ಕೊರೊನಾ ವೈರಸ್ ತಡೆಗಾಗಿ ಲಾಕ್ಡೌನ್ ಮಾಡಲಾಗಿದೆ. ಗಸ್ತಿನಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸುನೀಲಕುಮಾರ ಅವರು, ಹರಳಯ್ಯ ವೃತ್ತದ ಹತ್ತಿರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಟಾಟಾ ಫಾರ್ಚುನರ್ ಗಾಜಿನ ಮೇಲೆ ‘ಪೊಲೀಸ್’ ಎಂದು ಬರೆದಿರುವುದು ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ಸಾರಿಗೆ ಅಧಿಕಾರಿ ಅಗತ್ಯ ವಸ್ತು ಸಾಗಣೆ ವಾಹನ ಎಂದು ನೀಡಿದ ಪ್ರಮಾಣಪತ್ರ ಅಂಟಿಸಿರುವುದು ಕಂಡು ಬಂದಿದೆ.