<p>ಬೆಂಗಳೂರು: ಬೃಂದಾವನದಲ್ಲಿನ ರಾಧಾ ಕೃಷ್ಣರ ಪ್ರಣಯ ಲೀಲೆ, ಶೃಂಗಾರ ಕಾವ್ಯದ ಸುಂದರ ಕಥೆ, ಪ್ರೇಮಿಗಳಿಗೆ ರಸರಮ್ಯ ವರ್ಣನಾತೀತ ರಾಗ ಕಾವ್ಯದಂತೆ ಮೂಡಿರುವ ಶಿಲ್ಪ ಕಲಾಕೃತಿಗಳು..<br /> <br /> `ಗೀತಗೋವಿಂದ' ಮಹಾಕಾವ್ಯದಿಂದ ಆಯ್ಕೆ ಮಾಡಿ, ಮರದ ಮಾಧ್ಯಮದಲ್ಲಿ ಸಾರುವ ರಾಧಾ ಕೃಷ್ಣರ ಪ್ರಣಯ ಕ್ರೀಡೆಗಳು ಮರದ ಹದಿನಾಲ್ಕು ಉಬ್ಬುಶಿಲ್ಪ ರೂಪದಲ್ಲಿ ಅಭಿವ್ಯಕ್ತಿಗೊಂಡಿವೆ.<br /> <br /> ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಸ್ತೂರ ಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ `ಗೀತ ಗೋವಿಂದ' ಮರದ 14 ಉಬ್ಬು ಶಿಲ್ಪಗಳ ಪ್ರದರ್ಶನದಲ್ಲಿ ಮನಸೂರೆಗೊಳ್ಳುವ ಕಲಾಕೃತಿಗಳಿವು.<br /> <br /> ಇತ್ತೀಚೆಗೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ `ಸಾಂಪ್ರದಾಯಿಕ ಕಲೆ ಉಳಿಸಲು ಸರ್ಕಾರ ಬದ್ಧವಾಗಿದೆ. ಸಾಂಪ್ರದಾಯಿಕ ಕಲೆಗಳಿಗೆ ಅಗತ್ಯವಾದ ಉತ್ತೇಜನವನ್ನು ಸರ್ಕಾರ ನೀಡುತ್ತದೆ' ಎಂದು ಭರವಸೆ ನೀಡಿದರು.<br /> <br /> ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ.ಜ್ಞಾನಾನಂದ ಅವರು, `ಶಿಲ್ಪಕಲಾ ಅಕಾಡೆಮಿಯು ಸರ್ಕಾರದ ಸಂಸ್ಥೆಯಾದರೂ ಇಂದು ಪ್ರೋತ್ಸಾಹವಿಲ್ಲದೆ ನಶಿಸುವ ಹಂತದಲ್ಲಿದೆ. ಸರ್ಕಾರ ಸಂಪ್ರದಾಯ ಶಿಲ್ಪದ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಮಕಾಲೀನ ಶಾಲೆಗೆ ಸಂಬಂಧಪಟ್ಟ ಶಿಲ್ಪ ಶಾಲೆಗಳನ್ನು ತೆರೆಯುತ್ತಿದೆ' ಎಂದು ದೂರಿದರು.<br /> <br /> `ಇಂದಿನ ಸಾಂಪ್ರದಾಯಿಕ ಶಿಲ್ಪಿಗೆ ಯಾವುದೇ ಪ್ರತಿಫಲವೇ ಇಲ್ಲ. ದಕ್ಷಿಣ ಭಾರತದಲ್ಲಿ ಕೇವಲ 4,500 ಶಿಲೆ ಮತ್ತು ಲೋಹ ಶಿಲ್ಪಿಗಳಿದ್ದಾರೆ. ನಾವೀಗ ಸಾಂಪ್ರದಾಯಿಕ ಕಲೆಯನ್ನು ಮರೆತು ಎಲ್ಲವನ್ನೂ ವಾಣಿಜ್ಯೀಕರಣಗೊಳಿಸುತ್ತಿದ್ದೇವೆ' ಎಂದು ವಿಷಾದಿಸಿದರು.</p>.<p><strong>ಗೀತ ಗೋವಿಂದ...</strong><br /> ಜಯದೇವ ಕವಿಯ ಗೀತ ಗೋವಿಂದ ಕಾವ್ಯವು ಮಧುರ ಭಕ್ತಿ ಸಂಪ್ರದಾಯಕ್ಕೆ ಸೇರಿದ್ದು, ಶೃಂಗಾರ ರಸ ಪ್ರಧಾನವಾಗಿದ್ದು, ಎಲ್ಲಾ ರಸಗಳ ಮಿಶ್ರಣವೇ ಈ ಕಾವ್ಯವಾಗಿದೆ. ರಾಧಾಕೃಷ್ಣರ ಪ್ರೇಮ, ಶೃಂಗಾರವನ್ನು ವಿವರಿಸಿ ಸಾರುವ ಕಾವ್ಯವಾಗಿದೆ. ಕಾವ್ಯವು 12 ಸರ್ಗಗಳು, 24 ಅಷ್ಟಪದಿಗಳು, 64 ವರ್ಣನಾತ್ಮಕ ಶ್ಲೋಕಗಳನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬೃಂದಾವನದಲ್ಲಿನ ರಾಧಾ ಕೃಷ್ಣರ ಪ್ರಣಯ ಲೀಲೆ, ಶೃಂಗಾರ ಕಾವ್ಯದ ಸುಂದರ ಕಥೆ, ಪ್ರೇಮಿಗಳಿಗೆ ರಸರಮ್ಯ ವರ್ಣನಾತೀತ ರಾಗ ಕಾವ್ಯದಂತೆ ಮೂಡಿರುವ ಶಿಲ್ಪ ಕಲಾಕೃತಿಗಳು..<br /> <br /> `ಗೀತಗೋವಿಂದ' ಮಹಾಕಾವ್ಯದಿಂದ ಆಯ್ಕೆ ಮಾಡಿ, ಮರದ ಮಾಧ್ಯಮದಲ್ಲಿ ಸಾರುವ ರಾಧಾ ಕೃಷ್ಣರ ಪ್ರಣಯ ಕ್ರೀಡೆಗಳು ಮರದ ಹದಿನಾಲ್ಕು ಉಬ್ಬುಶಿಲ್ಪ ರೂಪದಲ್ಲಿ ಅಭಿವ್ಯಕ್ತಿಗೊಂಡಿವೆ.<br /> <br /> ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಸ್ತೂರ ಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ `ಗೀತ ಗೋವಿಂದ' ಮರದ 14 ಉಬ್ಬು ಶಿಲ್ಪಗಳ ಪ್ರದರ್ಶನದಲ್ಲಿ ಮನಸೂರೆಗೊಳ್ಳುವ ಕಲಾಕೃತಿಗಳಿವು.<br /> <br /> ಇತ್ತೀಚೆಗೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ `ಸಾಂಪ್ರದಾಯಿಕ ಕಲೆ ಉಳಿಸಲು ಸರ್ಕಾರ ಬದ್ಧವಾಗಿದೆ. ಸಾಂಪ್ರದಾಯಿಕ ಕಲೆಗಳಿಗೆ ಅಗತ್ಯವಾದ ಉತ್ತೇಜನವನ್ನು ಸರ್ಕಾರ ನೀಡುತ್ತದೆ' ಎಂದು ಭರವಸೆ ನೀಡಿದರು.<br /> <br /> ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ.ಜ್ಞಾನಾನಂದ ಅವರು, `ಶಿಲ್ಪಕಲಾ ಅಕಾಡೆಮಿಯು ಸರ್ಕಾರದ ಸಂಸ್ಥೆಯಾದರೂ ಇಂದು ಪ್ರೋತ್ಸಾಹವಿಲ್ಲದೆ ನಶಿಸುವ ಹಂತದಲ್ಲಿದೆ. ಸರ್ಕಾರ ಸಂಪ್ರದಾಯ ಶಿಲ್ಪದ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಮಕಾಲೀನ ಶಾಲೆಗೆ ಸಂಬಂಧಪಟ್ಟ ಶಿಲ್ಪ ಶಾಲೆಗಳನ್ನು ತೆರೆಯುತ್ತಿದೆ' ಎಂದು ದೂರಿದರು.<br /> <br /> `ಇಂದಿನ ಸಾಂಪ್ರದಾಯಿಕ ಶಿಲ್ಪಿಗೆ ಯಾವುದೇ ಪ್ರತಿಫಲವೇ ಇಲ್ಲ. ದಕ್ಷಿಣ ಭಾರತದಲ್ಲಿ ಕೇವಲ 4,500 ಶಿಲೆ ಮತ್ತು ಲೋಹ ಶಿಲ್ಪಿಗಳಿದ್ದಾರೆ. ನಾವೀಗ ಸಾಂಪ್ರದಾಯಿಕ ಕಲೆಯನ್ನು ಮರೆತು ಎಲ್ಲವನ್ನೂ ವಾಣಿಜ್ಯೀಕರಣಗೊಳಿಸುತ್ತಿದ್ದೇವೆ' ಎಂದು ವಿಷಾದಿಸಿದರು.</p>.<p><strong>ಗೀತ ಗೋವಿಂದ...</strong><br /> ಜಯದೇವ ಕವಿಯ ಗೀತ ಗೋವಿಂದ ಕಾವ್ಯವು ಮಧುರ ಭಕ್ತಿ ಸಂಪ್ರದಾಯಕ್ಕೆ ಸೇರಿದ್ದು, ಶೃಂಗಾರ ರಸ ಪ್ರಧಾನವಾಗಿದ್ದು, ಎಲ್ಲಾ ರಸಗಳ ಮಿಶ್ರಣವೇ ಈ ಕಾವ್ಯವಾಗಿದೆ. ರಾಧಾಕೃಷ್ಣರ ಪ್ರೇಮ, ಶೃಂಗಾರವನ್ನು ವಿವರಿಸಿ ಸಾರುವ ಕಾವ್ಯವಾಗಿದೆ. ಕಾವ್ಯವು 12 ಸರ್ಗಗಳು, 24 ಅಷ್ಟಪದಿಗಳು, 64 ವರ್ಣನಾತ್ಮಕ ಶ್ಲೋಕಗಳನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>