ಬೆಳಗಾವಿ ಜಿಲ್ಲೆಯ ಪರಸಗಡ ತಾಲ್ಲೂಕು, ಯಾದಗಿರಿ, ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಸುರಪುರ ತಾಲ್ಲೂಕಿನ ಯುವಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಬುಧವಾರ ಸಂಜೆಯೇ ಅಧಿಕ ಸಂಖ್ಯೆಯಲ್ಲಿ ಬಂದಿದ್ದ ಯುವಕರು ನಗರದ ಲಾಡ್ಜ್ಗಳಲ್ಲಿ ತಂಗಿದ್ದರು. ಕೆಲ ಯುವಕರು ಸಾಯಿ ಆದರ್ಶ ಶಾಲೆಯ ಆವರಣ, ಮೈದಾನ, ಬಸ್ ತಂಗು ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು.