<p><strong>ಬೆಂಗಳೂರು: </strong>`ಕೇಂದ್ರೀಯ ಶಾಲೆಗಳಲ್ಲಿ ಬೋಧಿಸುವ ಕನ್ನಡ ಪ್ರಾಧ್ಯಾಪಕರು ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಆ ಮೂಲಕ ಜ್ಞಾನರ್ಜನೆಯನ್ನು ಪಡೆದುಕೊಳ್ಳಬೇಕು~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಸಲಹೆ ನೀಡಿದರು.<br /> <br /> ಕೇಂದ್ರೀಯ ಕನ್ನಡ ಅಧ್ಯಾಪಕ ಸಂಘವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕನ್ನಡ ಭಾಷಾಭೋಧನೆ ಸಂವರ್ಧನಾ ಕಾರ್ಯಕ್ರಮ~ದಲ್ಲಿ ಮಾತನಾಡಿದರು.`ಇತರೆ ರಾಜ್ಯಗಳಲ್ಲಿ ಮಾತೃಭಾಷೆಗೆ ಮಹತ್ವ ನೀಡುವಂತೆ ಅನ್ಯಭಾಷಿಕರ ಮಕ್ಕಳು ರಾಜ್ಯದಲ್ಲಿರುವ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಪ್ರಾಥಮಿಕ ಶಾಲೆಯ ಮಾಧ್ಯಮ ಕನ್ನಡವಾಗಿದ್ದರೆ ಮಾತ್ರ ಮಕ್ಕಳು ಬೌದ್ಧಿಕ ಮತ್ತು ನೈತಿಕವಾಗಿ ಪ್ರಬುದ್ದರಾಗಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> `ಕೇಂದ್ರೀಯ ಶಾಲೆಗಳಲ್ಲಿ ಕನ್ನಡವನ್ನು ಉಳಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಸಂಘಟಿತರಾಗಿ ಹೋರಾಡಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ~ ಎಂದು ತಿಳಿಸಿದರು.<br /> ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಮಾತನಾಡಿ, `ಕನ್ನಡಕ್ಕೆ ಕಿಟೆಲ್, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಡಿವಿಜಿ ಸೇರಿದಂತೆ ಇತರೆ ಭಾಷಿಕರು ಮಹತ್ತರವಾದ ಕೊಡೆಗೆ ನೀಡಿದ್ದಾರೆ.<br /> <br /> ಪ್ರಾಚೀನ ಭಾಷಾ ಪರಂಪರೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೂಲಕ ಹೊಸ ಬಗೆಯ ಸವಾಲನ್ನು ಎದುರಿಸಬೇಕು~ ಎಂದು ಹೇಳಿದರು.ಬಿಬಿಯುಎಲ್ ಜೈನ್ ವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಶ್ರೀದೇವಿ, ಸಂಘದ ಅಧ್ಯಕ್ಷ ನಾಗವೇಂದ್ರ ಸ್ವಾಮಿ ಚಿದರವಳ್ಳಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಕೇಂದ್ರೀಯ ಶಾಲೆಗಳಲ್ಲಿ ಬೋಧಿಸುವ ಕನ್ನಡ ಪ್ರಾಧ್ಯಾಪಕರು ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಆ ಮೂಲಕ ಜ್ಞಾನರ್ಜನೆಯನ್ನು ಪಡೆದುಕೊಳ್ಳಬೇಕು~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಸಲಹೆ ನೀಡಿದರು.<br /> <br /> ಕೇಂದ್ರೀಯ ಕನ್ನಡ ಅಧ್ಯಾಪಕ ಸಂಘವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕನ್ನಡ ಭಾಷಾಭೋಧನೆ ಸಂವರ್ಧನಾ ಕಾರ್ಯಕ್ರಮ~ದಲ್ಲಿ ಮಾತನಾಡಿದರು.`ಇತರೆ ರಾಜ್ಯಗಳಲ್ಲಿ ಮಾತೃಭಾಷೆಗೆ ಮಹತ್ವ ನೀಡುವಂತೆ ಅನ್ಯಭಾಷಿಕರ ಮಕ್ಕಳು ರಾಜ್ಯದಲ್ಲಿರುವ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಪ್ರಾಥಮಿಕ ಶಾಲೆಯ ಮಾಧ್ಯಮ ಕನ್ನಡವಾಗಿದ್ದರೆ ಮಾತ್ರ ಮಕ್ಕಳು ಬೌದ್ಧಿಕ ಮತ್ತು ನೈತಿಕವಾಗಿ ಪ್ರಬುದ್ದರಾಗಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> `ಕೇಂದ್ರೀಯ ಶಾಲೆಗಳಲ್ಲಿ ಕನ್ನಡವನ್ನು ಉಳಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಸಂಘಟಿತರಾಗಿ ಹೋರಾಡಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ~ ಎಂದು ತಿಳಿಸಿದರು.<br /> ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಮಾತನಾಡಿ, `ಕನ್ನಡಕ್ಕೆ ಕಿಟೆಲ್, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಡಿವಿಜಿ ಸೇರಿದಂತೆ ಇತರೆ ಭಾಷಿಕರು ಮಹತ್ತರವಾದ ಕೊಡೆಗೆ ನೀಡಿದ್ದಾರೆ.<br /> <br /> ಪ್ರಾಚೀನ ಭಾಷಾ ಪರಂಪರೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೂಲಕ ಹೊಸ ಬಗೆಯ ಸವಾಲನ್ನು ಎದುರಿಸಬೇಕು~ ಎಂದು ಹೇಳಿದರು.ಬಿಬಿಯುಎಲ್ ಜೈನ್ ವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಶ್ರೀದೇವಿ, ಸಂಘದ ಅಧ್ಯಕ್ಷ ನಾಗವೇಂದ್ರ ಸ್ವಾಮಿ ಚಿದರವಳ್ಳಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>