ಬೀದರ್: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘವು ಮಾರ್ಚ್ 6ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಂಗೀತ, ಸಾಹಿತ್ಯ ಮತ್ತು ನೃತ್ಯೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ಹೆಬ್ಬಾಳೆ ಅವರನ್ನು ಆಯ್ಕೆಮಾಡಲಾಗಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು.
ಸಂಘದ ಗೌರವಾಧ್ಯಕ್ಷ ಪ್ರೊ. ದೇವೇಂದ್ರ ಕಮಲ್, ಅಧ್ಯಕ್ಷ ಪ್ರೊ.ಎಸ್.ವಿ. ಕಲ್ಮಠ, ಕೋಶಾಧ್ಯಕ್ಷ ಪ್ರೊ. ಬಿ.ಎಸ್. ಬಿರಾದಾರ, ರಾಜೇಂದ್ರಸಿಂಗ್ ಪವಾರ್, ವಿ.ಎಂ. ಡಾಕುಳಗಿ, ಲಕ್ಷ್ಮಣರಾವ್ ಆಚಾರ್ಯ, ರಮೇಶ ಕೊಳಾರ, ವೀರಭದ್ರಪ್ಪ ಉಪ್ಪಿನ್, ಮಹಾರುದ್ರ ಡಾಕುಳಗಿ ಇದ್ದರು.