಹುಟ್ಟು ಪಡೆಯಬೇಕು. ಜೀವನ ತತ್ವವನ್ನು ಅದ್ಭುತವಾಗಿ ಬೋಧಿಸುವ ಗೀತೆ ಸಾರವು ಸದಾ ಸಾಹಿತ್ಯಾಸಕ್ತರನ್ನು ಹಿಡಿದಿಡುತ್ತದೆ~ ಎಂದು ಹೇಳಿದರು.<br /> <br /> `ವಯೋಸಹಜ ಕಲ್ಪನೆಯ ಮೂಸೆಯಲ್ಲಿ ಕೀರ್ತನಾ ಅವರ ಕೆರಿಯಾಡ್ಸ್ ಪುಸ್ತಕವು ಅರಳಿದ್ದು, ವಯಸ್ಸಿಗೆ ಮೀರಿದ ಶಬ್ಧ ಭಂಡಾರದ ಬಳಕೆಯಿಂದ ಓದುಗರನ್ನು ಅಚ್ಚರಿಗೊಳಿಸುತ್ತಾರೆ. `ಭಗವಂತನ ಭಾವಗೀತೆ~ ದಾರ್ಶನಿಕ ನೆಲೆಯಲ್ಲಿದ್ದರೆ, ಕೆರಿಯಾಡ್ಸ್ ಕಾಲ್ಪನಿಕವಾಗಿ ಗಟ್ಟಿಗೊಂಡಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, `ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಹದವಾದ ಭಾವ ಮತ್ತು ಕಾವ್ಯದ ಮೂಲಕ ಕಟ್ಟಿಕೊಟ್ಟಿರುವುಅೇ ಒಂದು ವಿಶೇಷ. ರೋಚಕ ಸನ್ನಿವೇಶಗಳನ್ನು ಒಳಗೊಂಡಿರುವ ಕೆರಿಯಾಡ್ಸ್ ಕೂಡ ಹ್ಯಾರಿಪಾಟರ್ನ ಪ್ರಭಾವದಿಂದ ಮುಕ್ತವಾಗಿಲ್ಲವೆಂಬುದು ಸ್ಪಷ್ಟಗೊಳ್ಳುತ್ತದೆ~ ಎಂದರು.<br /> <br /> `13ನೇ ವಯಸ್ಸಿಗೆ ರೋಚಕ ಪಾತ್ರಗಳನ್ನು ಸೃಷ್ಟಿಸಿ, ನಿರೂಪಿಸಿರುವ ಕೀರ್ತನಾ ಅವರದ್ದು ದೈತ್ಯ ಪ್ರತಿಭೆ. ತಮ್ಮ ಕಾದಂಬರಿಯಲ್ಲಿ ಒಳಿತು- ಕೆಡುಕುಗಳ ನಡುವೆ ನಡೆಯುವ ಸಂಘರ್ಷವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ~ ಎಂದು ಅವರು ತಿಳಿಸಿದರು. <br /> <br /> ಇದೇ ಸಂದರ್ಭದಲ್ಲಿ ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಟ ಶ್ರೀಧರ್, ಪ್ರಕಾಶನದ ಗೌರಿ ಸುಂದರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ಭಗವದ್ಗೀತೆಯ ಶ್ಲೋಕಗಳನ್ನು ಸರಳ ರೂಪದಲ್ಲಿ ನೀಡುವ ಮೂಲಕ ಕಬ್ಬಿನಾಲೆಯವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ~ ಎಂದು ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಶ್ಲಾಘಿಸಿದರು.<br /> <br /> ಸುಂದರ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಭಗವಂತನ ಭಾವಗೀತೆ~ ಮತ್ತು ಎಸ್.ಎ.ಕೀರ್ತನಾ ಅವರ ಇಂಗ್ಲಿಷ್ ಕಾದಂಬರಿ `ದಿ ಕೆರಿಯಾಡ್ಸ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಭಗವದ್ಗೀತೆಯಲ್ಲಿರುವ ವಿಚಾಧಾರೆಯು ಕಾಲಕ್ಕೆ ಅನುಗುಣವಾಗಿ ಮರುಹುಟ್ಟು ಪಡೆಯಬೇಕು. ಜೀವನ ತತ್ವವನ್ನು ಅದ್ಭುತವಾಗಿ ಬೋಧಿಸುವ ಗೀತೆ ಸಾರವು ಸದಾ ಸಾಹಿತ್ಯಾಸಕ್ತರನ್ನು ಹಿಡಿದಿಡುತ್ತದೆ~ ಎಂದು ಹೇಳಿದರು.<br /> <br /> `ವಯೋಸಹಜ ಕಲ್ಪನೆಯ ಮೂಸೆಯಲ್ಲಿ ಕೀರ್ತನಾ ಅವರ ಕೆರಿಯಾಡ್ಸ್ ಪುಸ್ತಕವು ಅರಳಿದ್ದು, ವಯಸ್ಸಿಗೆ ಮೀರಿದ ಶಬ್ಧ ಭಂಡಾರದ ಬಳಕೆಯಿಂದ ಓದುಗರನ್ನು ಅಚ್ಚರಿಗೊಳಿಸುತ್ತಾರೆ. `ಭಗವಂತನ ಭಾವಗೀತೆ~ ದಾರ್ಶನಿಕ ನೆಲೆಯಲ್ಲಿದ್ದರೆ, ಕೆರಿಯಾಡ್ಸ್ ಕಾಲ್ಪನಿಕವಾಗಿ ಗಟ್ಟಿಗೊಂಡಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, `ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಹದವಾದ ಭಾವ ಮತ್ತು ಕಾವ್ಯದ ಮೂಲಕ ಕಟ್ಟಿಕೊಟ್ಟಿರುವುಅೇ ಒಂದು ವಿಶೇಷ. ರೋಚಕ ಸನ್ನಿವೇಶಗಳನ್ನು ಒಳಗೊಂಡಿರುವ ಕೆರಿಯಾಡ್ಸ್ ಕೂಡ ಹ್ಯಾರಿಪಾಟರ್ನ ಪ್ರಭಾವದಿಂದ ಮುಕ್ತವಾಗಿಲ್ಲವೆಂಬುದು ಸ್ಪಷ್ಟಗೊಳ್ಳುತ್ತದೆ~ ಎಂದರು.<br /> <br /> `13ನೇ ವಯಸ್ಸಿಗೆ ರೋಚಕ ಪಾತ್ರಗಳನ್ನು ಸೃಷ್ಟಿಸಿ, ನಿರೂಪಿಸಿರುವ ಕೀರ್ತನಾ ಅವರದ್ದು ದೈತ್ಯ ಪ್ರತಿಭೆ. ತಮ್ಮ ಕಾದಂಬರಿಯಲ್ಲಿ ಒಳಿತು- ಕೆಡುಕುಗಳ ನಡುವೆ ನಡೆಯುವ ಸಂಘರ್ಷವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ~ ಎಂದು ಅವರು ತಿಳಿಸಿದರು. <br /> <br /> ಇದೇ ಸಂದರ್ಭದಲ್ಲಿ ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಟ ಶ್ರೀಧರ್, ಪ್ರಕಾಶನದ ಗೌರಿ ಸುಂದರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>