<p>ಬೆಂಗಳೂರು: `ನೃತ್ಯ ಮತ್ತು ರಂಗಭೂಮಿಯ ಸಂಗೀತಕ್ಕಿಂತ ಭಿನ್ನವಾದ ಸಂಗೀತ ಸಂಯೋಜನೆ ಯಕ್ಷಗಾನದಲ್ಲಿದೆ' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ದೆಹಲಿ ಮಿತ್ರ ಪ್ರಕಾಶನದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ `ಅಳಿಕೆ ರಾಮಯ್ಯ ರೈ' ಅವರ ಕುರಿತ `ಅಳಿಕೆ' ಕೃತಿ (ಸಂಪಾದಕರು-ಡಾ. ನಿತ್ಯಾನಂದ ಬಿ. ಶೆಟ್ಟಿ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> `ಅಳಿಕೆ ರಾಮಯ್ಯ ರೈ ಅವರು ತೆಂಕುತಿಟ್ಟಿನ ಮೇರು ಕಲಾವಿದ. ಅವರು ಪಾತ್ರವನ್ನು ನಿರ್ವಹಿಸುತ್ತಿದ್ದ ರೀತಿ ಅದ್ಭುತವಾದದ್ದು.<br /> <br /> ಅಭಿನಯದ ಜತೆಗೆ ಸ್ವರದ ಏರಿಳಿತ, ಸಂಭಾಷಣೆಯ ಶೈಲಿ ಎಂತಹವರನ್ನು ಮೋಡಿ ಮಾಡುವಂತದ್ದು. ಅಳಿಕೆಯವರು ಮತ್ತು ಬೋಳಾರ ನಾರಾಯಣ ಶೆಟ್ಟಿ ಅವರ ಮಾತಿನ ಮೋಡಿ ನನ್ನ ಸ್ಮೃತಿಪಟಲದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ' ಎಂದರು. `ಶಿಸ್ತು, ಶ್ರದ್ಧೆ, ಸಂಯಮದಿಂದ ಅವರು ಯಕ್ಷಗಾನವನ್ನು ಆರಾಧಿಸಿದವರು. ಅವರ ಬದುಕು ಇಂದಿನ ಯಕ್ಷಗಾನವನ್ನು ಕಲಿಯುವ ಯುವ ಜನತೆಗೆ ಪಾಠ ಇದ್ದಂತೆ' ಎಂದು ಬಣ್ಣಿಸಿದರು.<br /> <br /> `ಅಳಿಕೆ ಅವರ ವ್ಯಕ್ತಿಚಿತ್ರಣ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಾಟ್ಯಶೈಲಿ, ಮಾತುಗಾರಿಕೆಯನ್ನು ಕೃತಿಯಲ್ಲಿ ಅಳವಡಿಸಿಕೊಂಡಿದ್ದರೆ ಕೃತಿಯ ತೂಕ ಹೆಚ್ಚುತ್ತಿತ್ತು. ಮುಂದಿನ ಕೃತಿಗಳಲ್ಲಿ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಸಲಹೆ ನೀಡಿದರು.<br /> <br /> ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, `ನಾಲ್ಕನೇ ತರಗತಿ ಓದಿದ ಒಬ್ಬ ಸಾಮಾನ್ಯ ವ್ಯಕ್ತಿ ಯಕ್ಷಗಾನದ ಮೇರು ಪ್ರತಿಭೆಯಾಗುತ್ತಾರೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಅವರ ಬದುಕನ್ನು ಆಧರಿಸಿದ `ಅಳಿಕೆ' ಕೃತಿಯು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಪಠ್ಯವಾಗಲು ಯೋಗ್ಯವಾದ ಕೃತಿ' ಎಂದು ಅಭಿಪ್ರಾಯಪಟ್ಟರು.<br /> <br /> `ಯಕ್ಷಗಾನದಲ್ಲಿ ಪ್ರೇಕ್ಷಕರ ಸ್ಪಂದನೆಗೆ ಅನುಗುಣವಾಗಿ ಇಲ್ಲಿ ಪ್ರಸಂಗಗಳು ಬದಲಾಗುತ್ತವೆ. ಇಡೀ ಪ್ರಸಂಗವು ಮೂರನೆ ವ್ಯಕ್ತಿಯಿಂದ ಪ್ರಾರಂಭವಾಗುತ್ತದೆ. ಮೂರನೇ ವ್ಯಕ್ತಿಯಿಂದ ಮೊದಲನೆ ವ್ಯಕ್ತಿಗೆ ಪಾತ್ರ ಬದಲಾಗುವ ಸಂದರ್ಭದಲ್ಲಿ ಯಕ್ಷಗಾನ ಸೃಷ್ಟಿಯಾಗುತ್ತದೆ. ಆ ಪರಿಯೇ ರೋಮಾಂಚನಕಾರಿ' ಎಂದರು.<br /> <br /> ನಟಿ ಜಯಮಾಲಾ, ಕೃತಿಯ ಸಂಪಾದಕ ಡಾ.ನಿತ್ಯಾನಂದ ಬಿ.ಶೆಟ್ಟಿ, ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ನೃತ್ಯ ಮತ್ತು ರಂಗಭೂಮಿಯ ಸಂಗೀತಕ್ಕಿಂತ ಭಿನ್ನವಾದ ಸಂಗೀತ ಸಂಯೋಜನೆ ಯಕ್ಷಗಾನದಲ್ಲಿದೆ' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ದೆಹಲಿ ಮಿತ್ರ ಪ್ರಕಾಶನದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ `ಅಳಿಕೆ ರಾಮಯ್ಯ ರೈ' ಅವರ ಕುರಿತ `ಅಳಿಕೆ' ಕೃತಿ (ಸಂಪಾದಕರು-ಡಾ. ನಿತ್ಯಾನಂದ ಬಿ. ಶೆಟ್ಟಿ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> `ಅಳಿಕೆ ರಾಮಯ್ಯ ರೈ ಅವರು ತೆಂಕುತಿಟ್ಟಿನ ಮೇರು ಕಲಾವಿದ. ಅವರು ಪಾತ್ರವನ್ನು ನಿರ್ವಹಿಸುತ್ತಿದ್ದ ರೀತಿ ಅದ್ಭುತವಾದದ್ದು.<br /> <br /> ಅಭಿನಯದ ಜತೆಗೆ ಸ್ವರದ ಏರಿಳಿತ, ಸಂಭಾಷಣೆಯ ಶೈಲಿ ಎಂತಹವರನ್ನು ಮೋಡಿ ಮಾಡುವಂತದ್ದು. ಅಳಿಕೆಯವರು ಮತ್ತು ಬೋಳಾರ ನಾರಾಯಣ ಶೆಟ್ಟಿ ಅವರ ಮಾತಿನ ಮೋಡಿ ನನ್ನ ಸ್ಮೃತಿಪಟಲದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ' ಎಂದರು. `ಶಿಸ್ತು, ಶ್ರದ್ಧೆ, ಸಂಯಮದಿಂದ ಅವರು ಯಕ್ಷಗಾನವನ್ನು ಆರಾಧಿಸಿದವರು. ಅವರ ಬದುಕು ಇಂದಿನ ಯಕ್ಷಗಾನವನ್ನು ಕಲಿಯುವ ಯುವ ಜನತೆಗೆ ಪಾಠ ಇದ್ದಂತೆ' ಎಂದು ಬಣ್ಣಿಸಿದರು.<br /> <br /> `ಅಳಿಕೆ ಅವರ ವ್ಯಕ್ತಿಚಿತ್ರಣ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಾಟ್ಯಶೈಲಿ, ಮಾತುಗಾರಿಕೆಯನ್ನು ಕೃತಿಯಲ್ಲಿ ಅಳವಡಿಸಿಕೊಂಡಿದ್ದರೆ ಕೃತಿಯ ತೂಕ ಹೆಚ್ಚುತ್ತಿತ್ತು. ಮುಂದಿನ ಕೃತಿಗಳಲ್ಲಿ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಸಲಹೆ ನೀಡಿದರು.<br /> <br /> ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, `ನಾಲ್ಕನೇ ತರಗತಿ ಓದಿದ ಒಬ್ಬ ಸಾಮಾನ್ಯ ವ್ಯಕ್ತಿ ಯಕ್ಷಗಾನದ ಮೇರು ಪ್ರತಿಭೆಯಾಗುತ್ತಾರೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಅವರ ಬದುಕನ್ನು ಆಧರಿಸಿದ `ಅಳಿಕೆ' ಕೃತಿಯು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಪಠ್ಯವಾಗಲು ಯೋಗ್ಯವಾದ ಕೃತಿ' ಎಂದು ಅಭಿಪ್ರಾಯಪಟ್ಟರು.<br /> <br /> `ಯಕ್ಷಗಾನದಲ್ಲಿ ಪ್ರೇಕ್ಷಕರ ಸ್ಪಂದನೆಗೆ ಅನುಗುಣವಾಗಿ ಇಲ್ಲಿ ಪ್ರಸಂಗಗಳು ಬದಲಾಗುತ್ತವೆ. ಇಡೀ ಪ್ರಸಂಗವು ಮೂರನೆ ವ್ಯಕ್ತಿಯಿಂದ ಪ್ರಾರಂಭವಾಗುತ್ತದೆ. ಮೂರನೇ ವ್ಯಕ್ತಿಯಿಂದ ಮೊದಲನೆ ವ್ಯಕ್ತಿಗೆ ಪಾತ್ರ ಬದಲಾಗುವ ಸಂದರ್ಭದಲ್ಲಿ ಯಕ್ಷಗಾನ ಸೃಷ್ಟಿಯಾಗುತ್ತದೆ. ಆ ಪರಿಯೇ ರೋಮಾಂಚನಕಾರಿ' ಎಂದರು.<br /> <br /> ನಟಿ ಜಯಮಾಲಾ, ಕೃತಿಯ ಸಂಪಾದಕ ಡಾ.ನಿತ್ಯಾನಂದ ಬಿ.ಶೆಟ್ಟಿ, ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>