<p><strong>ಬೆಂಗಳೂರು: </strong>‘ಭಕ್ತಿ ಸಾಹಿತ್ಯ ಪರಂಪರೆಯ ಕೊನೆಯ ಕವಿ ಪು.ತಿ.ನರಸಿಂಹಾಚಾರ್. ಭಕ್ತಿಯ ಜತೆಗೆ ಜಾತ್ಯತೀತ ದೃಷ್ಟಿಕೋನದಿಂದಲೇ ಜನರನ್ನು ಸೆಳೆದರು’ ಎಂದು ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.<br /> <br /> ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಆಯೋಜಿಸಿದ್ದ ಸಾಕ್ಷ್ಯಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> ‘ಕನ್ನಡದ ಸಂದರ್ಭದಲ್ಲಿ ಹರಿಹರ, ಕುಮಾರವ್ಯಾಸರ ಭಕ್ತಿ ಪರಂಪರೆಯನ್ನು ಸಾರಸ್ವತ ಲೋಕದಲ್ಲಿ ಮುಂದುವರಿಸಿದ್ದು ಪು.ತಿ.ನ. ಆದರೆ, ಅವರ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಲು ಈವರೆಗೂ ಸಾಧ್ಯವಾಗದಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.<br /> ‘ಪು.ತಿ.ನ ಕೃತಿಗಳಲ್ಲಿ ವ್ಯಕ್ತಿ ಪಾಲಿಸಬೇಕಾದ ಮೌಲ್ಯಗಳಿವೆ. ಅದ್ಬುತವಾದ ಗೀತರೂಪಕಗಳನ್ನು ನೀಡಿದ್ದ ಅವರ ಕೃತಿಗಳ ಬಗ್ಗೆ ಮರುವ್ಯಾಖ್ಯಾನ ನಡೆಯಬೇಕಿದೆ’ ಎಂದು ತಿಳಿಸಿದರು.<br /> <br /> ‘ಪಾರದರ್ಶಕ ವ್ಯಕ್ತಿತ್ವದ ಅನಂತಮೂರ್ತಿ ಅವರು ಬರೆದಂತೆ ಬದುಕಿದರು. ಭಾರತೀಯ ಸಂದರ್ಭದಲ್ಲಿ ಮುಖ್ಯವೆನಿಸುವ ಬರಹಗಾರರ ಪಟ್ಟಿಯಲ್ಲಿರುವ ಖುಷ್ವಂತ್ ಸಿಂಗ್, ಡಾ.ಯು.ಆರ್.ಅನಂತಮೂರ್ತಿ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವುದು ಸಂತೋಷದ ವಿಚಾರ’ ಎಂದು ಶ್ಲಾಘಿಸಿದರು.<br /> <br /> ಲೇಖಕಿ ವಿಜಯಾ, ‘ಚಂದ್ರಶೇಖರ ಕಂಬಾರ ಅವರು ಸಿದ್ಧಪಡಿಸಿದ ಸಾಕ್ಷ್ಯಚಿತ್ರ ಪು.ತಿ.ನ ಅವರ ವ್ಯಕ್ತಿತ್ವವನ್ನು ಹಿಡಿದಿಡುವಲ್ಲಿ ಸೋತಿದೆ’ ಎಂದು ಹೇಳಿದರು.<br /> <br /> ‘ದೇವನೂರ ಮಹಾದೇವ ಅವರ ಮಗಳ ಕವನಸಂಕಲನಕ್ಕೆ ಮುನ್ನುಡಿ ಬರೆದುಕೊಂಡುವಂತೆ ಪು.ತಿ.ನ ಅವರ ಮನೆಯ ಬಾಗಿಲನ್ನು ರಾತ್ರಿ 12ಕ್ಕೆ ತಟ್ಟಿದ್ದೆವು. ಒಂದಿಷ್ಟು ಬೇಸರ ಮಾಡಿಕೊಳ್ಳದೇ ಮುನ್ನುಡಿ ಬರೆದುಕೊಟ್ಟಿದ್ದರು’ ಎಂದು ನೆನಪಿಸಿಕೊಂಡರು.<br /> ಪು.ತಿ.ನರಸಿಂಹಾಚಾರ್, ಡಾ.ಯು.ಆರ್.ಅನಂತಮೂರ್ತಿ, ಖುಷ್ವಂತ್ ಸಿಂಗ್, ಇಂದಿರಾ ಗೋಸ್ವಾಮಿ, ಎಂ.ಟಿ.ವಾಸುದೇವನ್ ನಾಯರ್ ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಭಕ್ತಿ ಸಾಹಿತ್ಯ ಪರಂಪರೆಯ ಕೊನೆಯ ಕವಿ ಪು.ತಿ.ನರಸಿಂಹಾಚಾರ್. ಭಕ್ತಿಯ ಜತೆಗೆ ಜಾತ್ಯತೀತ ದೃಷ್ಟಿಕೋನದಿಂದಲೇ ಜನರನ್ನು ಸೆಳೆದರು’ ಎಂದು ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.<br /> <br /> ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಆಯೋಜಿಸಿದ್ದ ಸಾಕ್ಷ್ಯಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> ‘ಕನ್ನಡದ ಸಂದರ್ಭದಲ್ಲಿ ಹರಿಹರ, ಕುಮಾರವ್ಯಾಸರ ಭಕ್ತಿ ಪರಂಪರೆಯನ್ನು ಸಾರಸ್ವತ ಲೋಕದಲ್ಲಿ ಮುಂದುವರಿಸಿದ್ದು ಪು.ತಿ.ನ. ಆದರೆ, ಅವರ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಲು ಈವರೆಗೂ ಸಾಧ್ಯವಾಗದಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.<br /> ‘ಪು.ತಿ.ನ ಕೃತಿಗಳಲ್ಲಿ ವ್ಯಕ್ತಿ ಪಾಲಿಸಬೇಕಾದ ಮೌಲ್ಯಗಳಿವೆ. ಅದ್ಬುತವಾದ ಗೀತರೂಪಕಗಳನ್ನು ನೀಡಿದ್ದ ಅವರ ಕೃತಿಗಳ ಬಗ್ಗೆ ಮರುವ್ಯಾಖ್ಯಾನ ನಡೆಯಬೇಕಿದೆ’ ಎಂದು ತಿಳಿಸಿದರು.<br /> <br /> ‘ಪಾರದರ್ಶಕ ವ್ಯಕ್ತಿತ್ವದ ಅನಂತಮೂರ್ತಿ ಅವರು ಬರೆದಂತೆ ಬದುಕಿದರು. ಭಾರತೀಯ ಸಂದರ್ಭದಲ್ಲಿ ಮುಖ್ಯವೆನಿಸುವ ಬರಹಗಾರರ ಪಟ್ಟಿಯಲ್ಲಿರುವ ಖುಷ್ವಂತ್ ಸಿಂಗ್, ಡಾ.ಯು.ಆರ್.ಅನಂತಮೂರ್ತಿ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವುದು ಸಂತೋಷದ ವಿಚಾರ’ ಎಂದು ಶ್ಲಾಘಿಸಿದರು.<br /> <br /> ಲೇಖಕಿ ವಿಜಯಾ, ‘ಚಂದ್ರಶೇಖರ ಕಂಬಾರ ಅವರು ಸಿದ್ಧಪಡಿಸಿದ ಸಾಕ್ಷ್ಯಚಿತ್ರ ಪು.ತಿ.ನ ಅವರ ವ್ಯಕ್ತಿತ್ವವನ್ನು ಹಿಡಿದಿಡುವಲ್ಲಿ ಸೋತಿದೆ’ ಎಂದು ಹೇಳಿದರು.<br /> <br /> ‘ದೇವನೂರ ಮಹಾದೇವ ಅವರ ಮಗಳ ಕವನಸಂಕಲನಕ್ಕೆ ಮುನ್ನುಡಿ ಬರೆದುಕೊಂಡುವಂತೆ ಪು.ತಿ.ನ ಅವರ ಮನೆಯ ಬಾಗಿಲನ್ನು ರಾತ್ರಿ 12ಕ್ಕೆ ತಟ್ಟಿದ್ದೆವು. ಒಂದಿಷ್ಟು ಬೇಸರ ಮಾಡಿಕೊಳ್ಳದೇ ಮುನ್ನುಡಿ ಬರೆದುಕೊಟ್ಟಿದ್ದರು’ ಎಂದು ನೆನಪಿಸಿಕೊಂಡರು.<br /> ಪು.ತಿ.ನರಸಿಂಹಾಚಾರ್, ಡಾ.ಯು.ಆರ್.ಅನಂತಮೂರ್ತಿ, ಖುಷ್ವಂತ್ ಸಿಂಗ್, ಇಂದಿರಾ ಗೋಸ್ವಾಮಿ, ಎಂ.ಟಿ.ವಾಸುದೇವನ್ ನಾಯರ್ ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>