<p><strong>ಬಸವಕಲ್ಯಾಣ</strong>: ‘ಸಕಲರ ಕಲ್ಯಾಣವೇ ಧರ್ಮದ ಧ್ಯೇಯವಾಗಿದೆ. ಪ್ರತಿಯೊಬ್ಬರೂ ಧರ್ಮ ಸಂಸ್ಕಾರ ಪಡೆಯುವುದು ಅತ್ಯಂತ ಅಗತ್ಯ’ ಎಂದು ಉಪನ್ಯಾಸಕಿ ಭುವನೇಶ್ವರಿ ಶ್ರೀವಾಸ್ತವ ಹೇಳಿದರು.</p>.<p>ನಗರದ ತ್ರಿಪುರಾಂತ ಗವಿಮಠದಲ್ಲಿ ಶುಕ್ರವಾರ ನಡೆದ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದಿನ ಒತ್ತಡದ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಲ್ಪ ಕಾಲದಲ್ಲಿಯೇ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಎತ್ತಿದ ಕೈ ಎನಿಸಿಕೊಂಡಿರುವುದು ಸಂತಸ ತಂದಿದೆ’ ಎಂದರು.</p>.<p>ತಾಲ್ಲೂಕು ಟೋಕರಿ ಕೋಲಿ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಹೊಸಮನಿ ಮಾತನಾಡಿ, ‘ಮೊಬೈಲ್ ಹಾಗೂ ಆಧುನಿಕ ಸೌಕರ್ಯಗಳ ಮಧ್ಯೆ ಮುಳುಗಿರುವ ಜೀವನದಲ್ಲಿ ತೃಪ್ತಿ ಸಿಗುವಂತಾಗಲು ಶರಣರ, ಸಂತರ, ಸತ್ಪುರುಷರ ತತ್ವ ಸಿದ್ಧಾಂತ ಪಾಲನೆ ಅಗತ್ಯ’ ಎಂದು ಹೇಳಿದರು.</p>.<p>ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಿಕ್ಷಕಿ ಸರಸ್ವತಿ ಬೆಂಬಳಗೆ, ಸವಿತಾ ಸ್ವಾಮಿ, ಅಕ್ಷತಾ ಮಠಪತಿ, ಶರಣಬಸಪ್ಪ ಆಲಗೂಡೆ ಮಾತನಾಡಿದರು. ಸುರೇಖಾ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.</p>.<p><strong>ವಿಶೇಷ ಸನ್ಮಾನ</strong>: ನಂತರ ಹಮ್ಮಿಕೊಂಡಿದ್ದ 9ನೇ ವಿಶೇಷ ಉಪನ್ಯಾಸದಲ್ಲಿ ಹಿರಿಯರಾದ ಸುಭದ್ರಾಬಾಯಿ ವೀರಯ್ಯ ಸ್ವಾಮಿ ಅವರನ್ನು ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸನ್ಮಾನಿಸಿದರು.</p><p>ಪ್ರೊ.ರುದ್ರೇಶ್ವರ ಗೋರಟಾ, ಮುಖಂಡರಾದ ಅಮರ ಬಡದಾಳೆ, ಲೋಕೇಶ ಮೋಳಕೆರೆ, ಶರಣಬಸಪ್ಪ ಅಲಗೂಡೆ, ಕಲ್ಪನಾ ಶೀಲವಂತ ಮಾತನಾಡಿದರು. ಶ್ರೀಶೈಲ್ ವಾತಡೆ, ಮಲ್ಲಿಕಾರ್ಜುನ ಆಲಗೂಡೆ ಉಪಸ್ಥಿತರಿದ್ದರು. ಬೆಳದಿಂಗಳ ಸಹಭೋಜನ ಸಹ ಆಯೋಜಿಸಲಾಗಿತ್ತು. ಭಕ್ತರು ಮನೆಗಳಿಂದ ಊಟ ತೆಗೆದುಕೊಂಡು ಬಂದು ಸಾಮೂಹಿಕವಾಗಿ ಭೋಜನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಸಕಲರ ಕಲ್ಯಾಣವೇ ಧರ್ಮದ ಧ್ಯೇಯವಾಗಿದೆ. ಪ್ರತಿಯೊಬ್ಬರೂ ಧರ್ಮ ಸಂಸ್ಕಾರ ಪಡೆಯುವುದು ಅತ್ಯಂತ ಅಗತ್ಯ’ ಎಂದು ಉಪನ್ಯಾಸಕಿ ಭುವನೇಶ್ವರಿ ಶ್ರೀವಾಸ್ತವ ಹೇಳಿದರು.</p>.<p>ನಗರದ ತ್ರಿಪುರಾಂತ ಗವಿಮಠದಲ್ಲಿ ಶುಕ್ರವಾರ ನಡೆದ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದಿನ ಒತ್ತಡದ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಲ್ಪ ಕಾಲದಲ್ಲಿಯೇ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಎತ್ತಿದ ಕೈ ಎನಿಸಿಕೊಂಡಿರುವುದು ಸಂತಸ ತಂದಿದೆ’ ಎಂದರು.</p>.<p>ತಾಲ್ಲೂಕು ಟೋಕರಿ ಕೋಲಿ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಹೊಸಮನಿ ಮಾತನಾಡಿ, ‘ಮೊಬೈಲ್ ಹಾಗೂ ಆಧುನಿಕ ಸೌಕರ್ಯಗಳ ಮಧ್ಯೆ ಮುಳುಗಿರುವ ಜೀವನದಲ್ಲಿ ತೃಪ್ತಿ ಸಿಗುವಂತಾಗಲು ಶರಣರ, ಸಂತರ, ಸತ್ಪುರುಷರ ತತ್ವ ಸಿದ್ಧಾಂತ ಪಾಲನೆ ಅಗತ್ಯ’ ಎಂದು ಹೇಳಿದರು.</p>.<p>ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಿಕ್ಷಕಿ ಸರಸ್ವತಿ ಬೆಂಬಳಗೆ, ಸವಿತಾ ಸ್ವಾಮಿ, ಅಕ್ಷತಾ ಮಠಪತಿ, ಶರಣಬಸಪ್ಪ ಆಲಗೂಡೆ ಮಾತನಾಡಿದರು. ಸುರೇಖಾ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.</p>.<p><strong>ವಿಶೇಷ ಸನ್ಮಾನ</strong>: ನಂತರ ಹಮ್ಮಿಕೊಂಡಿದ್ದ 9ನೇ ವಿಶೇಷ ಉಪನ್ಯಾಸದಲ್ಲಿ ಹಿರಿಯರಾದ ಸುಭದ್ರಾಬಾಯಿ ವೀರಯ್ಯ ಸ್ವಾಮಿ ಅವರನ್ನು ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸನ್ಮಾನಿಸಿದರು.</p><p>ಪ್ರೊ.ರುದ್ರೇಶ್ವರ ಗೋರಟಾ, ಮುಖಂಡರಾದ ಅಮರ ಬಡದಾಳೆ, ಲೋಕೇಶ ಮೋಳಕೆರೆ, ಶರಣಬಸಪ್ಪ ಅಲಗೂಡೆ, ಕಲ್ಪನಾ ಶೀಲವಂತ ಮಾತನಾಡಿದರು. ಶ್ರೀಶೈಲ್ ವಾತಡೆ, ಮಲ್ಲಿಕಾರ್ಜುನ ಆಲಗೂಡೆ ಉಪಸ್ಥಿತರಿದ್ದರು. ಬೆಳದಿಂಗಳ ಸಹಭೋಜನ ಸಹ ಆಯೋಜಿಸಲಾಗಿತ್ತು. ಭಕ್ತರು ಮನೆಗಳಿಂದ ಊಟ ತೆಗೆದುಕೊಂಡು ಬಂದು ಸಾಮೂಹಿಕವಾಗಿ ಭೋಜನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>