ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಬ್ಯಾಂಕ್ನ ಪ್ರವೇಶದ್ವಾರದ ಛಾವಣಿ ಮತ್ತು ಸಿಮೆಂಟ್ನ ನಾಮಫಲಕ ಕುಸಿದು ಒಬ್ಬ ಬಾಲಕ ಮೃತಪಟ್ಟು, ಮೂವರು ಬಾಲಕರಿಗೆ ಗಾಯಗಳಾಗಿವೆ. ಪ್ರಜ್ವಲ್ ಕೊರವ (11) ಎಂಬಾತ ಮೃತಪಟ್ಟಿದ್ದು, ದಿನೇಶ, ಚರಣ ಮತ್ತು ಆಕಾಶ ಎಂಬುವರಿಗೆ ಗಾಯಗಳಾಗಿವೆ.