<p><strong>ಬೆಂಗಳೂರು: `</strong>ಬಿಬಿಎಂಪಿ ಆಡಳಿತ ಕಳೆದ ಮೂರು ವರ್ಷಗಳಿಂದಲೂ ಸಾಲ ಪಡೆಯುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಆದರೆ, ಸಾಲ ಮರು ಪಾವತಿಸುವಂತಹ ಆದಾಯ ಮೂಲದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಈ ಬಗ್ಗೆ ಜನರಿಗೆ ಮಾಹಿತಿ ಬಹಿರಂಗಪಡಿಸುವುದು ಪಾಲಿಕೆಯ ಮೂಲಭೂತ ಕರ್ತವ್ಯ~ ಎಂದು ಮಾಜಿ ಮೇಯರ್, ಕಾಂಗ್ರೆಸ್ ಸದಸ್ಯ ಕೆ. ಚಂದ್ರಶೇಖರ್ ಗುರುವಾರ ಒತ್ತಾಯಿಸಿದರು.<br /> <br /> ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಡಿ. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ 2012-13ನೇ ಸಾಲಿನ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> `ಈ ವರ್ಷದ ಬಜೆಟ್ನಲ್ಲಿಯೂ ದೀರ್ಘಾವಧಿ ಸಾಲ ಪಡೆಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಯಾವ ವರ್ಷದಲ್ಲಿ ಎಷ್ಟು ಸಾಲ ತೀರಿಸಲು ಸಾಧ್ಯ. ಅದಕ್ಕೆ ಆದಾಯ ಮೂಲ ಯಾವುದು ಎಂಬುದರ ಬಗ್ಗೆ ಪಾಲಿಕೆ ಪ್ರಸ್ತಾಪ ಮಾಡದಿರುವುದು ಅಂದಾಜುಗಳ ಲೋಪವನ್ನು ಎತ್ತಿ ತೋರುತ್ತದೆ~ ಎಂದು ಅವರು ಟೀಕಿಸಿದರು.<br /> <strong><br /> ರೂ. 4000 ಕೋಟಿ ಮೀರಲು ಸಾಧ್ಯವಿಲ್ಲ: </strong>`ಈ ಸಾಲಿನ ಬಜೆಟ್ನಲ್ಲಿ ಏನೆಲ್ಲಾ ಪ್ರಯತ್ನ ಮಾಡಿದರೂ 4000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವರಮಾನ ನಿರೀಕ್ಷಿಸಲು ಸಾಧ್ಯವಿಲ್ಲ. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವ್ಯಾಪಾರ ಪರವಾನಗಿ, ಇತರೆ ಆದಾಯ 1500 ಕೋಟಿ ರೂಪಾಯಿ ಸೇರಿ ಒಟ್ಟು 2,990 ಕೋಟಿ ವರಮಾನ ಸಂಗ್ರಹಿಸಬಹುದು. ಇದಕ್ಕೆ `ಹುಡ್ಕೊ~ದಿಂದ ಈಗಾಗಲೇ ಮಂಜೂರಾಗಿರುವ 1000 ಕೋಟಿ ಮೊತ್ತ ಸೇರಿ 3,990 ಕೋಟಿ ರೂಪಾಯಿ ಆದಾಯ ಬರಲಿದೆಯಷ್ಟೆ~ ಎಂದು ಅವರು ಹಿಂದಿನ ಎರಡು ವರ್ಷಗಳಲ್ಲಿ ಸಂಗ್ರಹವಾಗಿರುವ ವರಮಾನ ಆಧಾರದ ಮೇಲೆ ಅಂಕಿ-ಅಂಶಗಳ ಸಹಿತ ಬಜೆಟ್ನ ಮೇಲೆ ಬೆಳಕು ಚೆಲ್ಲಿದರು.<br /> <br /> `ಇನ್ನು, ಬಾಕಿ ಇರುವ ಬಿಲ್ಗಳ ಮೊತ್ತ 1000 ಕೋಟಿ, ಮುಂದುವರಿದ ಕಾಮಗಾರಿಗಳ ಮೊತ್ತ 2,100 ಕೋಟಿ ಹಾಗೂ ಸಾಲ ಮರು ಪಾವತಿ, ಆಡಳಿತಾತ್ಮಕ ಖರ್ಚು, ನೌಕರರ ವೇತನ, ಪಿಂಚಣಿ ಮೊತ್ತ 2,400 ಕೋಟಿ ಸೇರಿದಂತೆ ಒಟ್ಟು 5,500 ಕೋಟಿ ರೂಪಾಯಿ ಭರಿಸಬೇಕಾಗಿದೆ. <br /> <br /> ಇದಲ್ಲದೆ, 2011-12ನೇ ಸಾಲಿನಲ್ಲಿ 1000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ `ಜಾಬ್ ಕೋಡ್~ ನೀಡಿದ ನಂತರ ಕಾರ್ಯಾದೇಶ ಪತ್ರ ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಆ ಮೊತ್ತವನ್ನು ಬಜೆಟ್ನಲ್ಲಿ ನಮೂದಿಸಿಲ್ಲ. ಹೀಗಾಗಿ, ಒಟ್ಟು 6,500 ಕೋಟಿ ರೂಪಾಯಿಗಳನ್ನು ಪಾಲಿಕೆ ಕಡ್ಡಾಯವಾಗಿ ಖರ್ಚು ಮಾಡಬೇಕಾಗಿದೆ. ಬಜೆಟ್ನಲ್ಲಿ ವರಮಾನ ನಿರೀಕ್ಷೆ, ಖರ್ಚು-ವೆಚ್ಚಗಳನ್ನೆಲ್ಲಾ ಸರಿದೂಗಿಸಿದರೂ 2,969.50 ಕೋಟಿ ರೂಪಾಯಿಗಳ ಕೊರತೆ ಕಂಡು ಬರುತ್ತದೆ~ ಎಂದು ಅವರು ವಿಶ್ಲೇಷಿಸಿದರು.<br /> <br /> ಪ್ರತಿಭಟನೆ ಮೂಲಕ ಅವಕಾಶ: ಇದಕ್ಕೂ ಮುನ್ನ ಕೆ. ಚಂದ್ರಶೇಖರ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ ಮೇಯರ್ ಡಿ. ವೆಂಕಟೇಶಮೂರ್ತಿ ಅವರು ಕಾಂಗ್ರೆಸ್ನ ಆಶಾ ಸುರೇಶ್ ಅವರಿಗೆ ಅವಕಾಶ ಮಾಡಿಕೊಟ್ಟರು. ಇದರಿಂದ ಸಿಟ್ಟಿಗೆದ್ದ ಚಂದ್ರಶೇಖರ್, `ನಾನು ಮೊದಲ ದಿನವೇ ನಿಮಗೆ ಪತ್ರ ಕಳಿಸಿದ್ದೇನೆ. ಯಾವ ಕಾರಣಕ್ಕಾಗಿ ಅವಕಾಶ ನೀಡುತ್ತಿಲ್ಲ~ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.<br /> <br /> `ಇದುವರೆಗೆ ಒಬ್ಬ ಮಹಿಳಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿಲ್ಲ. ಹೀಗಾಗಿ, ಆಶಾ ಸುರೇಶ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟೆ~ ಎಂದು ಮೇಯರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಈ ನಡುವೆ, ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಎಂ. ಉದಯಶಂಕರ್ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ನ ಹಿರಿಯ ಸದಸ್ಯ ಎಂ. ನಾಗರಾಜ್, ಜೆಡಿಎಸ್ ಗುಂಪಿನ ಮಾಜಿ ನಾಯಕ ಪದ್ಮನಾಭರೆಡ್ಡಿ ಚಂದ್ರಶೇಖರ್ ಬೆಂಬಲಕ್ಕೆ ನಿಂತರು. ಮಹಿಳಾ ಸದಸ್ಯೆ ಆಶಾ ಸುರೇಶ್ ಕೂಡ, `ಮೊದಲು ಹಿರಿಯ ಸದಸ್ಯರಾದ ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನೀಡಿ. ನಾನು ಆ ಮೇಲೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ಹೇಳಿದಾಗ ಅನಿವಾರ್ಯವಾಗಿ ಮೇಯರ್, ಚಂದ್ರಶೇಖರ್ ಅವರಿಗೆ ಅವಕಾಶ ಮಾಡಿಕೊಟ್ಟರು.<br /> <br /> <strong>ಬೋಗಸ್, ಬಂಡಲ್ ಬಜೆಟ್:</strong> ಜೆಡಿಎಸ್ನ ಹಿರಿಯ ಸದಸ್ಯ ಪದ್ಮನಾಭರೆಡ್ಡಿ ಮಾತನಾಡಿ, `2012-13ನೇ ಸಾಲಿನ ಬಜೆಟ್ ಬೋಗಸ್, ಬಂಡಲ್, ಗಾನಾ ಬಜಾನಾ ಬಜೆಟ್~ ಎಂದು ಟೀಕಿಸಿದರು.<br /> <br /> `ಈ ವರ್ಷ ಎಲ್ಲ ಮೂಲಗಳಿಂದಲೂ ಪಾಲಿಕೆಗೆ ಕೇವಲ 3,800 ಕೋಟಿ ರೂಪಾಯಿ ಮಾತ್ರ ಆದಾಯ ಬರಲಿದೆ. ಹೀಗಾಗಿ, ಈ ವರ್ಷವೂ ಕೇವಲ ಶೇ 40ರಷ್ಟು ಪ್ರಗತಿ ನಿರೀಕ್ಷಿಸಲು ಸಾಧ್ಯ. ಮುಂದಿನ 15 ವರ್ಷ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಮಾತ್ರ ಪಾಲಿಕೆಗೆ ವಾಸ್ತವ ಬಜೆಟ್ ಮಂಡಿಸಲು ಸಾಧ್ಯವಾಗುತ್ತದೆ~ ಎಂದರು.<br /> <br /> `ಕಳೆದ ವರ್ಷದ ಬಜೆಟ್ನಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳನ್ನೇ ಪಾಲಿಕೆಗೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ ವಾಪಸು ತೆಗೆದುಕೊಂಡು ಕಳೆದ ವರ್ಷದ ಬಜೆಟ್ ಅನುಷ್ಠಾನಗೊಳಿಸಲು ಆಯುಕ್ತರಿಗೆ ಅಧಿಕಾರ ನೀಡಬೇಕು~ ಎಂದು ಅವರು ಒತ್ತಾಯಿಸಿದರು. <br /> </p>.<p><strong>ಅಡುಗೆ ಅನಿಲ ಬದಲಿಗೆ ಸೈಕಲ್ ಕೊಡಿ</strong><br /> </p>.<p>ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಿರುವುದರಿಂದ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಲಿರುವುದರಿಂದ ಅದರ ಬದಲಿಗೆ ಮನೆ-ಮನೆಗಳಿಗೆ ಹಾಲು ಹಾಗೂ ದಿನಪತ್ರಿಕೆಗಳನ್ನು ಹಾಕುವಂತಹ ಮಕ್ಕಳಿಗೆ ಶೇ22:75ರ ಅನುದಾನದಡಿ ಸೈಕಲ್ ನೀಡುವಂತೆ ಬಿಜೆಪಿ ಸದಸ್ಯ ಎನ್.ಆರ್. ರಮೇಶ್ ಸಲಹೆ ಮಾಡಿದರು.<br /> <br /> `ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದರಿಂದ ಕಡಿಮೆ ದರದಲ್ಲಿ ಪಡಿತರ ಸಿಗುವುದಿಲ್ಲ. ಅಲ್ಲದೆ, ಅವರು ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ~ ಎಂದು ಸಭೆಯ ಗಮನಸೆಳೆದರು.<br /> <br /> `ಬಜೆಟ್ನಲ್ಲಿ ಒದಗಿಸಿರುವ ಅನುದಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ 171 ಮಂದಿ ಹೊಸ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ, ಈ ಬಗ್ಗೆ ಕಾರ್ಯಾಗಾರ ಏರ್ಪಡಿಸಬೇಕು. ಮೇಯರ್ ನಿಧಿಯ 150 ಕೋಟಿ ರೂಪಾಯಿಗಳನ್ನು 198 ವಾರ್ಡ್ಗಳ ಸದಸ್ಯರಿಗೆ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆ ಮಾಡಬೇಕು~ ಎಂದು ಮನವಿ ಮಾಡಿದರು.</p>.<p><strong>ಸಭೆಯಲ್ಲಿ ಕೇಳಿಸಿದ್ದು...</strong></p>.<p>ಮಾಜಿ ಮೇಯರ್ ಕೆ.ಚಂದ್ರಶೇಖರ್ `ಬ್ರಹ್ಮಚಾರಿ~ ಎಂಬುದು ಆಯುಕ್ತರಿಗೆ ಗೊತ್ತಾಗಿದ್ದೇ ನಿನ್ನೆ - ಡಿ. <strong>ವೆಂಕಟೇಶಮೂರ್ತಿ, ಮೇಯರ್</strong></p>.<p>ಈ ದೇಶದಲ್ಲಿ ಕೆಲವೇ ಕೆಲವು `ಬ್ರಹ್ಮಚಾರಿ~ಗಳು ದಾಖಲೆ ಸೃಷ್ಟಿಸಿದ್ದಾರೆ. ಅಂಥವರಲ್ಲಿ ಒಬ್ಬರು ವಾಜಪೇಯಿ, ಇನ್ನೊಬ್ಬರು ಜಾರ್ಜ್ ಫರ್ನಾಂಡಿಸ್, ಮತ್ತೊಬ್ಬ ನಾನು<br /> -<strong> ಕೆ. ಚಂದ್ರಶೇಖರ್, ಕಾಂಗ್ರೆಸ್ ಸದಸ್ಯ</strong></p>.<p>ಬಿಬಿಎಂಪಿ ಗುಂಡಿಗಳಿಗೆ ಹಣ ಹಾಕುತ್ತಿದೆಯೋ ಅಥವಾ ಗಿಡ ನೆಡುತ್ತಿದೆಯೋ ಗೊತ್ತಿಲ್ಲ. ಪಾಲಿಕೆ ನೆಟ್ಟ ಗಿಡಗಳೆಲ್ಲಾ ಉಳಿದಿದ್ದರೆ ನಾವೆಲ್ಲಾ ನಡೆದಾಡಲೂ ಜಾಗ ಇರುತ್ತಿರಲಿಲ್ಲ<br /> - <strong>ಪದ್ಮನಾಭರೆಡ್ಡಿ, ಜೆಡಿಎಸ್ ಸದಸ್ಯ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಬಿಬಿಎಂಪಿ ಆಡಳಿತ ಕಳೆದ ಮೂರು ವರ್ಷಗಳಿಂದಲೂ ಸಾಲ ಪಡೆಯುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಆದರೆ, ಸಾಲ ಮರು ಪಾವತಿಸುವಂತಹ ಆದಾಯ ಮೂಲದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಈ ಬಗ್ಗೆ ಜನರಿಗೆ ಮಾಹಿತಿ ಬಹಿರಂಗಪಡಿಸುವುದು ಪಾಲಿಕೆಯ ಮೂಲಭೂತ ಕರ್ತವ್ಯ~ ಎಂದು ಮಾಜಿ ಮೇಯರ್, ಕಾಂಗ್ರೆಸ್ ಸದಸ್ಯ ಕೆ. ಚಂದ್ರಶೇಖರ್ ಗುರುವಾರ ಒತ್ತಾಯಿಸಿದರು.<br /> <br /> ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಡಿ. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ 2012-13ನೇ ಸಾಲಿನ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> `ಈ ವರ್ಷದ ಬಜೆಟ್ನಲ್ಲಿಯೂ ದೀರ್ಘಾವಧಿ ಸಾಲ ಪಡೆಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಯಾವ ವರ್ಷದಲ್ಲಿ ಎಷ್ಟು ಸಾಲ ತೀರಿಸಲು ಸಾಧ್ಯ. ಅದಕ್ಕೆ ಆದಾಯ ಮೂಲ ಯಾವುದು ಎಂಬುದರ ಬಗ್ಗೆ ಪಾಲಿಕೆ ಪ್ರಸ್ತಾಪ ಮಾಡದಿರುವುದು ಅಂದಾಜುಗಳ ಲೋಪವನ್ನು ಎತ್ತಿ ತೋರುತ್ತದೆ~ ಎಂದು ಅವರು ಟೀಕಿಸಿದರು.<br /> <strong><br /> ರೂ. 4000 ಕೋಟಿ ಮೀರಲು ಸಾಧ್ಯವಿಲ್ಲ: </strong>`ಈ ಸಾಲಿನ ಬಜೆಟ್ನಲ್ಲಿ ಏನೆಲ್ಲಾ ಪ್ರಯತ್ನ ಮಾಡಿದರೂ 4000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವರಮಾನ ನಿರೀಕ್ಷಿಸಲು ಸಾಧ್ಯವಿಲ್ಲ. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವ್ಯಾಪಾರ ಪರವಾನಗಿ, ಇತರೆ ಆದಾಯ 1500 ಕೋಟಿ ರೂಪಾಯಿ ಸೇರಿ ಒಟ್ಟು 2,990 ಕೋಟಿ ವರಮಾನ ಸಂಗ್ರಹಿಸಬಹುದು. ಇದಕ್ಕೆ `ಹುಡ್ಕೊ~ದಿಂದ ಈಗಾಗಲೇ ಮಂಜೂರಾಗಿರುವ 1000 ಕೋಟಿ ಮೊತ್ತ ಸೇರಿ 3,990 ಕೋಟಿ ರೂಪಾಯಿ ಆದಾಯ ಬರಲಿದೆಯಷ್ಟೆ~ ಎಂದು ಅವರು ಹಿಂದಿನ ಎರಡು ವರ್ಷಗಳಲ್ಲಿ ಸಂಗ್ರಹವಾಗಿರುವ ವರಮಾನ ಆಧಾರದ ಮೇಲೆ ಅಂಕಿ-ಅಂಶಗಳ ಸಹಿತ ಬಜೆಟ್ನ ಮೇಲೆ ಬೆಳಕು ಚೆಲ್ಲಿದರು.<br /> <br /> `ಇನ್ನು, ಬಾಕಿ ಇರುವ ಬಿಲ್ಗಳ ಮೊತ್ತ 1000 ಕೋಟಿ, ಮುಂದುವರಿದ ಕಾಮಗಾರಿಗಳ ಮೊತ್ತ 2,100 ಕೋಟಿ ಹಾಗೂ ಸಾಲ ಮರು ಪಾವತಿ, ಆಡಳಿತಾತ್ಮಕ ಖರ್ಚು, ನೌಕರರ ವೇತನ, ಪಿಂಚಣಿ ಮೊತ್ತ 2,400 ಕೋಟಿ ಸೇರಿದಂತೆ ಒಟ್ಟು 5,500 ಕೋಟಿ ರೂಪಾಯಿ ಭರಿಸಬೇಕಾಗಿದೆ. <br /> <br /> ಇದಲ್ಲದೆ, 2011-12ನೇ ಸಾಲಿನಲ್ಲಿ 1000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ `ಜಾಬ್ ಕೋಡ್~ ನೀಡಿದ ನಂತರ ಕಾರ್ಯಾದೇಶ ಪತ್ರ ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಆ ಮೊತ್ತವನ್ನು ಬಜೆಟ್ನಲ್ಲಿ ನಮೂದಿಸಿಲ್ಲ. ಹೀಗಾಗಿ, ಒಟ್ಟು 6,500 ಕೋಟಿ ರೂಪಾಯಿಗಳನ್ನು ಪಾಲಿಕೆ ಕಡ್ಡಾಯವಾಗಿ ಖರ್ಚು ಮಾಡಬೇಕಾಗಿದೆ. ಬಜೆಟ್ನಲ್ಲಿ ವರಮಾನ ನಿರೀಕ್ಷೆ, ಖರ್ಚು-ವೆಚ್ಚಗಳನ್ನೆಲ್ಲಾ ಸರಿದೂಗಿಸಿದರೂ 2,969.50 ಕೋಟಿ ರೂಪಾಯಿಗಳ ಕೊರತೆ ಕಂಡು ಬರುತ್ತದೆ~ ಎಂದು ಅವರು ವಿಶ್ಲೇಷಿಸಿದರು.<br /> <br /> ಪ್ರತಿಭಟನೆ ಮೂಲಕ ಅವಕಾಶ: ಇದಕ್ಕೂ ಮುನ್ನ ಕೆ. ಚಂದ್ರಶೇಖರ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ ಮೇಯರ್ ಡಿ. ವೆಂಕಟೇಶಮೂರ್ತಿ ಅವರು ಕಾಂಗ್ರೆಸ್ನ ಆಶಾ ಸುರೇಶ್ ಅವರಿಗೆ ಅವಕಾಶ ಮಾಡಿಕೊಟ್ಟರು. ಇದರಿಂದ ಸಿಟ್ಟಿಗೆದ್ದ ಚಂದ್ರಶೇಖರ್, `ನಾನು ಮೊದಲ ದಿನವೇ ನಿಮಗೆ ಪತ್ರ ಕಳಿಸಿದ್ದೇನೆ. ಯಾವ ಕಾರಣಕ್ಕಾಗಿ ಅವಕಾಶ ನೀಡುತ್ತಿಲ್ಲ~ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.<br /> <br /> `ಇದುವರೆಗೆ ಒಬ್ಬ ಮಹಿಳಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿಲ್ಲ. ಹೀಗಾಗಿ, ಆಶಾ ಸುರೇಶ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟೆ~ ಎಂದು ಮೇಯರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಈ ನಡುವೆ, ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಎಂ. ಉದಯಶಂಕರ್ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ನ ಹಿರಿಯ ಸದಸ್ಯ ಎಂ. ನಾಗರಾಜ್, ಜೆಡಿಎಸ್ ಗುಂಪಿನ ಮಾಜಿ ನಾಯಕ ಪದ್ಮನಾಭರೆಡ್ಡಿ ಚಂದ್ರಶೇಖರ್ ಬೆಂಬಲಕ್ಕೆ ನಿಂತರು. ಮಹಿಳಾ ಸದಸ್ಯೆ ಆಶಾ ಸುರೇಶ್ ಕೂಡ, `ಮೊದಲು ಹಿರಿಯ ಸದಸ್ಯರಾದ ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನೀಡಿ. ನಾನು ಆ ಮೇಲೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ಹೇಳಿದಾಗ ಅನಿವಾರ್ಯವಾಗಿ ಮೇಯರ್, ಚಂದ್ರಶೇಖರ್ ಅವರಿಗೆ ಅವಕಾಶ ಮಾಡಿಕೊಟ್ಟರು.<br /> <br /> <strong>ಬೋಗಸ್, ಬಂಡಲ್ ಬಜೆಟ್:</strong> ಜೆಡಿಎಸ್ನ ಹಿರಿಯ ಸದಸ್ಯ ಪದ್ಮನಾಭರೆಡ್ಡಿ ಮಾತನಾಡಿ, `2012-13ನೇ ಸಾಲಿನ ಬಜೆಟ್ ಬೋಗಸ್, ಬಂಡಲ್, ಗಾನಾ ಬಜಾನಾ ಬಜೆಟ್~ ಎಂದು ಟೀಕಿಸಿದರು.<br /> <br /> `ಈ ವರ್ಷ ಎಲ್ಲ ಮೂಲಗಳಿಂದಲೂ ಪಾಲಿಕೆಗೆ ಕೇವಲ 3,800 ಕೋಟಿ ರೂಪಾಯಿ ಮಾತ್ರ ಆದಾಯ ಬರಲಿದೆ. ಹೀಗಾಗಿ, ಈ ವರ್ಷವೂ ಕೇವಲ ಶೇ 40ರಷ್ಟು ಪ್ರಗತಿ ನಿರೀಕ್ಷಿಸಲು ಸಾಧ್ಯ. ಮುಂದಿನ 15 ವರ್ಷ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಮಾತ್ರ ಪಾಲಿಕೆಗೆ ವಾಸ್ತವ ಬಜೆಟ್ ಮಂಡಿಸಲು ಸಾಧ್ಯವಾಗುತ್ತದೆ~ ಎಂದರು.<br /> <br /> `ಕಳೆದ ವರ್ಷದ ಬಜೆಟ್ನಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳನ್ನೇ ಪಾಲಿಕೆಗೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ ವಾಪಸು ತೆಗೆದುಕೊಂಡು ಕಳೆದ ವರ್ಷದ ಬಜೆಟ್ ಅನುಷ್ಠಾನಗೊಳಿಸಲು ಆಯುಕ್ತರಿಗೆ ಅಧಿಕಾರ ನೀಡಬೇಕು~ ಎಂದು ಅವರು ಒತ್ತಾಯಿಸಿದರು. <br /> </p>.<p><strong>ಅಡುಗೆ ಅನಿಲ ಬದಲಿಗೆ ಸೈಕಲ್ ಕೊಡಿ</strong><br /> </p>.<p>ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಿರುವುದರಿಂದ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಲಿರುವುದರಿಂದ ಅದರ ಬದಲಿಗೆ ಮನೆ-ಮನೆಗಳಿಗೆ ಹಾಲು ಹಾಗೂ ದಿನಪತ್ರಿಕೆಗಳನ್ನು ಹಾಕುವಂತಹ ಮಕ್ಕಳಿಗೆ ಶೇ22:75ರ ಅನುದಾನದಡಿ ಸೈಕಲ್ ನೀಡುವಂತೆ ಬಿಜೆಪಿ ಸದಸ್ಯ ಎನ್.ಆರ್. ರಮೇಶ್ ಸಲಹೆ ಮಾಡಿದರು.<br /> <br /> `ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದರಿಂದ ಕಡಿಮೆ ದರದಲ್ಲಿ ಪಡಿತರ ಸಿಗುವುದಿಲ್ಲ. ಅಲ್ಲದೆ, ಅವರು ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ~ ಎಂದು ಸಭೆಯ ಗಮನಸೆಳೆದರು.<br /> <br /> `ಬಜೆಟ್ನಲ್ಲಿ ಒದಗಿಸಿರುವ ಅನುದಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ 171 ಮಂದಿ ಹೊಸ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ, ಈ ಬಗ್ಗೆ ಕಾರ್ಯಾಗಾರ ಏರ್ಪಡಿಸಬೇಕು. ಮೇಯರ್ ನಿಧಿಯ 150 ಕೋಟಿ ರೂಪಾಯಿಗಳನ್ನು 198 ವಾರ್ಡ್ಗಳ ಸದಸ್ಯರಿಗೆ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆ ಮಾಡಬೇಕು~ ಎಂದು ಮನವಿ ಮಾಡಿದರು.</p>.<p><strong>ಸಭೆಯಲ್ಲಿ ಕೇಳಿಸಿದ್ದು...</strong></p>.<p>ಮಾಜಿ ಮೇಯರ್ ಕೆ.ಚಂದ್ರಶೇಖರ್ `ಬ್ರಹ್ಮಚಾರಿ~ ಎಂಬುದು ಆಯುಕ್ತರಿಗೆ ಗೊತ್ತಾಗಿದ್ದೇ ನಿನ್ನೆ - ಡಿ. <strong>ವೆಂಕಟೇಶಮೂರ್ತಿ, ಮೇಯರ್</strong></p>.<p>ಈ ದೇಶದಲ್ಲಿ ಕೆಲವೇ ಕೆಲವು `ಬ್ರಹ್ಮಚಾರಿ~ಗಳು ದಾಖಲೆ ಸೃಷ್ಟಿಸಿದ್ದಾರೆ. ಅಂಥವರಲ್ಲಿ ಒಬ್ಬರು ವಾಜಪೇಯಿ, ಇನ್ನೊಬ್ಬರು ಜಾರ್ಜ್ ಫರ್ನಾಂಡಿಸ್, ಮತ್ತೊಬ್ಬ ನಾನು<br /> -<strong> ಕೆ. ಚಂದ್ರಶೇಖರ್, ಕಾಂಗ್ರೆಸ್ ಸದಸ್ಯ</strong></p>.<p>ಬಿಬಿಎಂಪಿ ಗುಂಡಿಗಳಿಗೆ ಹಣ ಹಾಕುತ್ತಿದೆಯೋ ಅಥವಾ ಗಿಡ ನೆಡುತ್ತಿದೆಯೋ ಗೊತ್ತಿಲ್ಲ. ಪಾಲಿಕೆ ನೆಟ್ಟ ಗಿಡಗಳೆಲ್ಲಾ ಉಳಿದಿದ್ದರೆ ನಾವೆಲ್ಲಾ ನಡೆದಾಡಲೂ ಜಾಗ ಇರುತ್ತಿರಲಿಲ್ಲ<br /> - <strong>ಪದ್ಮನಾಭರೆಡ್ಡಿ, ಜೆಡಿಎಸ್ ಸದಸ್ಯ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>