ಮುಖ್ಯ ರಸ್ತೆ, ಅಡತ್ ಬಜಾರ್, ಅಂಬೇಡ್ಕರ್ ವೃತ್ತ ಮುಂತಾದೆಡೆ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥರ ತಲೆಗೂದಲು ಉದ್ದುದ್ದ ಬೆಳೆದಿದ್ದವು. ಬಟ್ಟೆ, ಮೈಗೆ ಮಣ್ಣು ಹತ್ತಿ ಹೊಲಸಾಗಿತ್ತು. ಸಮೀಪ ನಿಂತರೆ ದುರ್ವಾಸನೆ ಬರುತ್ತಿತ್ತು. ಅಂಥವರನ್ನು ಸಿಬ್ಬಂದಿಯವರು ಹಿಡಿದು ಸ್ವಚ್ಛಗೊಳಿಸುತ್ತಿರುವುದನ್ನು ಜನರು ನೆರೆದು ಸೊಜಿಗದಿಂದ ನೋಡಿದರು.