<p><strong>ಬೆಂಗಳೂರು: `</strong>ವನ್ಯಜೀವಿ ಛಾಯಾಗ್ರಹಣ ಸವಾಲಿನ ಕೆಲಸ. ಆದರೆ ಈ ಕಾರ್ಯಕ್ಕೆ ಹೆಚ್ಚಿನ ಮಾನ್ಯತೆ ಸಿಗದಿರುವುದು ದುರದೃಷ್ಟಕರ~ ಎಂದು ವನ್ಯಜೀವಿ ಛಾಯಾಚಿತ್ರಕಾರ ಟಿ.ಎನ್.ಎ. ಪೆರುಮಾಳ್ ವಿಷಾದಿಸಿದರು.<br /> <br /> ಬ್ರಿಟಿಷ್ ಲೈಬ್ರರಿಯು ಕೆನ್ನೆತ್ ಆ್ಯಂಡರ್ಸನ್ ನೇಚರ್ ಸೊಸೈಟಿ ಸಹಯೋಗದಲ್ಲಿ ನಗರದ ಕಸ್ತೂರ ಬಾ ರಸ್ತೆಯಲ್ಲಿನ ಬ್ರಿಟಿಷ್ ಲೈಬ್ರರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ವನ್ಯಜೀವಿ ಛಾಯಾಗ್ರಹಣ~ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.<br /> <br /> `ದಟ್ಟಾರಣ್ಯದಲ್ಲಿ ವನ್ಯಜೀವಿಗಳ ನಿರೀಕ್ಷೆಯಲ್ಲಿ ಹಲವು ದಿನಗಳನ್ನು ಕಳೆಯಬೇಕಾಗುತ್ತದೆ. ಅಸಾಧಾರಣ ತಾಳ್ಮೆ, ಕ್ರಿಯಾಶೀಲ ಚಿಂತನೆ ಹಾಗೂ ತೀವ್ರ ಕುತೂಹಲ ಮನೋಭಾವವಿದ್ದರಷ್ಟೇ ವನ್ಯಜೀವಿ ಛಾಯಾಚಿತ್ರಕಾರರಾಗಲು ಸಾಧ್ಯ~ ಎಂದರು.<br /> <br /> `ವನ್ಯಜೀವಿ ಛಾಯಾಗ್ರಹಣಕ್ಕೆ ಒಂದಷ್ಟು ಸಿದ್ಧತೆ ಬೇಕು. ಆ ಪ್ರದೇಶದಲ್ಲಿರುವ ಪ್ರಾಣಿಗಳ ವಿವರ, ಅವುಗಳ ದೇಹ ಗಾತ್ರ, ಎತ್ತರ, ಉದ್ದ, ದಾಳಿ ನಡೆಸುವ ವಿಧಾನ ಇತರೆ ಅಂಶಗಳನ್ನು ತಿಳಿದುಕೊಂಡಿರಬೇಕು. <br /> <br /> ಬಹಳ ಎಚ್ಚರಿಕೆಯಿಂದ ಕ್ಯಾಮೆರಾ ಕ್ಲಿಕ್ ಮಾಡಬೇಕು. ಅಪರೂಪದ ಸನ್ನಿವೇಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಸೆರೆ ಹಿಡಿಯುವ ಕಲೆ ರೂಢಿಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.<br /> <br /> `ವನ್ಯಜೀವಿ ಛಾಯಾಗ್ರಹಣ ಎಂದರೆ ಹುಲಿ, ಚಿರತೆ, ಆನೆಗಳ ಹಿಂಡು... ಹೀಗೆ ಕ್ರೂರ ಹಾಗೂ ದೈತ್ಯ ಪ್ರಾಣಿಗಳ ಚಿತ್ರ ಸೆರೆ ಹಿಡಿಯುವುದು ಎಂಬಂತಾಗಿದೆ. ಇದು ತಪ್ಪು ಗ್ರಹಿಕೆ. ಅರಣ್ಯದಲ್ಲಿನ ಪ್ರತಿಯೊಂದು ಜೀವಿಯೂ ವನ್ಯಜೀವಿಯೇ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ವನ್ಯಜೀವಿ ಛಾಯಾಗ್ರಹಣ ಸವಾಲಿನ ಕೆಲಸ. ಆದರೆ ಈ ಕಾರ್ಯಕ್ಕೆ ಹೆಚ್ಚಿನ ಮಾನ್ಯತೆ ಸಿಗದಿರುವುದು ದುರದೃಷ್ಟಕರ~ ಎಂದು ವನ್ಯಜೀವಿ ಛಾಯಾಚಿತ್ರಕಾರ ಟಿ.ಎನ್.ಎ. ಪೆರುಮಾಳ್ ವಿಷಾದಿಸಿದರು.<br /> <br /> ಬ್ರಿಟಿಷ್ ಲೈಬ್ರರಿಯು ಕೆನ್ನೆತ್ ಆ್ಯಂಡರ್ಸನ್ ನೇಚರ್ ಸೊಸೈಟಿ ಸಹಯೋಗದಲ್ಲಿ ನಗರದ ಕಸ್ತೂರ ಬಾ ರಸ್ತೆಯಲ್ಲಿನ ಬ್ರಿಟಿಷ್ ಲೈಬ್ರರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ವನ್ಯಜೀವಿ ಛಾಯಾಗ್ರಹಣ~ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.<br /> <br /> `ದಟ್ಟಾರಣ್ಯದಲ್ಲಿ ವನ್ಯಜೀವಿಗಳ ನಿರೀಕ್ಷೆಯಲ್ಲಿ ಹಲವು ದಿನಗಳನ್ನು ಕಳೆಯಬೇಕಾಗುತ್ತದೆ. ಅಸಾಧಾರಣ ತಾಳ್ಮೆ, ಕ್ರಿಯಾಶೀಲ ಚಿಂತನೆ ಹಾಗೂ ತೀವ್ರ ಕುತೂಹಲ ಮನೋಭಾವವಿದ್ದರಷ್ಟೇ ವನ್ಯಜೀವಿ ಛಾಯಾಚಿತ್ರಕಾರರಾಗಲು ಸಾಧ್ಯ~ ಎಂದರು.<br /> <br /> `ವನ್ಯಜೀವಿ ಛಾಯಾಗ್ರಹಣಕ್ಕೆ ಒಂದಷ್ಟು ಸಿದ್ಧತೆ ಬೇಕು. ಆ ಪ್ರದೇಶದಲ್ಲಿರುವ ಪ್ರಾಣಿಗಳ ವಿವರ, ಅವುಗಳ ದೇಹ ಗಾತ್ರ, ಎತ್ತರ, ಉದ್ದ, ದಾಳಿ ನಡೆಸುವ ವಿಧಾನ ಇತರೆ ಅಂಶಗಳನ್ನು ತಿಳಿದುಕೊಂಡಿರಬೇಕು. <br /> <br /> ಬಹಳ ಎಚ್ಚರಿಕೆಯಿಂದ ಕ್ಯಾಮೆರಾ ಕ್ಲಿಕ್ ಮಾಡಬೇಕು. ಅಪರೂಪದ ಸನ್ನಿವೇಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಸೆರೆ ಹಿಡಿಯುವ ಕಲೆ ರೂಢಿಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.<br /> <br /> `ವನ್ಯಜೀವಿ ಛಾಯಾಗ್ರಹಣ ಎಂದರೆ ಹುಲಿ, ಚಿರತೆ, ಆನೆಗಳ ಹಿಂಡು... ಹೀಗೆ ಕ್ರೂರ ಹಾಗೂ ದೈತ್ಯ ಪ್ರಾಣಿಗಳ ಚಿತ್ರ ಸೆರೆ ಹಿಡಿಯುವುದು ಎಂಬಂತಾಗಿದೆ. ಇದು ತಪ್ಪು ಗ್ರಹಿಕೆ. ಅರಣ್ಯದಲ್ಲಿನ ಪ್ರತಿಯೊಂದು ಜೀವಿಯೂ ವನ್ಯಜೀವಿಯೇ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>