<p><strong>ಭಾಲ್ಕಿ</strong>: ತಾಲ್ಲೂಕಿನ ಭಾತಂಬ್ರಾ ಗ್ರಾಮ ಸಮೀಪದ ಲಕ್ಷ್ಮೀ ಭಾಂಡೆ ಸ್ಟೋರ್ನಲ್ಲಿ ಈಚೆಗೆ ಕಳ್ಳತನ ಮಾಡಿ 10 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಭಾಂಡೆ ಸಾಮಾನುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬಂಧಿತರಿಂದ ₹3 ಲಕ್ಷ ನಗದು, 1ಲಕ್ಷ ಮೌಲ್ಯದ ಸ್ಯಾಂಟ್ರೊ ಕಾರು, 3 ಲಕ್ಷ ರೂಪಾಯಿ ಬೆಲೆಬಾಳುವ ಬೊಲೆರೊ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.</p>.<p>ಜನವರಿ 30ರ ರಾತ್ರಿ ಕಳ್ಳರು ಭಾಂಡೆ ಸ್ಟೋರ್ನ ಹಿಂಭಾಗದ ನಟ್ ಬೋಲ್ಟ್ ತೆಗೆದು ಅಂಗಡಿಯಲ್ಲಿನ ವಿವಿಧ ತಾಮ್ರ, ಹಿತ್ತಾಳೆ, ಸ್ಟೀಲ್ ಸೇರಿದಂತೆ ಇತರ ನಮೂನೆಯ ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಸಾಮಾನುಗಳನ್ನು ಕಳವು ಮಾಡಿದ್ದರು.</p>.<p>ಸಿಪಿಐ ಹನುಮರೆಡ್ಡೆಪ್ಪ, ಪಿಎಸ್ಐಗಳಾದ ಅಶೋಕ, ರಮೇಶ ನೇತೃತ್ವದ ತಂಡವು ಭಾನುವಾರ ಮಹಾರಾಷ್ಟ್ರ ರಾಜ್ಯದ ಲಾತೂರಿನ ರಫೀಕ್ (30), ನರಸಿಂಗ (30), ಪ್ರಕಾಶ (30)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>.<p>ಇಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಕಳ್ಳರ ಬಂಧನ ತಂಡದಲ್ಲಿ ಕಾನ್ಸ್ಟೆಬಲ್ಗಳಾದ ಗುರುನಾಥ, ಶಾಮರಾಯ, ಶಿವರಾಜ, ಉಮಾಕಾಂತ ದಾನಾ, ಭಗವಾನ, ರಾಜೇಂದ್ರ, ಮಹಾದೇವ ಹಿರೇಮಠ, ಜಗದೀಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ತಾಲ್ಲೂಕಿನ ಭಾತಂಬ್ರಾ ಗ್ರಾಮ ಸಮೀಪದ ಲಕ್ಷ್ಮೀ ಭಾಂಡೆ ಸ್ಟೋರ್ನಲ್ಲಿ ಈಚೆಗೆ ಕಳ್ಳತನ ಮಾಡಿ 10 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಭಾಂಡೆ ಸಾಮಾನುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬಂಧಿತರಿಂದ ₹3 ಲಕ್ಷ ನಗದು, 1ಲಕ್ಷ ಮೌಲ್ಯದ ಸ್ಯಾಂಟ್ರೊ ಕಾರು, 3 ಲಕ್ಷ ರೂಪಾಯಿ ಬೆಲೆಬಾಳುವ ಬೊಲೆರೊ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು 7 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.</p>.<p>ಜನವರಿ 30ರ ರಾತ್ರಿ ಕಳ್ಳರು ಭಾಂಡೆ ಸ್ಟೋರ್ನ ಹಿಂಭಾಗದ ನಟ್ ಬೋಲ್ಟ್ ತೆಗೆದು ಅಂಗಡಿಯಲ್ಲಿನ ವಿವಿಧ ತಾಮ್ರ, ಹಿತ್ತಾಳೆ, ಸ್ಟೀಲ್ ಸೇರಿದಂತೆ ಇತರ ನಮೂನೆಯ ಸುಮಾರು ₹10 ಲಕ್ಷ ರೂಪಾಯಿ ಮೌಲ್ಯದ ಸಾಮಾನುಗಳನ್ನು ಕಳವು ಮಾಡಿದ್ದರು.</p>.<p>ಸಿಪಿಐ ಹನುಮರೆಡ್ಡೆಪ್ಪ, ಪಿಎಸ್ಐಗಳಾದ ಅಶೋಕ, ರಮೇಶ ನೇತೃತ್ವದ ತಂಡವು ಭಾನುವಾರ ಮಹಾರಾಷ್ಟ್ರ ರಾಜ್ಯದ ಲಾತೂರಿನ ರಫೀಕ್ (30), ನರಸಿಂಗ (30), ಪ್ರಕಾಶ (30)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>.<p>ಇಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಕಳ್ಳರ ಬಂಧನ ತಂಡದಲ್ಲಿ ಕಾನ್ಸ್ಟೆಬಲ್ಗಳಾದ ಗುರುನಾಥ, ಶಾಮರಾಯ, ಶಿವರಾಜ, ಉಮಾಕಾಂತ ದಾನಾ, ಭಗವಾನ, ರಾಜೇಂದ್ರ, ಮಹಾದೇವ ಹಿರೇಮಠ, ಜಗದೀಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>