ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಭೀಮಣ್ಣ ಖಂಡ್ರೆ: ಹೋರಾಟದ ಕೆಚ್ಚು, ಸ್ವಾಭಿಮಾನದ ಕಿಚ್ಚು...

Published : 16 ಜನವರಿ 2026, 18:29 IST
Last Updated : 16 ಜನವರಿ 2026, 18:29 IST
ಫಾಲೋ ಮಾಡಿ
Comments
ರಾಜ್ಯಮಟ್ಟದ ದ್ವಿತೀಯ ರೈತ ಸಮ್ಮೇಳನದಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರೊಂದಿಗೆ ಭೀಮಣ್ಣ ಖಂಡ್ರೆ ಚರ್ಚೆಯಲ್ಲಿ ತೊಡಗಿರುವುದು

ರಾಜ್ಯಮಟ್ಟದ ದ್ವಿತೀಯ ರೈತ ಸಮ್ಮೇಳನದಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರೊಂದಿಗೆ ಭೀಮಣ್ಣ ಖಂಡ್ರೆ ಚರ್ಚೆಯಲ್ಲಿ ತೊಡಗಿರುವುದು

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಅವರ ಪರ ಪ್ರಚಾರ ಕೈಗೊಂಡಿದ್ದ ಭೀಮಣ್ಣ ಖಂಡ್ರೆ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಅವರ ಪರ ಪ್ರಚಾರ ಕೈಗೊಂಡಿದ್ದ ಭೀಮಣ್ಣ ಖಂಡ್ರೆ

ಭೀಮಣ್ಣ ಖಂಡ್ರೆಯವರು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಕಟ್ಟಾ ಶಿಷ್ಯರಾಗಿದ್ದರು. ಗುರುವಿನ ನೆಚ್ಚಿನ ಶಿಷ್ಯರಾಗಿ ಸಮಾಜೋಧಾರ್ಮಿಕ ಕೆಲಸ ಮಾಡಿದ್ದರು.
–ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷ, ಬಸವಕಲ್ಯಾಣ ಅನುಭವ ಮಂಟಪ
ಭೀಮಣ್ಣ ಖಂಡ್ರೆಯವರು ಲಿಂಗಾಯತ ಸಮಾಜ ಹಾಗೂ ಈ ನಾಡಿಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಅವರು ಭೌತಿಕ ಇಲ್ಲವಾದರೂ ಅವರ ಕೆಲಸದಿಂದ ಸದಾ ಜೀವಂತವಾಗಿರುತ್ತಾರೆ
–ಗುರುಬಸವ ಪಟ್ಟದ್ದೇವರು, ಪೀಠಾಧಿಪತಿ, ಭಾಲ್ಕಿ ಹಿರೇಮಠ ಸಂಸ್ಥಾನ
ನಾಲ್ಕು ಭಾಷೆಗಳ ಮೇಲೆ ಹಿಡಿತ
ಭಾಲ್ಕಿ ಹಿರೇಮಠದಿಂದ ಕನ್ನಡ ಶಿಕ್ಷಣ, ಶರಣತ್ವದ ದೀಕ್ಷೆ ಪಡೆದಿದ್ದ ಭೀಮಣ್ಣ ಖಂಡ್ರೆ ಅವರು, ಉರ್ದು, ಪಾರ್ಸಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಅರಿತಿದ್ದರು. ಬಿಎ ಎಲ್‌ಎಲ್‌ಬಿ ಪದವಿ ಪೂರೈಸಿದ್ದ ಅವರು ಕೆಲಕಾಲ ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ರೈತ ಚಳವಳಿ, ರಾಜಕೀಯ, ಸಹಕಾರ ರಂಗಕ್ಕೆ ಪದಾರ್ಪಣೆ ಮಾಡಿದ ನಂತರ ವಕೀಲಿ ವೃತ್ತಿಯಿಂದ ದೂರ ಉಳಿದಿದ್ದರು. ಆದರೆ, ಕಾನೂನು ವಿಷಯದಲ್ಲಿ ಪಾರಂಗತರಾಗಿದ್ದರು.
ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ
ವೀರಶೈವ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿದ್ದವರು ಭೀಮಣ್ಣ ಖಂಡ್ರೆ ಕೂಡ ಒಬ್ಬರು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ನಿಯೋಗ ತೆಗೆದುಕೊಂಡು ಹೋಗಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಸವ ಪರಂಪರೆಯ ವಿರಕ್ತ ಮಠಾಧೀಶರು ಹಾಗೂ ಪಂಚಾಚಾರ್ಯರ ನಡುವೆ ಸಮನ್ವಯ ಸಾಧಿಸಿ, ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ಹೋರಾಟದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರು.
ಭೀಮಣ್ಣ ಖಂಡ್ರೆಯವರು ಅವರ ಕೆಲಸಗಳ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿದ್ದಾರೆ. ನಾಡು ನುಡಿಗಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ.
–ಶಿವಾನಂದ ಸ್ವಾಮೀಜಿ, ಪೀಠಾಧಿಪತಿ, ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರು
ಭೀಮಣ್ಣ ಖಂಡ್ರೆ ಹಾಗೂ ಅವರ ಕುಟುಂಬದ ಕೊಡುಗೆ ಈ ನಾಡಿಗೆ ಬಹಳ ದೊಡ್ಡದಿದೆ. ಅವರ ಋಣ ಸಮಾಜ ಎಂದಿಗೂ ಮರೆಯಲಾರದು.
–ತಡೋಳಾ ರಾಜೇಶ್ವರ ಶಿವಾಚಾರ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT