<p><strong>ಮಹದೇವಪುರ:</strong> ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಯ ನಡುವೆ ಮಹದೇವಪುರ ಕ್ಷೇತ್ರದ ವರ್ತೂರು ಕೆರೆಯ ಸುತ್ತಮುತ್ತಲೂ ಪ್ರತಿ ದಿನ ದಟ್ಟ ಮಂಜು ಆವರಿಸುತ್ತಿದ್ದು ಚಳಿಗಾಲದ ಸೌಂದರ್ಯ ಮೈದುಂಬಿ ಮೆರೆಯುತ್ತಿದೆ.<br /> <br /> ಹೊಸ ವರ್ಷದ ಮೊದಲ ದಿನದಿಂದಲೇ ಇನ್ನಷ್ಟು ಮಂಜು ಬೀಳುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ಹಿತ ನೀಡುತ್ತಿದೆ.<br /> ಸಾಮಾನ್ಯವಾಗಿ ಮುಂಜಾನೆ ಎಂಟು- ಒಂಬತ್ತು ಗಂಟೆಯವರೆಗೆ ಮಂಜು ಸುರಿಯುತ್ತಿದೆ. ಹೀಗಾಗಿ ವರ್ತೂರು ಕೆರೆಯ ಕಟ್ಟೆಯ ಮೇಲಿನ ರಸ್ತೆಯ ಮೇಲೆ ವಾಹನ ಸವಾರರು ತಮ್ಮ ವಾಹನಗಳ ಲೈಟ್ ಹಾಕಿಕೊಂಡು ನಿಧಾನವಾಗಿ ಸಂಚರಿಸುವಂತಹ ವಾತಾವರಣ ನಿರ್ಮಾಣವಾಗಿದೆ.<br /> <br /> ದಿನ ಬೆಳಗಾದರೆ ಪಾಲಕರು ಶಾಲೆಗೆ ತಮ್ಮ ಮಕ್ಕಳನ್ನು ಮಂಜಿನ ನಡುವೆ ಸ್ವೆಟರ್ ಹಾಗೂ ಕ್ಯಾಪ್ಗಳನ್ನು ಹಾಕಿಕೊಂಡು ಶಾಲೆಗಳಿಗೆ ಕರೆದುಕೊಂಡು ಹೋಗುವುದು ಸಾಮಾನ್ಯ ಎನಿಸಿದೆ. <br /> <br /> <strong>ಹೂವಿನ ಬೆಳೆಗೆ ತೊಂದರೆ: </strong>ಪ್ರತಿದಿನವೂ ಹೀಗೆ ಮಂಜು ಬೀಳುತ್ತಿದ್ದರೆ ಹೂವು ಬೆಳೆಗಾರರಿಗೆ ತೊಂದರೆಯಾಗಲಿದೆ. ಇದೇ ರೀತಿ ಒಂದೆರಡು ದಿನಗಳ ಕಾಲ ನಿರಂತರವಾಗಿ ಮಂಜು ಸುರಿದರೆ ಹೂವಿನ ಇಳುವರಿ ಕಡಿಮೆಯಾಗುತ್ತದೆ ಎನ್ನುತ್ತಾರೆ ವರ್ತೂರು ಗ್ರಾಮದ ನಿವಾಸಿ ಲಕ್ಷ್ಮಣ ಹುಣಸಾಳ.<br /> <br /> ಅಲ್ಲದೆ, ತರಕಾರಿ ಬೆಳೆಯುವ ಬೆಳೆಗಾರರಿಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗಲಿದೆ. ಇಂತಹ ಮಂಜು ಬೀಳುವುದರಿಂದ ಹುಳುಗಳ ಕಾಟವೂ ಹೆಚ್ಚಾಗಿ ಬೆಳೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆದಷ್ಟು ಬೇಗನೆ ಈ ಮಂಜು ದೂರವಾಗಲಿ ಎಂಬುದು ಅವರ ಅಭಿಪ್ರಾಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇವಪುರ:</strong> ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಯ ನಡುವೆ ಮಹದೇವಪುರ ಕ್ಷೇತ್ರದ ವರ್ತೂರು ಕೆರೆಯ ಸುತ್ತಮುತ್ತಲೂ ಪ್ರತಿ ದಿನ ದಟ್ಟ ಮಂಜು ಆವರಿಸುತ್ತಿದ್ದು ಚಳಿಗಾಲದ ಸೌಂದರ್ಯ ಮೈದುಂಬಿ ಮೆರೆಯುತ್ತಿದೆ.<br /> <br /> ಹೊಸ ವರ್ಷದ ಮೊದಲ ದಿನದಿಂದಲೇ ಇನ್ನಷ್ಟು ಮಂಜು ಬೀಳುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ಹಿತ ನೀಡುತ್ತಿದೆ.<br /> ಸಾಮಾನ್ಯವಾಗಿ ಮುಂಜಾನೆ ಎಂಟು- ಒಂಬತ್ತು ಗಂಟೆಯವರೆಗೆ ಮಂಜು ಸುರಿಯುತ್ತಿದೆ. ಹೀಗಾಗಿ ವರ್ತೂರು ಕೆರೆಯ ಕಟ್ಟೆಯ ಮೇಲಿನ ರಸ್ತೆಯ ಮೇಲೆ ವಾಹನ ಸವಾರರು ತಮ್ಮ ವಾಹನಗಳ ಲೈಟ್ ಹಾಕಿಕೊಂಡು ನಿಧಾನವಾಗಿ ಸಂಚರಿಸುವಂತಹ ವಾತಾವರಣ ನಿರ್ಮಾಣವಾಗಿದೆ.<br /> <br /> ದಿನ ಬೆಳಗಾದರೆ ಪಾಲಕರು ಶಾಲೆಗೆ ತಮ್ಮ ಮಕ್ಕಳನ್ನು ಮಂಜಿನ ನಡುವೆ ಸ್ವೆಟರ್ ಹಾಗೂ ಕ್ಯಾಪ್ಗಳನ್ನು ಹಾಕಿಕೊಂಡು ಶಾಲೆಗಳಿಗೆ ಕರೆದುಕೊಂಡು ಹೋಗುವುದು ಸಾಮಾನ್ಯ ಎನಿಸಿದೆ. <br /> <br /> <strong>ಹೂವಿನ ಬೆಳೆಗೆ ತೊಂದರೆ: </strong>ಪ್ರತಿದಿನವೂ ಹೀಗೆ ಮಂಜು ಬೀಳುತ್ತಿದ್ದರೆ ಹೂವು ಬೆಳೆಗಾರರಿಗೆ ತೊಂದರೆಯಾಗಲಿದೆ. ಇದೇ ರೀತಿ ಒಂದೆರಡು ದಿನಗಳ ಕಾಲ ನಿರಂತರವಾಗಿ ಮಂಜು ಸುರಿದರೆ ಹೂವಿನ ಇಳುವರಿ ಕಡಿಮೆಯಾಗುತ್ತದೆ ಎನ್ನುತ್ತಾರೆ ವರ್ತೂರು ಗ್ರಾಮದ ನಿವಾಸಿ ಲಕ್ಷ್ಮಣ ಹುಣಸಾಳ.<br /> <br /> ಅಲ್ಲದೆ, ತರಕಾರಿ ಬೆಳೆಯುವ ಬೆಳೆಗಾರರಿಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗಲಿದೆ. ಇಂತಹ ಮಂಜು ಬೀಳುವುದರಿಂದ ಹುಳುಗಳ ಕಾಟವೂ ಹೆಚ್ಚಾಗಿ ಬೆಳೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆದಷ್ಟು ಬೇಗನೆ ಈ ಮಂಜು ದೂರವಾಗಲಿ ಎಂಬುದು ಅವರ ಅಭಿಪ್ರಾಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>