‘ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಅಂದಿನ ಅನುಭವ ಮಂಟಪದ ಕುರುಹುಗಳು ನಗರದಲ್ಲಿ ಇವೆ. ಸಂಬಂಧಿತರು ಆ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ಇನ್ನಷ್ಟು ಸಂಶೋಧನೆ, ಪರಿಶೀಲನೆ ನಡೆಸಿ ಅದರ ಜೀರ್ಣೋ ದ್ಧಾರಗೈಯಬೇಕು. ಅನೇಕ ರಾಜರ ದಾಳಿಗೆ ತುತ್ತಾಗಿ ದ್ದರೂ ಆ ಸ್ಥಳ ಇನ್ನೂ ಕೆಲ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿಯೇ ಇದೆ. ಆದರೆ ಆ ಜಾಗದ ಹೆಸರು ಬದಲಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕಾಶಿಯಲ್ಲಿನ ಕೆಲ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ಪಡೆದಂತೆ ಇಲ್ಲಿಯೂ ಆ ಕಾರ್ಯ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.