<p><strong>ಬೆಂಗಳೂರು: </strong>ಆಡುಗೋಡಿಯ ಎಲ್.ಆರ್.ನಗರದಲ್ಲಿ ನಡೆದಿದ್ದ ರೌಡಿ ಎಡ್ವಿನ್ (34) ಕೊಲೆ ಪ್ರಕರಣ ಸಂಬಂಧ, ಆತನ ಪತ್ನಿ ಸುಜಾತಾ ಹಾಗೂ ಆಕೆಯ ಸ್ನೇಹಿತಶ್ರೀಧರ್ ಅಲಿಯಾಸ್ ಅಪ್ಪುನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>‘ಆಡುಗೋಡಿ ಠಾಣೆಯ ರೌಡಿಶೀಟರ್ ಆಗಿದ್ದ ಎಡ್ವಿನ್, ನಿತ್ಯವೂ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಅದರಿಂದ ಬೇಸತ್ತ ಸುಜಾತಾ, ಶ್ರೀಧರ್ ಜೊತೆ ಸೇರಿ ಗುರುವಾರ ರಾತ್ರಿ ಎಡ್ವಿನ್ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.</p>.<p class="Subhead">ಚೆನ್ನೈಗೆ ಬರುವಂತೆ ಒತ್ತಾಯಿಸಿದ್ದ: ‘ಸುಲಿಗೆ, ಕೊಲೆ, ಜೀವ ಬೆದರಿಕೆ ಆರೋಪದಡಿ ಎಡ್ವಿನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಂಧನದ ಭೀತಿಯಲ್ಲಿ ಆತ, ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ನಗರ ತೊರೆದು ಚೆನ್ನೈಗೆ ಹೋಗಿದ್ದ ಎಡ್ವಿನ್, ಅಲ್ಲಿಯೇ ಕೆಲಸ ಮಾಡುತ್ತಿದ್ದ. ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟು ಹೋಗಿದ್ದ. ಗುರುವಾರ ರಾತ್ರಿ ಏಕಾಏಕಿ ನಗರದ ಮನೆಗೆ ಬಂದಿದ್ದ ಆತ,‘ನನ್ನ ಜೊತೆ ನೀನು ಚೆನ್ನೈಗೆ ಬಾ’ ಎಂದು ಪತ್ನಿಯನ್ನು ಒತ್ತಾಯಿಸಿದ್ದ.’</p>.<p>‘ಆತನ ವರ್ತನೆಯಿಂದ ಬೇಸತ್ತಿದ್ದ ಪತ್ನಿ, ಚೆನ್ನೈಗೆ ಹೋಗಲು ನಿರಾಕರಿಸಿದ್ದಳು. ಅದೇ ವಿಚಾರವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಗಲಾಟೆ ಕಂಡು ಶ್ರೀಧರ್ ಮನೆಗೆ ಬಂದಿದ್ದ. ಇಬ್ಬರೂ ಸೇರಿ ಎಡ್ವಿನ್ಗೆ ಚಾಕುವಿನಿಂದ ಚುಚ್ಚಿದ್ದರು. ತೀವ್ರ ರಕ್ತಸ್ರಾವದಿಂದ ರೌಡಿ ಸ್ಥಳದಲ್ಲೇ ಮೃತಪಟ್ಟ. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.</p>.<p class="Subhead">ಹೊಸ ಚಾಕು ಖರೀದಿಸಿದ್ದ: ‘ದಿನಗೂಲಿ ಕೆಲಸ ಮಾಡುವ ಶ್ರೀಧರ್, ಆರು ತಿಂಗಳ ಹಿಂದಷ್ಟೇಎಲ್.ಆರ್.ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ. ಪಕ್ಕದ ಮನೆಯಲ್ಲೇ ಇದ್ದ ಸುಜಾತಾ ಅಲಿಯಾಸ್ ಬುಡ್ಡೊ ಪರಿಚಯವಾಗಿತ್ತು. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು’ ಎಂದು ಹೇಳಿದರು.</p>.<p>‘ಎಡ್ವಿನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಸುಜಾತಾ, ಶ್ರೀಧರ್ಗೆ ನಿತ್ಯವೂ ಹೇಳುತ್ತಿದ್ದಳು. ಕೊಲೆ ಮಾಡಲು ಸಮಯಕ್ಕಾಗಿ ಕಾಯುತ್ತಿದ್ದ ಶ್ರೀಧರ್, ಹೊಸ ಚಾಕು ಖರೀದಿಸಿಟ್ಟುಕೊಂಡಿದ್ದ. ಅದೇ ಚಾಕುವಿನಿಂದಲೇ ಈಗ ರೌಡಿಯನ್ನು ಕೊಲೆ ಮಾಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಆಡುಗೋಡಿಯ ಎಲ್.ಆರ್.ನಗರದಲ್ಲಿ ನಡೆದಿದ್ದ ರೌಡಿ ಎಡ್ವಿನ್ (34) ಕೊಲೆ ಪ್ರಕರಣ ಸಂಬಂಧ, ಆತನ ಪತ್ನಿ ಸುಜಾತಾ ಹಾಗೂ ಆಕೆಯ ಸ್ನೇಹಿತಶ್ರೀಧರ್ ಅಲಿಯಾಸ್ ಅಪ್ಪುನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>‘ಆಡುಗೋಡಿ ಠಾಣೆಯ ರೌಡಿಶೀಟರ್ ಆಗಿದ್ದ ಎಡ್ವಿನ್, ನಿತ್ಯವೂ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಅದರಿಂದ ಬೇಸತ್ತ ಸುಜಾತಾ, ಶ್ರೀಧರ್ ಜೊತೆ ಸೇರಿ ಗುರುವಾರ ರಾತ್ರಿ ಎಡ್ವಿನ್ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.</p>.<p class="Subhead">ಚೆನ್ನೈಗೆ ಬರುವಂತೆ ಒತ್ತಾಯಿಸಿದ್ದ: ‘ಸುಲಿಗೆ, ಕೊಲೆ, ಜೀವ ಬೆದರಿಕೆ ಆರೋಪದಡಿ ಎಡ್ವಿನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಂಧನದ ಭೀತಿಯಲ್ಲಿ ಆತ, ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ನಗರ ತೊರೆದು ಚೆನ್ನೈಗೆ ಹೋಗಿದ್ದ ಎಡ್ವಿನ್, ಅಲ್ಲಿಯೇ ಕೆಲಸ ಮಾಡುತ್ತಿದ್ದ. ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟು ಹೋಗಿದ್ದ. ಗುರುವಾರ ರಾತ್ರಿ ಏಕಾಏಕಿ ನಗರದ ಮನೆಗೆ ಬಂದಿದ್ದ ಆತ,‘ನನ್ನ ಜೊತೆ ನೀನು ಚೆನ್ನೈಗೆ ಬಾ’ ಎಂದು ಪತ್ನಿಯನ್ನು ಒತ್ತಾಯಿಸಿದ್ದ.’</p>.<p>‘ಆತನ ವರ್ತನೆಯಿಂದ ಬೇಸತ್ತಿದ್ದ ಪತ್ನಿ, ಚೆನ್ನೈಗೆ ಹೋಗಲು ನಿರಾಕರಿಸಿದ್ದಳು. ಅದೇ ವಿಚಾರವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಗಲಾಟೆ ಕಂಡು ಶ್ರೀಧರ್ ಮನೆಗೆ ಬಂದಿದ್ದ. ಇಬ್ಬರೂ ಸೇರಿ ಎಡ್ವಿನ್ಗೆ ಚಾಕುವಿನಿಂದ ಚುಚ್ಚಿದ್ದರು. ತೀವ್ರ ರಕ್ತಸ್ರಾವದಿಂದ ರೌಡಿ ಸ್ಥಳದಲ್ಲೇ ಮೃತಪಟ್ಟ. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.</p>.<p class="Subhead">ಹೊಸ ಚಾಕು ಖರೀದಿಸಿದ್ದ: ‘ದಿನಗೂಲಿ ಕೆಲಸ ಮಾಡುವ ಶ್ರೀಧರ್, ಆರು ತಿಂಗಳ ಹಿಂದಷ್ಟೇಎಲ್.ಆರ್.ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ. ಪಕ್ಕದ ಮನೆಯಲ್ಲೇ ಇದ್ದ ಸುಜಾತಾ ಅಲಿಯಾಸ್ ಬುಡ್ಡೊ ಪರಿಚಯವಾಗಿತ್ತು. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು’ ಎಂದು ಹೇಳಿದರು.</p>.<p>‘ಎಡ್ವಿನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಸುಜಾತಾ, ಶ್ರೀಧರ್ಗೆ ನಿತ್ಯವೂ ಹೇಳುತ್ತಿದ್ದಳು. ಕೊಲೆ ಮಾಡಲು ಸಮಯಕ್ಕಾಗಿ ಕಾಯುತ್ತಿದ್ದ ಶ್ರೀಧರ್, ಹೊಸ ಚಾಕು ಖರೀದಿಸಿಟ್ಟುಕೊಂಡಿದ್ದ. ಅದೇ ಚಾಕುವಿನಿಂದಲೇ ಈಗ ರೌಡಿಯನ್ನು ಕೊಲೆ ಮಾಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>