ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣ ಅಧಿಕಾರಿ ಶಾರದಾ, ಜಿಲ್ಲಾ ಸಂಯೋಜಕಿ ಗೀತಾಂಜಲಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪೂರೆ ಸ್ಥಳಕ್ಕೆ ತೆರಳಿ ಮಹಿಳೆಯನ್ನು ನಗರದ ಬಸವ ಕಾರ್ಯ ಸಮಿತಿ ಸ್ವಧಾರ ಗೃಹಕ್ಕೆ ಕರೆ ತಂದು ಉಪಚರಿಸಿದರು. ನಂತರ ಹೊಸ ಬಟ್ಟೆ ಕೊಡಿಸಿ, ಊಟೋಪಚಾರ ಮಾಡಿಸಿ ಬ್ರಿಮ್ಸ್ನ ಆಸ್ಪತ್ರೆಗೆ ಕರೆ ತಂದರು.