<p><strong>ಬಸವಕಲ್ಯಾಣ</strong>: ತಾಲ್ಲೂಕಿನ ಮಂಠಾಳದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಬ್ಯಾಂಕ್ನ ಪ್ರವೇಶದ್ವಾರದ ಛಾವಣಿ ಮತ್ತು ಸಿಮೆಂಟ್ನ ನಾಮಫಲಕ ಕುಸಿದು ಒಬ್ಬ ಬಾಲಕ ಮೃತಪಟ್ಟು, ಮೂವರು ಬಾಲಕರಿಗೆ ಗಾಯಗಳಾಗಿವೆ. ಪ್ರಜ್ವಲ್ ಕೊರವ (11) ಎಂಬಾತ ಮೃತಪಟ್ಟಿದ್ದು, ದಿನೇಶ, ಚರಣ ಮತ್ತು ಆಕಾಶ ಎಂಬುವರಿಗೆ ಗಾಯಗಳಾಗಿವೆ.</p>.<p>‘ಪಿಕೆಪಿಎಸ್ ಬ್ಯಾಂಕ್ ಕಟ್ಟಡ 40 ವರ್ಷಗಳದಷ್ಟು ಹಳೆಯದು. ನಾಲ್ವರು ಬಾಲಕರು ಕಟ್ಟೆಯ ಮೇಲೆ ಆಟವಾಡುತ್ತಿದ್ದ ವೇಳೆ ಸಿಮೆಂಟ್ ನಾಮಫಲಕ ಕುಸಿದಿದೆ. ಗಾಯಗೊಂಡಿರುವ ಮೂವರು ಬಾಲಕರು ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕರ ಮನೆಗಳು ಸಮೀಪದಲ್ಲೇ ಇದ್ದು, ಬ್ಯಾಂಕ್ಗೆ ರಜೆ ಇದ್ದ ಕಾರಣ ಮಕ್ಕಳು ಆಡವಾಡುತ್ತಿದ್ದರು’ ಎಂದು ಮಂಠಾಳ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p>‘ನಾಮಫಲಕವಿರುವ ಸ್ಥಳದಲ್ಲಿನ ಛಾವಣಿ ಮಾತ್ರ ಕುಸಿದಿದೆ. ಕಟ್ಟಡದ ಇತರೆ ಭಾಗಕ್ಕೆ ಹಾನಿ ಆಗಿಲ್ಲ’ ಎಂದು ಬ್ಯಾಂಕ್ನ ಕಾರ್ಯದರ್ಶಿ ಶಿವಪುತ್ರಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ತಾಲ್ಲೂಕಿನ ಮಂಠಾಳದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಬ್ಯಾಂಕ್ನ ಪ್ರವೇಶದ್ವಾರದ ಛಾವಣಿ ಮತ್ತು ಸಿಮೆಂಟ್ನ ನಾಮಫಲಕ ಕುಸಿದು ಒಬ್ಬ ಬಾಲಕ ಮೃತಪಟ್ಟು, ಮೂವರು ಬಾಲಕರಿಗೆ ಗಾಯಗಳಾಗಿವೆ. ಪ್ರಜ್ವಲ್ ಕೊರವ (11) ಎಂಬಾತ ಮೃತಪಟ್ಟಿದ್ದು, ದಿನೇಶ, ಚರಣ ಮತ್ತು ಆಕಾಶ ಎಂಬುವರಿಗೆ ಗಾಯಗಳಾಗಿವೆ.</p>.<p>‘ಪಿಕೆಪಿಎಸ್ ಬ್ಯಾಂಕ್ ಕಟ್ಟಡ 40 ವರ್ಷಗಳದಷ್ಟು ಹಳೆಯದು. ನಾಲ್ವರು ಬಾಲಕರು ಕಟ್ಟೆಯ ಮೇಲೆ ಆಟವಾಡುತ್ತಿದ್ದ ವೇಳೆ ಸಿಮೆಂಟ್ ನಾಮಫಲಕ ಕುಸಿದಿದೆ. ಗಾಯಗೊಂಡಿರುವ ಮೂವರು ಬಾಲಕರು ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕರ ಮನೆಗಳು ಸಮೀಪದಲ್ಲೇ ಇದ್ದು, ಬ್ಯಾಂಕ್ಗೆ ರಜೆ ಇದ್ದ ಕಾರಣ ಮಕ್ಕಳು ಆಡವಾಡುತ್ತಿದ್ದರು’ ಎಂದು ಮಂಠಾಳ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p>‘ನಾಮಫಲಕವಿರುವ ಸ್ಥಳದಲ್ಲಿನ ಛಾವಣಿ ಮಾತ್ರ ಕುಸಿದಿದೆ. ಕಟ್ಟಡದ ಇತರೆ ಭಾಗಕ್ಕೆ ಹಾನಿ ಆಗಿಲ್ಲ’ ಎಂದು ಬ್ಯಾಂಕ್ನ ಕಾರ್ಯದರ್ಶಿ ಶಿವಪುತ್ರಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>