<p><strong>ಬಸವಕಲ್ಯಾಣ:</strong> ‘ಸ್ತ್ರೀಯರ ರಕ್ಷಣೆಗಾಗಿ ಮಿಲಿಟ್ರಿ ಸಮವಸ್ತ್ರವಿರುವ ಮಹಿಳಾ ಪೊಲೀಸರ ತಂಡ ‘ಅಕ್ಕ ಪಡೆ’ಯು ತ್ವರಿತ ಕಾರ್ಯಾಚರಣೆ ನಡೆಸಿ ಸಂಕಟದಿಂದ ಪಾರು ಮಾಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯಮಟ್ಟದ ಯೋಜನಾ ಸಲಹೆಗಾರ ಶೈನಿ ಪ್ರದೀಪ ಗುಂಟಿ ಹೇಳಿದರು.</p>.<p>ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಅಕ್ಕ ಪಡೆಯ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ‘ಅಕ್ಕ ಪಡೆ’ ರಚಿಸಿದ್ದು ರಾಜ್ಯಾದ್ಯಂತ ಇದಕ್ಕೆ ಮನ್ನಣೆ ಸಿಕ್ಕಿದೆ. ಈ ಮೊದಲು ಮಹಿಳೆಯರ ಸಂರಕ್ಷಣೆಗೆ ಅನೇಕ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದರೂ ಅಕ್ಕ ಪಡೆಯ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಬೀದರ್ ನಂತರ ಬಸವಕಲ್ಯಾಣದಲ್ಲಿ ಬೋಲೆರೋ ಮಾದರಿಯ ವಾಹನ ಒದಗಿಸಲಾಗುತ್ತಿದೆ’ ಎಂದರು.</p>.<p>‘ನಗರದಲ್ಲಿ ಶಿಕ್ಷಣ ಕೇಂದ್ರಗಳು ಹೆಚ್ಚಿಗಿವೆ. ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವೂ ಇದಾಗಿದೆ. ಬಾಲ್ಯವಿವಾಹ, ವಿದ್ಯಾರ್ಥಿನಿಯರಿಗೆ ಕಾಮುಕರ ಕಾಟ, ಶಾಲಾ ಕಾಲೇಜುಗಳ ಆವರಣದಲ್ಲಿನ ರ್ಯಾಗಿಂಗ್, ತಂಬಾಕು ಮತ್ತಿತರೆ ಮಾದಕ ವಸ್ತುಗಳ ಉಪಯೋಗಕ್ಕೆ ಒತ್ತಾಯಿಸಿ ದುಶ್ಚಟ ಕಲಿಸುವುದು ಮುಂತಾದ ಸಮಸ್ಯೆಗಳನ್ನು ಈ ಪಡೆಗೆ ಹೇಳಿಕೊಳ್ಳಬಹುದು’ ಎಂದರು.</p>.<p>ಈ ಸಂದರ್ಭದಲ್ಲಿ ಶೈನಿ ಪ್ರದೀಪ ಗುಂಟಿ ಅವರು ಮಕ್ಕಳಿಗೆ ಅಕ್ಕ ಅಂದರೆ ಭರವಸೆ, ಅಕ್ಕ ಅಂದರೆ ರಕ್ಷಣೆ, ಅಕ್ಕ ಅಂದರೆ ಧೈರ್ಯ, ಅಕ್ಕ ಅಂದರೆ ಆಸರೆ ಎಂಬ ಧ್ಯೇಯ ವಾಕ್ಯವನ್ನು ಬೋಧಿಸಿದರು.</p>.<p>ಸಿಪಿಐ ಅಲಿಸಾಬ್, ಸಿಡಿಪಿಒ ಗೌತಮ ಶಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಮಣಿ ಮಠಪತಿ ಮಾತನಾಡಿದರು. ನಗರಸಭೆ ಆಯುಕ್ತ ರಾಜೀವ ಬಣಕಾರ್, ಸಬ್ ಇನಸ್ಪೇಕ್ಟರುಗಳಾದ ಚಂದ್ರಶೇಖರ ನಾರಾಯಣಪುರೆ, ಸುರೇಶ ಹಜ್ಜರಗಿ, ಸಿದ್ದೇಶ್ವರ, ಸುಜಾತಾ, ಸುವರ್ಣಾ ಮತ್ತಿತರರು ಉಪಸ್ಥಿತರಿದ್ದರು.</p>.<p><strong>ಅಕ್ಕ ಪಡೆಯಿಂದ ರಕ್ಷಣಾ ಪ್ರಾತ್ಯಕ್ಷಿಕೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ನಾಲ್ಕು ಚಕ್ರಗಳ ವಾಹನಕ್ಕೆ ಚಾಲನೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಸ್ತ್ರೀಯರ ರಕ್ಷಣೆಗಾಗಿ ಮಿಲಿಟ್ರಿ ಸಮವಸ್ತ್ರವಿರುವ ಮಹಿಳಾ ಪೊಲೀಸರ ತಂಡ ‘ಅಕ್ಕ ಪಡೆ’ಯು ತ್ವರಿತ ಕಾರ್ಯಾಚರಣೆ ನಡೆಸಿ ಸಂಕಟದಿಂದ ಪಾರು ಮಾಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯಮಟ್ಟದ ಯೋಜನಾ ಸಲಹೆಗಾರ ಶೈನಿ ಪ್ರದೀಪ ಗುಂಟಿ ಹೇಳಿದರು.</p>.<p>ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಅಕ್ಕ ಪಡೆಯ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ‘ಅಕ್ಕ ಪಡೆ’ ರಚಿಸಿದ್ದು ರಾಜ್ಯಾದ್ಯಂತ ಇದಕ್ಕೆ ಮನ್ನಣೆ ಸಿಕ್ಕಿದೆ. ಈ ಮೊದಲು ಮಹಿಳೆಯರ ಸಂರಕ್ಷಣೆಗೆ ಅನೇಕ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದರೂ ಅಕ್ಕ ಪಡೆಯ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಬೀದರ್ ನಂತರ ಬಸವಕಲ್ಯಾಣದಲ್ಲಿ ಬೋಲೆರೋ ಮಾದರಿಯ ವಾಹನ ಒದಗಿಸಲಾಗುತ್ತಿದೆ’ ಎಂದರು.</p>.<p>‘ನಗರದಲ್ಲಿ ಶಿಕ್ಷಣ ಕೇಂದ್ರಗಳು ಹೆಚ್ಚಿಗಿವೆ. ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವೂ ಇದಾಗಿದೆ. ಬಾಲ್ಯವಿವಾಹ, ವಿದ್ಯಾರ್ಥಿನಿಯರಿಗೆ ಕಾಮುಕರ ಕಾಟ, ಶಾಲಾ ಕಾಲೇಜುಗಳ ಆವರಣದಲ್ಲಿನ ರ್ಯಾಗಿಂಗ್, ತಂಬಾಕು ಮತ್ತಿತರೆ ಮಾದಕ ವಸ್ತುಗಳ ಉಪಯೋಗಕ್ಕೆ ಒತ್ತಾಯಿಸಿ ದುಶ್ಚಟ ಕಲಿಸುವುದು ಮುಂತಾದ ಸಮಸ್ಯೆಗಳನ್ನು ಈ ಪಡೆಗೆ ಹೇಳಿಕೊಳ್ಳಬಹುದು’ ಎಂದರು.</p>.<p>ಈ ಸಂದರ್ಭದಲ್ಲಿ ಶೈನಿ ಪ್ರದೀಪ ಗುಂಟಿ ಅವರು ಮಕ್ಕಳಿಗೆ ಅಕ್ಕ ಅಂದರೆ ಭರವಸೆ, ಅಕ್ಕ ಅಂದರೆ ರಕ್ಷಣೆ, ಅಕ್ಕ ಅಂದರೆ ಧೈರ್ಯ, ಅಕ್ಕ ಅಂದರೆ ಆಸರೆ ಎಂಬ ಧ್ಯೇಯ ವಾಕ್ಯವನ್ನು ಬೋಧಿಸಿದರು.</p>.<p>ಸಿಪಿಐ ಅಲಿಸಾಬ್, ಸಿಡಿಪಿಒ ಗೌತಮ ಶಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಮಣಿ ಮಠಪತಿ ಮಾತನಾಡಿದರು. ನಗರಸಭೆ ಆಯುಕ್ತ ರಾಜೀವ ಬಣಕಾರ್, ಸಬ್ ಇನಸ್ಪೇಕ್ಟರುಗಳಾದ ಚಂದ್ರಶೇಖರ ನಾರಾಯಣಪುರೆ, ಸುರೇಶ ಹಜ್ಜರಗಿ, ಸಿದ್ದೇಶ್ವರ, ಸುಜಾತಾ, ಸುವರ್ಣಾ ಮತ್ತಿತರರು ಉಪಸ್ಥಿತರಿದ್ದರು.</p>.<p><strong>ಅಕ್ಕ ಪಡೆಯಿಂದ ರಕ್ಷಣಾ ಪ್ರಾತ್ಯಕ್ಷಿಕೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ನಾಲ್ಕು ಚಕ್ರಗಳ ವಾಹನಕ್ಕೆ ಚಾಲನೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>