ಬೀದರ್: ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆದರೂ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ ಒಂದೂ ವರೆ ಟಿಎಂಸಿ ಅಡಿ ಸಹ ನೀರು ಸಂಗ್ರಹ ವಾಗಿರಲಿಲ್ಲ. ನಗರದ ಜನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಡಾಂತರ ಕಾದಿದೆ ಎನ್ನುವ ಆತಂಕದಲ್ಲೇ ಇದ್ದರು. ಆದರೆ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ ದಲ್ಲಿ 5 ಟಿಎಂಸಿ ಅಡಿ ನೀರು ಸಂಗ್ರಹವಾಗಿರುವುದು ಜನರಿಗೆ ನೆಮ್ಮದಿ ತಂದಿದೆ.