'ಬೆಡ್ ರೂಮ್ವರೆಗೆ ರಾಜಕೀಯ ಬರಬಾರದು'
ರಾಜಕೀಯ ಎನ್ನುವುದು ಒಂದು ಹಂತದ ವರೆಗೆ ಇರಬೇಕು. ಆದರೆ, ಮನೆ ತನಕ, ಬೆಡ್ ರೂಮ್ವರೆಗೆ ರಾಜಕೀಯ ಬರಬಾರದು ಎಂದು ಪ್ರಭು ಚವಾಣ್ ಹೇಳಿದರು. 2014-15ರಿಂದ ಒಂದಿಲ್ಲೊಂದು ಕಾರಣದಿಂದ ನನ್ನ ಎಲ್ಲ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಬಹಳ ನೊಂದಿದ್ದೇನೆ. ನಾನು ಎಂದೂ ಶಾಸಕನಂತೆ ನಡೆದುಕೊಂಡಿಲ್ಲ, ಜನಸೇವಕನಾಗಿ ಜನರ ನಡುವೆ ಇದ್ದೇನೆ. ಔರಾದ್ ಕ್ಷೇತ್ರದ ಜನ ಸಹ ಸತತವಾಗಿ ನನ್ನ ಕೈಹಿಡಿಯುತ್ತ ಬಂದಿದ್ದಾರೆ ಎಂದರು. ನಿಮ್ಮ ಹಾಗೂ ಭಗವಂತ ಖೂಬಾ ನಡುವಿನ ದ್ವೇಷಕ್ಕೆ ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಇದನ್ನು ಖೂಬಾ ಅವರೇ ಹೇಳಬೇಕು ಎಂದು ತಿಳಿಸಿದರು.