ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮ ವ್ಯಾಪ್ತಿಯ ಸಿಂಧೋಲ್ ಕ್ರಾಸ್ ಬಳಿ ಭಾನುವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ₹ 1.40 ಲಕ್ಷ ಮೌಲ್ಯದ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಆರೋಪಿ ಸಂಜೀವಕುಮಾರ ಮೇಘನಾಥ ಚವಾಣ್ ಹಾಗೂ ಇನ್ನೊಬ್ಬ ಹೊಂಡಾ ಆ್ಯಕ್ಟಿವ್ದಲ್ಲಿ ಪಾಕೆಟ್ಗಳಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದರು. ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಂಜೀವಕುಮಾರ ಚವಾಣ್ನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ಅಬಕಾರಿ ಅಧಿಕಾರಿ ಆನಂದ ಉಕ್ಕಲಿ, ರವೀಂದ್ರ ಪಾಟೀಲ, ಸುರೇಶ ಶಂಕರ, ದಿಲೀಪ್ ಸಿಂಗ್, ಸಿಬ್ಬಂದಿ ವಿಷ್ಣು, ಟೋನಿ, ಅತೀಕ್ ದಾಳಿಯಲ್ಲಿ ಭಾಗವಹಿಸಿದ್ದರು. ಅಬಕಾರಿ ಪಿಎಸ್ಐ ನರೇಂದ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ.