<p><strong>ಮಹದೇವಪುರ:</strong> ವರ್ತೂರು ವಾರ್ಡ್ ವ್ಯಾಪ್ತಿಯ ಪಣತ್ತೂರು ಗ್ರಾಮದ ಮುನಿರೆಡ್ಡಿ ಹಾಗೂ ಕಾವೇರಪ್ಪ ಬಡಾವಣೆಯ ಮುಖ್ಯ ರಸ್ತೆಗಳನ್ನು ಒಟ್ಟು 40 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಡಾಂಬರೀಕರಣಗೊಳಿಸಲಾಯಿತು.ಅಲ್ಲದೆ ಎರಡೂ ಬಡಾವಣೆಗಳ ಅಡ್ಡ ರಸ್ತೆಗಳನ್ನು ಸಹ ಡಾಂಬರೀಕರಣಗೊಳಿಸಲಾಯಿತು. ಈ ಕಾಮಗಾರಿಗೆ ವರ್ತೂರು ವಾರ್ಡ್ನ ಬಿಬಿಎಂಪಿ ಸದಸ್ಯ ಎಸ್. ಉದಯಕುಮಾರ್ ಚಾಲನೆ ನೀಡಿದರು.<br /> <br /> ನಂತರ ಮಾತನಾಡಿದ ಅವರು ವಾರ್ಡ್ನ ಎಲ್ಲಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡಂತಹ ಬಡಾವಣೆಗಳಲ್ಲಿನ ರಸ್ತೆಗಳನ್ನು ಸಹ ತಮ್ಮ ಬಿಬಿಎಂಪಿ ಅನುದಾನದಲ್ಲಿ ಡಾಂಬರೀಕರಣಗೊಳಿಸಲಾಗುವುದು. ಹಳ್ಳಿಗಳಂತಿರುವ ಗುಂಜೂರು, ಪಣತ್ತೂರು, ಮಧುರಾನಗರ ಹಾಗೂ ಗುಂಜೂರುಪಾಳ್ಯದಂತಹ ಗ್ರಾಮಗಳಲ್ಲಿನ ರಸ್ತೆಯನ್ನು ಸಹ ನಗರದಲ್ಲಿನ ರಸ್ತೆಗಳಂತೆ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.<br /> <br /> ಮಧುರಾನಗರದಲ್ಲಿನ ಮುಖ್ಯ ರಸ್ತೆಯನ್ನು ಈಗಾಗಲೇ 60 ಲಕ್ಷ ರೂ.ಗಳ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿದೆ. ಬಳಗೆರೆ ಹಾಗೂ ಪಣತ್ತೂರು-ಕಾಡಬೀಸನಹಳ್ಳಿ ಮುಖ್ಯ ರಸ್ತೆಯನ್ನು ಸಹ ಸಂಪೂರ್ಣವಾಗಿ ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇವಪುರ:</strong> ವರ್ತೂರು ವಾರ್ಡ್ ವ್ಯಾಪ್ತಿಯ ಪಣತ್ತೂರು ಗ್ರಾಮದ ಮುನಿರೆಡ್ಡಿ ಹಾಗೂ ಕಾವೇರಪ್ಪ ಬಡಾವಣೆಯ ಮುಖ್ಯ ರಸ್ತೆಗಳನ್ನು ಒಟ್ಟು 40 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಡಾಂಬರೀಕರಣಗೊಳಿಸಲಾಯಿತು.ಅಲ್ಲದೆ ಎರಡೂ ಬಡಾವಣೆಗಳ ಅಡ್ಡ ರಸ್ತೆಗಳನ್ನು ಸಹ ಡಾಂಬರೀಕರಣಗೊಳಿಸಲಾಯಿತು. ಈ ಕಾಮಗಾರಿಗೆ ವರ್ತೂರು ವಾರ್ಡ್ನ ಬಿಬಿಎಂಪಿ ಸದಸ್ಯ ಎಸ್. ಉದಯಕುಮಾರ್ ಚಾಲನೆ ನೀಡಿದರು.<br /> <br /> ನಂತರ ಮಾತನಾಡಿದ ಅವರು ವಾರ್ಡ್ನ ಎಲ್ಲಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡಂತಹ ಬಡಾವಣೆಗಳಲ್ಲಿನ ರಸ್ತೆಗಳನ್ನು ಸಹ ತಮ್ಮ ಬಿಬಿಎಂಪಿ ಅನುದಾನದಲ್ಲಿ ಡಾಂಬರೀಕರಣಗೊಳಿಸಲಾಗುವುದು. ಹಳ್ಳಿಗಳಂತಿರುವ ಗುಂಜೂರು, ಪಣತ್ತೂರು, ಮಧುರಾನಗರ ಹಾಗೂ ಗುಂಜೂರುಪಾಳ್ಯದಂತಹ ಗ್ರಾಮಗಳಲ್ಲಿನ ರಸ್ತೆಯನ್ನು ಸಹ ನಗರದಲ್ಲಿನ ರಸ್ತೆಗಳಂತೆ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.<br /> <br /> ಮಧುರಾನಗರದಲ್ಲಿನ ಮುಖ್ಯ ರಸ್ತೆಯನ್ನು ಈಗಾಗಲೇ 60 ಲಕ್ಷ ರೂ.ಗಳ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿದೆ. ಬಳಗೆರೆ ಹಾಗೂ ಪಣತ್ತೂರು-ಕಾಡಬೀಸನಹಳ್ಳಿ ಮುಖ್ಯ ರಸ್ತೆಯನ್ನು ಸಹ ಸಂಪೂರ್ಣವಾಗಿ ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>