<p><strong>ಬೀದರ್</strong>: ಸಿ.ಬಿ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ವಿವಿಧ ಐಟಿಐಗಳ 49 ಅಭ್ಯರ್ಥಿಗಳು ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾಗಿದ್ದಾರೆ.</p>.<p>ಕೋವಿಡ್ ಕಾರಣ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಆಯೋಜಿಸಿದ್ದ ಆನ್ಲೈನ್ ಸಂದರ್ಶನದಲ್ಲಿ ಕಾರ್ಖಾನೆ ಪ್ರತಿನಿಧಿಗಳು, ಔರಾದ್ ಐಟಿಐನ 7, ಬೀದರ್ ಐಟಿಐನ 26, ಬಸವೇಶ್ವರ ಅಂಗವಿಕಲರ ಐಟಿಐನ 15 ಹಾಗೂ ಕರ್ನಾಟಕ ಐಟಿಐನ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರು.</p>.<p>ಆಯ್ಕೆಯಾದವರಿಗೆ ಮಾಸಿಕ ₹ 9,550 ವಿದ್ಯಾರ್ಥಿ ವೇತನ ಸಿಗಲಿದೆ. ಜುಲೈ 19ಕ್ಕೆ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಹಾಜರಾಗಬೇಕಾಗಲಿದೆ ಎಂದು ಬಿ.ಇ.ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ನಂಜುಂಡಸ್ವಾಮಿ ತಿಳಿಸಿದರು.</p>.<p>ಶಿವಶಂಕರ ಟೋಕರೆ ಅವರು ಕ್ಯಾಂಪಸ್ ಸಂದರ್ಶನ ಆಯೋಜಿಸಿ ಐಟಿಐ ಅಭ್ಯರ್ಥಿಗಳಿಗೆ ನೆರವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.</p>.<p>ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ, ಪ್ರಾಚಾರ್ಯ ಶಿವಕುಮಾರ ಪಾಟೀಲ, ಸಂಜೀವರೆಡ್ಡಿ, ತುಕಾರಾಮ ನಿರ್ಣಾಕರ, ಬಸವರಾಜ ಡಿಗ್ಗೆ ಇದ್ದರು.</p>.<p>ಯುಸೂಫ್ಮಿಯ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಸಿ.ಬಿ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ವಿವಿಧ ಐಟಿಐಗಳ 49 ಅಭ್ಯರ್ಥಿಗಳು ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾಗಿದ್ದಾರೆ.</p>.<p>ಕೋವಿಡ್ ಕಾರಣ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಆಯೋಜಿಸಿದ್ದ ಆನ್ಲೈನ್ ಸಂದರ್ಶನದಲ್ಲಿ ಕಾರ್ಖಾನೆ ಪ್ರತಿನಿಧಿಗಳು, ಔರಾದ್ ಐಟಿಐನ 7, ಬೀದರ್ ಐಟಿಐನ 26, ಬಸವೇಶ್ವರ ಅಂಗವಿಕಲರ ಐಟಿಐನ 15 ಹಾಗೂ ಕರ್ನಾಟಕ ಐಟಿಐನ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರು.</p>.<p>ಆಯ್ಕೆಯಾದವರಿಗೆ ಮಾಸಿಕ ₹ 9,550 ವಿದ್ಯಾರ್ಥಿ ವೇತನ ಸಿಗಲಿದೆ. ಜುಲೈ 19ಕ್ಕೆ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಹಾಜರಾಗಬೇಕಾಗಲಿದೆ ಎಂದು ಬಿ.ಇ.ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ನಂಜುಂಡಸ್ವಾಮಿ ತಿಳಿಸಿದರು.</p>.<p>ಶಿವಶಂಕರ ಟೋಕರೆ ಅವರು ಕ್ಯಾಂಪಸ್ ಸಂದರ್ಶನ ಆಯೋಜಿಸಿ ಐಟಿಐ ಅಭ್ಯರ್ಥಿಗಳಿಗೆ ನೆರವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.</p>.<p>ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ, ಪ್ರಾಚಾರ್ಯ ಶಿವಕುಮಾರ ಪಾಟೀಲ, ಸಂಜೀವರೆಡ್ಡಿ, ತುಕಾರಾಮ ನಿರ್ಣಾಕರ, ಬಸವರಾಜ ಡಿಗ್ಗೆ ಇದ್ದರು.</p>.<p>ಯುಸೂಫ್ಮಿಯ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>