<p>ಬಸವಕಲ್ಯಾಣ: ‘ನಗರದಲ್ಲಿನ 12ನೇ ಶತಮಾನದ ಮೂಲ ಅನುಭವ ಮಂಟಪದ ಸಂರಕ್ಷಣೆ ಆಗಬೇಕು. ಬಸವಾದಿ ಶರಣರ ಕಾಲದ ಗತವೈಭವ ಮತ್ತೆ ಮರುಕಳಿಸುವಂತೆ ಪ್ರಯತ್ನಿಸಬೇಕು’ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ತಾಲ್ಲೂಕು ಸಂಚಾಲಕ ಸಾಗರ ದಂಡೋತಿ ಆಗ್ರಹಿಸಿದ್ದಾರೆ.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಅಂದಿನ ಅನುಭವ ಮಂಟಪದ ಕುರುಹುಗಳು ನಗರದಲ್ಲಿ ಇವೆ. ಸಂಬಂಧಿತರು ಆ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ಇನ್ನಷ್ಟು ಸಂಶೋಧನೆ, ಪರಿಶೀಲನೆ ನಡೆಸಿ ಅದರ ಜೀರ್ಣೋ ದ್ಧಾರಗೈಯಬೇಕು. ಅನೇಕ ರಾಜರ ದಾಳಿಗೆ ತುತ್ತಾಗಿ ದ್ದರೂ ಆ ಸ್ಥಳ ಇನ್ನೂ ಕೆಲ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿಯೇ ಇದೆ. ಆದರೆ ಆ ಜಾಗದ ಹೆಸರು ಬದಲಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕಾಶಿಯಲ್ಲಿನ ಕೆಲ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ಪಡೆದಂತೆ ಇಲ್ಲಿಯೂ ಆ ಕಾರ್ಯ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.</p>.<p>ಈ ಬಗ್ಗೆ ಅನೇಕರು ಹಲವಾರು ಸಲ ಆಗ್ರಹಿಸಿದರೂ ಸಂಬಂಧಿತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಮುಂದಾದರೂ ಹೀಗಾಗಬಾರದು’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ‘ನಗರದಲ್ಲಿನ 12ನೇ ಶತಮಾನದ ಮೂಲ ಅನುಭವ ಮಂಟಪದ ಸಂರಕ್ಷಣೆ ಆಗಬೇಕು. ಬಸವಾದಿ ಶರಣರ ಕಾಲದ ಗತವೈಭವ ಮತ್ತೆ ಮರುಕಳಿಸುವಂತೆ ಪ್ರಯತ್ನಿಸಬೇಕು’ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ತಾಲ್ಲೂಕು ಸಂಚಾಲಕ ಸಾಗರ ದಂಡೋತಿ ಆಗ್ರಹಿಸಿದ್ದಾರೆ.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಅಂದಿನ ಅನುಭವ ಮಂಟಪದ ಕುರುಹುಗಳು ನಗರದಲ್ಲಿ ಇವೆ. ಸಂಬಂಧಿತರು ಆ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ಇನ್ನಷ್ಟು ಸಂಶೋಧನೆ, ಪರಿಶೀಲನೆ ನಡೆಸಿ ಅದರ ಜೀರ್ಣೋ ದ್ಧಾರಗೈಯಬೇಕು. ಅನೇಕ ರಾಜರ ದಾಳಿಗೆ ತುತ್ತಾಗಿ ದ್ದರೂ ಆ ಸ್ಥಳ ಇನ್ನೂ ಕೆಲ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿಯೇ ಇದೆ. ಆದರೆ ಆ ಜಾಗದ ಹೆಸರು ಬದಲಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕಾಶಿಯಲ್ಲಿನ ಕೆಲ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ಪಡೆದಂತೆ ಇಲ್ಲಿಯೂ ಆ ಕಾರ್ಯ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.</p>.<p>ಈ ಬಗ್ಗೆ ಅನೇಕರು ಹಲವಾರು ಸಲ ಆಗ್ರಹಿಸಿದರೂ ಸಂಬಂಧಿತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ಮುಂದಾದರೂ ಹೀಗಾಗಬಾರದು’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>