<p><strong>ಬೀದರ್: ನ</strong>ಕಲಿ ಏಜೆಂಟರಿಂದ ವಿಸಾ ಪಡೆದು, ಉದ್ಯೋಗ ಅರಸಿ ಮಲೇಷಿಯಾಕ್ಕೆ ತೆರಳಿ ಮೋಸ ಹೋಗಿ, ಜೈಲು ಸೇರಿದ್ದ ಜಿಲ್ಲೆಯ ಯುವಕರೊಬ್ಬರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದಾಗಿ ತವರಿಗೆ ಮರಳಿದ್ದಾರೆ.</p>.<p>ಭಾಲ್ಕಿ ತಾಲ್ಲೂಕಿನ ಸಿದ್ಧೇಶ್ವರ ಗ್ರಾಮದ ಶರಣಪ್ಪ ವೈಜಿನಾಥ ತಾಯ್ನೆಲಕ್ಕೆ ವಾಪಸ್ಸಾದವರು. ಯುವಕ ಮೋಸ ಹೋದ ವಿಷಯ ಗಮನಕ್ಕೆ ಬಂದ ಕೂಡಲೇ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ ಭಗವಂತ ಖೂಬಾ ಅವರು, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಯುವಕನನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಸ್ವದೇಶಕ್ಕೆ ಕರೆ ತಂದಿದ್ದಾರೆ.</p>.<p>ಶನಿವಾರ ನಗರದ ಸಚಿವರ ಗೃಹ ಕಚೇರಿಗೆ ಬಂದ ಯುವಕ ಹಾಗೂ ಕುಟುಂಬದ ಸದಸ್ಯರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.<br />ವಿದೇಶದಿಂದ ಕರೆ ತಂದು ನನಗೆ ಹೊಸ ಜೀವನ ನೀಡಿದ್ದೀರಿ. ನಮ್ಮ ಕುಟುಂಬ ನಿಮಗೆ ಚಿರಋಣಿಯಾಗಿದೆ ಎಂದು ಶರಣಪ್ಪ ಹೇಳಿದರು.<br />ನಮ್ಮಲ್ಲಿಯೇ ಮಾಡಲು ಬಹಳಷ್ಟು ಉದ್ಯೋಗಗಳು ಇವೆ. ಆದರೂ, ವಿದೇಶಕ್ಕೆ ಹೋಗಲು ನಿಶ್ಚಯಿಸಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ತಿಳಿದುಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು ಎಂದು ಖೂಬಾ ಸಲಹೆ ಮಾಡಿದರು.</p>.<p>ಶರಣಪ್ಪ ಅವರಂಥ ಇನ್ನೂ ಎರಡು ಪ್ರಕರಣಗಳು ತಮ್ಮ ಬಳಿ ಇವೆ. ಅವರೂ ಮಲೇಷಿಯಾ ಜೈಲಿನಲ್ಲಿದ್ದಾರೆ. ಅವರನ್ನೂ ಆದಷ್ಟು ಬೇಗ ತಾಯ್ನಾಡಿಗೆ ಕರೆ ತರಲಾಗುವುದು ಎಂದು ತಿಳಿಸಿದರು.</p>.<p>ಯುವಕನ ತಂದೆ ವೈಜಿನಾಥ, ಸಂಬಂಧಿ ವಿಜಯ ದೇಶಮುಖ ಇದ್ದರು.</p>.<p><strong>ಪಾಕಿಸ್ತಾನ್ ಸಚಿವ ಅಯೋಗ್ಯ: ಖೂಬಾ ಕಟು ಟೀಕೆ</strong></p>.<p>ಬೀದರ್: ಪಾಕಿಸ್ತಾನ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಮಾತನಾಡಲು ಅಯೋಗ್ಯ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಟುವಾಗಿ ಟೀಕಿಸಿದ್ದಾರೆ.</p>.<p>ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.</p>.<p>ಪಾಕಿಸ್ತಾನ್ ದರಿದ್ರ ದೇಶ. ಸದ್ಯದ ಆಡಳಿತದಿಂದ ಅಲ್ಲಿನ ಜನರಿಗೆ ಸರಿಯಾಗಿ ಊಟ, ಬಟ್ಟೆ ಸಿಗುತ್ತಿಲ್ಲ. ಆ ದೇಶ ಕಂಡ ಕಂಡ ದೇಶಗಳ ಮುಂದೆ ಮಂಡಿಯೂರಿ ಸಹಾಯ ಪಡೆದು, ಬದುಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.</p>.<p>ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ್ ಪ್ರಜೆಗಳು ಭಾರತದ ಧ್ವಜ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿರುವುದನ್ನು ಪಾಕಿಸ್ತಾನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವಿಶ್ವಮಟ್ಟದಲ್ಲಿ ಆ ದೇಶಕ್ಕೆ ಯಾವ ಮರ್ಯಾದೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.</p>.<p>ಭಾರತದ ಪ್ರಜೆಗಳ ಬಗ್ಗೆ ಮಾತನಾಡಲು ಯೋಗ್ಯರಲ್ಲದ ಪಾಕಿಸ್ತಾನದ ರಾಜಕಾರಣಿಗಳು, ಪ್ರಧಾನಿ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: ನ</strong>ಕಲಿ ಏಜೆಂಟರಿಂದ ವಿಸಾ ಪಡೆದು, ಉದ್ಯೋಗ ಅರಸಿ ಮಲೇಷಿಯಾಕ್ಕೆ ತೆರಳಿ ಮೋಸ ಹೋಗಿ, ಜೈಲು ಸೇರಿದ್ದ ಜಿಲ್ಲೆಯ ಯುವಕರೊಬ್ಬರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದಾಗಿ ತವರಿಗೆ ಮರಳಿದ್ದಾರೆ.</p>.<p>ಭಾಲ್ಕಿ ತಾಲ್ಲೂಕಿನ ಸಿದ್ಧೇಶ್ವರ ಗ್ರಾಮದ ಶರಣಪ್ಪ ವೈಜಿನಾಥ ತಾಯ್ನೆಲಕ್ಕೆ ವಾಪಸ್ಸಾದವರು. ಯುವಕ ಮೋಸ ಹೋದ ವಿಷಯ ಗಮನಕ್ಕೆ ಬಂದ ಕೂಡಲೇ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ ಭಗವಂತ ಖೂಬಾ ಅವರು, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಯುವಕನನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಸ್ವದೇಶಕ್ಕೆ ಕರೆ ತಂದಿದ್ದಾರೆ.</p>.<p>ಶನಿವಾರ ನಗರದ ಸಚಿವರ ಗೃಹ ಕಚೇರಿಗೆ ಬಂದ ಯುವಕ ಹಾಗೂ ಕುಟುಂಬದ ಸದಸ್ಯರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.<br />ವಿದೇಶದಿಂದ ಕರೆ ತಂದು ನನಗೆ ಹೊಸ ಜೀವನ ನೀಡಿದ್ದೀರಿ. ನಮ್ಮ ಕುಟುಂಬ ನಿಮಗೆ ಚಿರಋಣಿಯಾಗಿದೆ ಎಂದು ಶರಣಪ್ಪ ಹೇಳಿದರು.<br />ನಮ್ಮಲ್ಲಿಯೇ ಮಾಡಲು ಬಹಳಷ್ಟು ಉದ್ಯೋಗಗಳು ಇವೆ. ಆದರೂ, ವಿದೇಶಕ್ಕೆ ಹೋಗಲು ನಿಶ್ಚಯಿಸಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ತಿಳಿದುಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು ಎಂದು ಖೂಬಾ ಸಲಹೆ ಮಾಡಿದರು.</p>.<p>ಶರಣಪ್ಪ ಅವರಂಥ ಇನ್ನೂ ಎರಡು ಪ್ರಕರಣಗಳು ತಮ್ಮ ಬಳಿ ಇವೆ. ಅವರೂ ಮಲೇಷಿಯಾ ಜೈಲಿನಲ್ಲಿದ್ದಾರೆ. ಅವರನ್ನೂ ಆದಷ್ಟು ಬೇಗ ತಾಯ್ನಾಡಿಗೆ ಕರೆ ತರಲಾಗುವುದು ಎಂದು ತಿಳಿಸಿದರು.</p>.<p>ಯುವಕನ ತಂದೆ ವೈಜಿನಾಥ, ಸಂಬಂಧಿ ವಿಜಯ ದೇಶಮುಖ ಇದ್ದರು.</p>.<p><strong>ಪಾಕಿಸ್ತಾನ್ ಸಚಿವ ಅಯೋಗ್ಯ: ಖೂಬಾ ಕಟು ಟೀಕೆ</strong></p>.<p>ಬೀದರ್: ಪಾಕಿಸ್ತಾನ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಮಾತನಾಡಲು ಅಯೋಗ್ಯ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಟುವಾಗಿ ಟೀಕಿಸಿದ್ದಾರೆ.</p>.<p>ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.</p>.<p>ಪಾಕಿಸ್ತಾನ್ ದರಿದ್ರ ದೇಶ. ಸದ್ಯದ ಆಡಳಿತದಿಂದ ಅಲ್ಲಿನ ಜನರಿಗೆ ಸರಿಯಾಗಿ ಊಟ, ಬಟ್ಟೆ ಸಿಗುತ್ತಿಲ್ಲ. ಆ ದೇಶ ಕಂಡ ಕಂಡ ದೇಶಗಳ ಮುಂದೆ ಮಂಡಿಯೂರಿ ಸಹಾಯ ಪಡೆದು, ಬದುಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.</p>.<p>ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ್ ಪ್ರಜೆಗಳು ಭಾರತದ ಧ್ವಜ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿರುವುದನ್ನು ಪಾಕಿಸ್ತಾನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವಿಶ್ವಮಟ್ಟದಲ್ಲಿ ಆ ದೇಶಕ್ಕೆ ಯಾವ ಮರ್ಯಾದೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.</p>.<p>ಭಾರತದ ಪ್ರಜೆಗಳ ಬಗ್ಗೆ ಮಾತನಾಡಲು ಯೋಗ್ಯರಲ್ಲದ ಪಾಕಿಸ್ತಾನದ ರಾಜಕಾರಣಿಗಳು, ಪ್ರಧಾನಿ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>