<p><strong>ಬೀದರ್</strong>: ಇಲ್ಲಿಯ ನಾಗಸೇನ ನಗರದ ನಾಗಸೇನ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆಯನ್ನು ನಾಗನಾಥ ನೀಡೋದಕರ ನೇತೃತ್ವದಲ್ಲಿ ನಡೆಯಿತು.</p>.<p>ಬುದ್ಧ ಪೂರ್ಣಿಮೆಯ ಹಿನ್ನೆಲೆ ಭಗವಾನ ಬುದ್ಧನ ಹೊಸ ಮೂರ್ತಿ ಅನಾವರಣ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ಬಂದ ಭಕ್ತರಿಗೆ ಹಣ್ಣು ವಿತರಣೆ ಮಾಡಲಾಯಿತು.</p>.<p>ನಾಗನಾಥ ನೀಡೋದಕರ ಮಾತನಾಡಿ,‘ಬುದ್ಧನೆಂದರೆ ಬೆಳಕು, ಬುದ್ದನೆಂದರೆ ಭರವಸೆ ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.</p>.<p>ಸಾಗರ್ ದಾಂಡೇಕರ್ ಧರ್ಮ ಮತ್ತು ಭಗವಾನ ಗೌತಮ ಬುದ್ಧರ ಕುರಿತು ಉಪನ್ಯಾಸ ನೀಡಿದರು.</p>.<p>ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಸಾಗರ್ ಸಂಭು, ಡಾ.ಲೋಕೇಶ್, ಡಾ.ಸುಜಾತ ಹೊಸಮನಿ, ಮುಖ್ಯ ಶಿಕ್ಷಕರಾದ ಭಾಗ್ಯರತಿ, ಮಹೇಶ್ ನೀಡೋದಕರ, ಸತ್ಯಜೀತ್ ನೀಡೋದಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಇಲ್ಲಿಯ ನಾಗಸೇನ ನಗರದ ನಾಗಸೇನ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆಯನ್ನು ನಾಗನಾಥ ನೀಡೋದಕರ ನೇತೃತ್ವದಲ್ಲಿ ನಡೆಯಿತು.</p>.<p>ಬುದ್ಧ ಪೂರ್ಣಿಮೆಯ ಹಿನ್ನೆಲೆ ಭಗವಾನ ಬುದ್ಧನ ಹೊಸ ಮೂರ್ತಿ ಅನಾವರಣ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ಬಂದ ಭಕ್ತರಿಗೆ ಹಣ್ಣು ವಿತರಣೆ ಮಾಡಲಾಯಿತು.</p>.<p>ನಾಗನಾಥ ನೀಡೋದಕರ ಮಾತನಾಡಿ,‘ಬುದ್ಧನೆಂದರೆ ಬೆಳಕು, ಬುದ್ದನೆಂದರೆ ಭರವಸೆ ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.</p>.<p>ಸಾಗರ್ ದಾಂಡೇಕರ್ ಧರ್ಮ ಮತ್ತು ಭಗವಾನ ಗೌತಮ ಬುದ್ಧರ ಕುರಿತು ಉಪನ್ಯಾಸ ನೀಡಿದರು.</p>.<p>ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಸಾಗರ್ ಸಂಭು, ಡಾ.ಲೋಕೇಶ್, ಡಾ.ಸುಜಾತ ಹೊಸಮನಿ, ಮುಖ್ಯ ಶಿಕ್ಷಕರಾದ ಭಾಗ್ಯರತಿ, ಮಹೇಶ್ ನೀಡೋದಕರ, ಸತ್ಯಜೀತ್ ನೀಡೋದಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>