<p><strong>ಬಸವಕಲ್ಯಾಣ (ಬೀದರ್ ಜಿಲ್ಲೆ): `</strong>ಈಚೆಗೆ ನಗರದಲ್ಲಿ ನಡೆದ ಗೋಹತ್ಯೆ ತಡೆ ಪ್ರಕರಣದಲ್ಲಿ ನಾನು ಕಾನೂನು</p><p>ಉಲ್ಲಂಘಿಸಿಲ್ಲ. ಆದರೂ ನನ್ನನ್ನು ಒಳಗೊಂಡು 9 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ'</p><p>ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.</p>.<p>ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ನಗರದ ಹಿರೇಮಠ ಓಣಿಯಲ್ಲಿನ</p><p>ಮನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಮೊಬೈಲ್ ಮೂಲಕ ಅಲ್ಲಿನ</p><p>ವ್ಯಕ್ತಿಯೊಬ್ಬರು ತಿಳಿಸಿದ್ದರಿಂದ ಸ್ಥಳಕ್ಕೆ ಹೋಗಿದ್ದೇನೆ. ಅಲ್ಲದೆ ತಕ್ಷಣದಲ್ಲಿ</p><p>ಪೊಲೀಸ್ ಇಲಾಖೆಯವರಿಗೆ ಹಾಗೂ ಪಶು ಸಂಗೋಪನಾ ಇಲಾಖೆಯವರಿಗೆ ಈ ಮಾಹಿತಿಯನ್ನು</p><p>ನೀಡಿದ್ದೇನೆ' ಎಂದರು.</p>.<p>`ಅಕ್ರಮವಾಗಿ ನಾನು ಯಾರ ಮನೆಗೂ ನುಗ್ಗಿಲ್ಲ. ಯಾರ ಅವಹೇಳನವೂ ಮಾಡಿಲ್ಲ. ಆದರೂ,</p><p>ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಸಿಂಗ್ ಅವರು ಗೃಹ ಸಚಿವರನ್ನು ಭೇಟಿಯಾಗಿ ನನ್ನ</p><p>ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗೋಹತ್ಯೆ ತಡೆ ಕಾಯ್ದೆಯು ಚಾಲ್ತಿಯಲ್ಲಿದ್ದು ಆಕಳು,</p><p>ಕರು, ಎತ್ತು ಮುಂತಾದವುಗಳ ಹತ್ಯೆಯನ್ನು ನಿಷೇಧಿಸುತ್ತದೆ. ಹತ್ಯೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.</p>.<p> ಆದ್ದರಿಂದ ನಾನು ಹತ್ಯೆ ತಡೆಗೆ ಯತ್ನಿಸಿದ್ದೇನೆ. ಮುಂದೆಯೂ ಗೋಹತ್ಯೆ ತಡೆಗೆ ಅಭಿಯಾನ</p><p>ನಡೆಸುತ್ತೇನೆ. ಯಾರ ಹೆದರಿಕೆಗೂ ಬಗ್ಗುವುದಿಲ್ಲ. ನನ್ನ ಈ ಕಾರ್ಯಕ್ಕೆ ಬೆಂಬಲಿಸುವವರ</p><p>ದೊಡ್ಡ ಪಡೆಯೇ ಇದೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ (ಬೀದರ್ ಜಿಲ್ಲೆ): `</strong>ಈಚೆಗೆ ನಗರದಲ್ಲಿ ನಡೆದ ಗೋಹತ್ಯೆ ತಡೆ ಪ್ರಕರಣದಲ್ಲಿ ನಾನು ಕಾನೂನು</p><p>ಉಲ್ಲಂಘಿಸಿಲ್ಲ. ಆದರೂ ನನ್ನನ್ನು ಒಳಗೊಂಡು 9 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ'</p><p>ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.</p>.<p>ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ನಗರದ ಹಿರೇಮಠ ಓಣಿಯಲ್ಲಿನ</p><p>ಮನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಮೊಬೈಲ್ ಮೂಲಕ ಅಲ್ಲಿನ</p><p>ವ್ಯಕ್ತಿಯೊಬ್ಬರು ತಿಳಿಸಿದ್ದರಿಂದ ಸ್ಥಳಕ್ಕೆ ಹೋಗಿದ್ದೇನೆ. ಅಲ್ಲದೆ ತಕ್ಷಣದಲ್ಲಿ</p><p>ಪೊಲೀಸ್ ಇಲಾಖೆಯವರಿಗೆ ಹಾಗೂ ಪಶು ಸಂಗೋಪನಾ ಇಲಾಖೆಯವರಿಗೆ ಈ ಮಾಹಿತಿಯನ್ನು</p><p>ನೀಡಿದ್ದೇನೆ' ಎಂದರು.</p>.<p>`ಅಕ್ರಮವಾಗಿ ನಾನು ಯಾರ ಮನೆಗೂ ನುಗ್ಗಿಲ್ಲ. ಯಾರ ಅವಹೇಳನವೂ ಮಾಡಿಲ್ಲ. ಆದರೂ,</p><p>ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಸಿಂಗ್ ಅವರು ಗೃಹ ಸಚಿವರನ್ನು ಭೇಟಿಯಾಗಿ ನನ್ನ</p><p>ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗೋಹತ್ಯೆ ತಡೆ ಕಾಯ್ದೆಯು ಚಾಲ್ತಿಯಲ್ಲಿದ್ದು ಆಕಳು,</p><p>ಕರು, ಎತ್ತು ಮುಂತಾದವುಗಳ ಹತ್ಯೆಯನ್ನು ನಿಷೇಧಿಸುತ್ತದೆ. ಹತ್ಯೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.</p>.<p> ಆದ್ದರಿಂದ ನಾನು ಹತ್ಯೆ ತಡೆಗೆ ಯತ್ನಿಸಿದ್ದೇನೆ. ಮುಂದೆಯೂ ಗೋಹತ್ಯೆ ತಡೆಗೆ ಅಭಿಯಾನ</p><p>ನಡೆಸುತ್ತೇನೆ. ಯಾರ ಹೆದರಿಕೆಗೂ ಬಗ್ಗುವುದಿಲ್ಲ. ನನ್ನ ಈ ಕಾರ್ಯಕ್ಕೆ ಬೆಂಬಲಿಸುವವರ</p><p>ದೊಡ್ಡ ಪಡೆಯೇ ಇದೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>