ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಜೀವನ್ ಕೊಲೆ: ಆರೋಪಿಗಳ ಬಂಧನ

Last Updated 24 ಡಿಸೆಂಬರ್ 2013, 19:33 IST
ಅಕ್ಷರ ಗಾತ್ರ

ಬೆಂಗಳೂರು:  ಮೈಸೂರು ರಸ್ತೆಯ ಹಳೇ ಪೆನ್ಶನ್ ಮೊಹಲ್ಲಾದಲ್ಲಿ ಡಿ.21ರಂದು ನಡೆದಿದ್ದ ರೌಡಿ ಜೀವನ್‌ ಅಲಿಯಾಸ್ ಜೀವೇಂದ್ರ (25) ಕೊಲೆ ಪ್ರಕರಣ ಸಂಬಂಧ ಕಾಟನ್‌ಪೇಟೆ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿದ್ದಾರ್ಥನಗರದ ಇಮ್ರಾನ್, ಯಾಸಿನ್, ಅಫ್ರೇಜ್‌, ತನ್ವೀರ್‌ ಹಾಗೂ ತಬ್ರೇಜ್‌ ಬಂಧಿತರು. ಆರೋಪಿಗಳು ಕಳೆದ ವರ್ಷ ಕೊಲೆಯಾದ ಗುಪೇಂದ್ರ ಅಲಿಯಾಸ್ ಗುಪ್ಪನ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಪೇಂದ್ರನನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ ಜೀವನ್‌, 15 ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಆತನ ಬಿಡುಗಡೆಗಾಗಿಯೇ ಕಾಯುತ್ತಿದ್ದ ಗುಪೇಂದ್ರನ ಸಹಚರರು, ಜೀವನ್ ಕೊಲೆಗೆ ಸಂಚು ರೂಪಿಸಿದ್ದರು. ಡಿ.21ರಂದು ಹಳೇ ಪೆನ್ಶನ್‌ ಮೊಹಲ್ಲಾದ ಮಸೀದಿಗೆ ಸಚರರನ್ನು ಭೇಟಿ ಮಾಡಲು ನಡೆದು ಹೋಗತ್ತಿದ್ದ ಜೀವನ್ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಬೆನ್ನ ಟ್ಟಿದ ಆರೋಪಿಗಳು, ಕೈಪಂಪಿಗೆ ತಲೆ ಗುದ್ದಿಸಿ ಕೊಲೆ ಮಾಡಿ ಪರಾರಿ ಯಾಗಿದ್ದರು.

‘ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ಹಂತದಲ್ಲೇ ಗೊತ್ತಾಯಿತು. ಹೀಗಾಗಿ ಗುಪೇಂದ್ರನ ಕೆಲ ಸಹಚರರ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿರುವವರ ಬಗ್ಗೆ ಸುಳಿವು ದೊರೆಯಿತು.

ಇದಕ್ಕೆ ಪೂರಕ ವೆಂಬಂತೆ ಆರೋಪಿಗಳು ಸಹ ಊರು ಬಿಟ್ಟಿದ್ದರು. ಬಳಿಕ ಅವರ ಮೊಬೈಲ್‌ ಕರೆ­ಗಳನ್ನು ಆಧರಿಸಿ ಬಂಧಿಸಿ ಠಾಣೆಗೆ ಕರೆತರ­ಲಾಗಿದೆ. ತಾವೇ ಕೃತ್ಯ ಎಸಗಿದ್ದಾಗಿ ಬಂಧಿ­ತರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT